ಬೆಂಗಳೂರಿನ ಮಾವನ ಮನೆಗೆಂದು ಹೋದಾತ ತಲುಪಿದ್ದು ತೆಲಂಗಾಣಕ್ಕೆ!
Team Udayavani, Sep 11, 2018, 1:44 PM IST
ತೆಕ್ಕಟ್ಟೆ: ಸ್ನೇಹಿತರ ಜತೆಗಿನ ವಾಗ್ವಾದ ಕಾರಣದಿಂದ ಆ.31 ರಂದು ಮನೆಯಿಂದ ನಾಪತ್ತೆಯಾಗಿದ್ದ ಮನೆ ಕುಂದಾಪುರ ತಾಲೂಕಿನ ಮಾರ್ಕೋಡಿನ ಯುವಕ ಒಂಬತ್ತು ದಿನಗಳ ಬಳಿಕ ಹೈದರಾಬಾದ್ನಲ್ಲಿಪತ್ತೆಯಾಗಿದ್ದಾರೆ.
ಪ್ರಕರಣದ ವಿವರ
ಆಕಾಶ್ ಯಾನೆ ಮಂಜುನಾಥ (17) ಕೋಟೇಶ್ವರ ಮಾರ್ಕೋಡಿನ ತನ್ನ ನಿವಾಸದಿಂದ ಆ.31ರಂದು ನಾಪತ್ತೆಯಾಗಿದ್ಧ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮನೆಯಿಂದ ಹೊರಡುವ ಸಂದರ್ಭದಲ್ಲಿ ಅವನಲ್ಲಿ ಮೊಬೈಲ್ ಇರುವ ಬಗ್ಗೆ ಮಾಹಿತಿ ಪಡೆದ ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್. ಅವರ ನಿರ್ದೇಶನದಂತೆ ಪೊಲೀಸ್ ಅಪರಾಧ ವಿಭಾಗದ ಸಿಬಂದಿ ವರ್ಗದ ಸಚಿನ್ ಶೆಟ್ಟಿ ಮಲ್ಯಾಡಿ ಹಾಗೂ ಹರೀಶ್ ಎಚ್. ಸಿ. ಅವರು ಮೊಬೈಲ್ ಸಂಖ್ಯೆಯ ಜಾಡು ಹಿಡಿದಾಗ ರೈಲಿನಲ್ಲಿ ಪ್ರಯಾಣಿಸುತ್ತಿರುವ ಮಾಹಿತಿ ಸಿಕ್ಕಿ ತ್ತು. ಅನಂತರ ಮೊಬೈಲ್ ತೆಲಂಗಾಣದಲ್ಲಿರುವ ಬಗ್ಗೆ ಮಾಹಿತಿ ದೊರೆತಿತ್ತು.
ಜೇಬಲ್ಲಿದ್ದುದು 50 ರೂ.!
ಈ ನಡುವೆ ಬೆಂಗಳೂರಿನಲ್ಲಿರುವ ಮಾವನ ಮನೆಗೆಂದು ಮೂಡ್ಲಕಟ್ಟೆ ನಿಲ್ದಾಣದಿಂದ ರೈಲು ಏರಿದ್ದ ಆಕಾಶ್ ನಿದ್ದೆಗೆ ಜಾರಿದ್ದ. ಬೆಳಗ್ಗೆದ್ದು ನೋಡುವಾಗ ತೆಲಂಗಾಣ ರೈಲು ನಿಲ್ದಾಣವನ್ನು ತಲುಪಿದ್ದ. ತನ್ನಲ್ಲಿದ್ದ ರೂ.50 ಕೂಡ ಖರ್ಚಾಗಿದ್ದು, ಏನು ಮಾಡಬೇಕೆಂದು ತೋಚದೆ ನಿಲ್ದಾಣದಲ್ಲಿಯೇ ಊಟ ತಿಂಡಿ ಇಲ್ಲದೆ ಮೂರು ದಿನಗಳನ್ನು ಕಳೆದಿದ್ದ. ಸಂಕಷ್ಟದಲ್ಲಿದ್ದ ಈತ ಕನ್ನಡದವ ಎಂದು ತಿಳಿದು ಬಿಹಾರ ಮೂಲದ ವ್ಯಕ್ತಿಯೊಬ್ಬರು ಹೈದರಾಬಾದ್ನಲ್ಲಿರುವ ಕುಂದಾಪುರ ಮೂಲದ ನೇರಂಬಳ್ಳಿ ರಾಘವೇಂದ್ರ ರಾವ್ ಅವರ ಹೋಟೆಲ್ ಬಳಿ ಕರೆದೊಯ್ದು ಬಿಟ್ಟಿದ್ದು, ಅಲ್ಲಿಂದ ಊರಿಗೆ ಕರೆ ತರಲಾಯಿತು. ಈತನ ಪತ್ತೆ ಕಾರ್ಯದಲ್ಲಿ ಪೊಲೀಸ್ ಅಪರಾಧ ದಳದ ಸಚಿನ್ ಶೆಟ್ಟಿ ಮಲ್ಯಾಡಿ ಹಾಗೂ ಹರೀಶ್ ಎಚ್. ಸಿ., ಸ್ಥಳೀಯರಾದ ಮಾರ್ಕೋಡು ಉದಯ ಕುಮಾರ್ ಶೆಟ್ಟಿ, ಸುರೇಶ್, ರಾಮಚಂದ್ರ ಮತ್ತಿತರರು ಶ್ರಮಿಸಿದ್ದರು.
ಮಾನವೀಯತೆ ಮೆರೆದ ಉದ್ಯಮಿ
ರಾಘವೇಂದ್ರ ರಾವ್ ಅವರು ತನ್ನೂರಿನಿಂದ ದಿಕ್ಕು ತಪ್ಪಿ ಬಂದ ಆಕಾಶ್ಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದರು. ಬಳಿಕ ಕೋಟೇಶ್ವರದ ಮಾರ್ಕೋಡು ಮೂಲದವರನ್ನು ಸಂಪರ್ಕಿಸಿ ತಿಳಿಸಿದ್ದಾರೆ. ಅನಂತರ ಆತನನ್ನು ಊರಿಗೆ ಕರೆ ತರಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ
“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ
Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ
Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ
Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ