ಚೋರಾಡಿ-ಹಾಲಾಡಿ ರಸ್ತೆ ಸಂಪರ್ಕ ಕಡಿತದ ಭೀತಿ: ಆತಂಕದಲ್ಲಿ ಗ್ರಾಮಸ್ಥರು
Team Udayavani, Sep 28, 2018, 6:00 AM IST
ಹಾಲಾಡಿ: ಸೂಕ್ತ ಸಾರಿಗೆ ಸೌಕರ್ಯವಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಚೋರಾಡಿ ಗ್ರಾಮಸ್ಥರಿಗೆ ಈಗಿರುವ ಸಂಪರ್ಕ ತಪ್ಪುವ ಭೀತಿ ಎದುರಾಗಿದೆ. ಹಾಲಾಡಿಗೆ ಸಂಪರ್ಕ ಕಲ್ಪಿಸುವ ಮುದೂರಿ ತಿರುವಿನಲ್ಲಿ ರಸ್ತೆ ಬದಿಯಲ್ಲಿ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿದೆ.
ಹಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಚೋರಾಡಿಗೆ ಉತ್ತಮವಾದ ಡಾಮರು ರಸ್ತೆಯಿದ್ದರೂ ಈ ವರೆಗೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ಅದರೊಂದಿಗೆ ಮುದೂರಿ ತಿರುವಿನಲ್ಲಿ ರಸ್ತೆಯ ಬದಿ ಜುಲೈ- ಆಗಸ್ಟ್ನಲ್ಲಿ ಸುರಿದ ಭಾರೀ ಮಳೆಗೆ ಕುಸಿದಿದೆ. ಈಗ ಮಳೆ ಕಡಿಮೆಯಿದ್ದು, ಇದನ್ನು ಕೂಡಲೇ ದುರಸ್ತಿ ಪಡಿಸದಿದ್ದರೆ ಮತ್ತಷ್ಟು ಕುಸಿಯುವುದಲ್ಲದೆ, ಸಂಪರ್ಕವೇ ಕಡಿತಗೊಳ್ಳುವ ಸಂಭವವಿದೆ. ಹಾಲಾಡಿಯಿಂದ ಚೋರಾಡಿ ಮೂಲಕವಾಗಿ ವಂಡಾರುಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಸಾಗಿದರೆ, ಚೇರ್ಕಿ, ಮುದೂರಿ, ಬಾಬಿನಾಡಿ, ಗೋರಾಜೆ, ಕಾಸಾಡಿ ಮೊದಲಾದ ಪ್ರದೇಶಗಳಿಗೂ ಸಂಚರಿಸಬಹುದು.
ಅಪಾಯಕಾರಿ ತಿರುವು
ಮುದೂರಿಯ ಈ ತಿರುವು ಅಪಾಯಕಾರಿಯಾಗಿದೆ. ಚೋರಾಡಿಯ ಜನರಿಗೆ ಕುಂದಾಪುರ, ಉಡುಪಿ, ಬೈಂದೂರು, ಆಗುಂಬೆ, ಸಾಗರ ಕಡೆಗೆ ತೆರಳಬೇಕಾದರೆ ಹಾಲಾಡಿ ಮಾರ್ಗವಾಗಿಯೇ ಹೋಗಬೇಕು. ಆದರೆ ಮುದೂರಿನಲ್ಲಿ ರಸ್ತೆ ಕುಸಿದಿರುವುದರಿಂದ ಸಮಸ್ಯೆ ಎದುರಾಗಿದ್ದು, ಕೂಡಲೇ ಸರಿಪಡಿಸದಿದ್ದರೆ, ಮತ್ತಷ್ಟು ಕುಸಿಯುವ ಸಾಧ್ಯತೆಯೂ ಇದ್ದು, ಸಂಚಾರ ವ್ಯವಸ್ಥೆಯೇ ಕಡಿತಗೊಳ್ಳುವ ಆತಂಕ ಈ ಭಾಗದ ಜನರದ್ದು.
ಎಚ್ಚರಿಕೆ ಫಲಕ ಅಳವಡಿಕೆ
ವಾಹನ ಸವಾರರು ಜಾಗರೂಕತೆಯಿಂದ ಸಂಚರಿಸಲು “ಅಪಾಯ – ರಸ್ತೆ ಬದಿ ಕುಸಿದಿದೆ’ ಎನ್ನುವ ಎಚ್ಚರಿಕೆ ಫಲಕಗಳನ್ನು ಎರಡೂ ಬದಿಯಲ್ಲಿಯೂ ಹಾಕಲಾಗಿದೆ.
ಸಂಪರ್ಕ ರಸ್ತೆ
ಹಾಲಾಡಿಯಿಂದ ಮಂದಾರ್ತಿಗೂ ಸಂಪರ್ಕ ಕಲ್ಪಿಸುವ ಹತ್ತಿರದ ಮಾರ್ಗ ಇದಾಗಿದೆ. ಈ ಮಾರ್ಗವಾಗಿ ಹಾಲಾಡಿಯಿಂದ ಚೋರಾಡಿಗೆ 6 ಕಿ.ಮೀ. ಆದರೆ, ವಂಡಾರಿಗೆ 7 ಕಿ.ಮೀ. ಇದ್ದರೆ, ಮಂದಾರ್ತಿಗೆ 15 ಕಿ.ಮೀ. ದೂರವಾಗಲಿದೆ. ಅದಲ್ಲದೆ ಉಡುಪಿ ಹಾಗೂ ಕುಂದಾಪುರ ತಾಲೂಕುಗಳೆರಡನ್ನು ಬೆಸೆಯುವ ಒಂದು ಮಾರ್ಗವು ಇದಾಗಿದೆ.
ಹೆಚ್ಚುವರಿ ಅನುದಾನಕ್ಕೆ ಬೇಡಿಕೆ
ಜಿ.ಪಂ.ನಿಂದ ಬಂದ 3 ಲಕ್ಷ ರೂ. ಅನ್ನು ಈಗಾಗಲೇ ಹಾಲಾಡಿ ಗ್ರಾ.ಪಂ.ಗೆ ನೀಡಿದ್ದು, ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ. ಕಡಿಮೆ ಅನುದಾನ ಇರುವುದರಿಂದ ಈ ರಸ್ತೆ ದುರಸ್ತಿಗೆ ಶಾಸಕರಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದು, ಅವರು ಮುಖ್ಯಮಂತ್ರಿ ನಿಧಿಯಿಂದ ಒದಗಿಸಲಾಗುವುದು ತಿಳಿಸಿದ್ದಾರೆ.
– ಸುಪ್ರೀತಾ ಉದಯ ಕುಲಾಲ್, ಜಿ.ಪಂ. ಸದಸ್ಯರು
ದುರಸ್ತಿ ಮಾಡಲಿ
ಇದು ಜಿ.ಪಂ. ರಸ್ತೆಯಾಗಿದ್ದು, ಹಾಲಾಡಿ ಗ್ರಾ.ಪಂ.ನಿಂದ ಈಗಾಗಲೇ ಈ ರಸ್ತೆಯ ದುರಸ್ತಿಗೆ ನಿರ್ಣಯ ಮಾಡಿ ಕಳುಹಿಸಲಾಗಿದೆ. ಶಾಸಕರ ಗಮನಕ್ಕೂ ಬಂದಿದೆ. ಈಗಾಗಲೇ ಘನ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ರಸ್ತೆ ಕಡಿತಗೊಂಡರೆ ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ಸಾವಿರಾರು ಮಂದಿಗೆ ತೊಂದರೆಯಾಗಲಿದೆ. ಕೂಡಲೇ ದುರಸ್ತಿ ಮಾಡಲಿ.
– ಅಶೋಕ್ ಶೆಟ್ಟಿ ಚೋರಾಡಿ,ಸ್ಥಳೀಯ ಗ್ರಾ.ಪಂ. ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ