ಹೆಂಗವಳ್ಳಿ : ಮನೆಗೆ ಸಿಡಿಲು ಬಡಿದು ಹಾನಿ; ಮಹಿಳೆ ಆಸ್ಪತ್ರೆಗೆ
Team Udayavani, Oct 16, 2018, 9:54 AM IST
ಸಿದ್ದಾಪುರ: ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ಇರಿಗೆ ಮೋಹನ ನಾಯ್ಕ ಅವರ ಮನೆಗೆ ಸೋಮವಾರ ಸಿಡಿಲು ಬಡಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸಿಡಿಲಿನ ಆಫಾತಕ್ಕೆ ಸಿಲುಕಿದ ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೋಹನ್ ನಾಯ್ಕ ಹಾಗೂ ಅವರ ಮಗಳು ಜ್ಯೋತಿ ಮನೆಯಲ್ಲಿದ್ದ ಸಂದರ್ಭ ಸಿಡಿಲು ಬಡಿದಿದೆ. ಜ್ಯೋತಿ (20) ಅವರು ಸಿಡಿಲಿನ ಆಘಾತದಿಂದ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೋಹನ್ ನಾಯ್ಕ ಅವರ ಕಿವಿಗೂ ಹಾನಿಯಾಗಿದೆ.
ಮನೆಯ ಮುಂಭಾಗದ ತೆಂಗಿನ ಮರ ಹಾಗೂ ವಿದ್ಯುತ್ ಕಂಬಕ್ಕೆ ಬಡಿದ ಸಿಡಿಲು ಮುಂಭಾಗದ ಗೋಡೆಗೆ ಎರಗಿದ ಪರಿಣಾಮ ಗೋಡೆ ತೂತಾಗಿದೆ. ಅಡುಗೆ ಕೋಣೆ ಮತ್ತು ಪಕ್ಕದಲ್ಲಿರುವ ಕೋಣೆಯ ಗೋಡೆಯನ್ನು ಕೊರೆದುಕೊಂಡು ಹೊರಗೆ ಹೋಗಿದೆ. ಅಡುಗೆ ಮನೆಯ ಎಲ್ಲ ಸಾಮಗ್ರಿಗಳು ಹಾನಿಗೀಡಾಗಿವೆ.
ಮನೆಯ ಮೇಲ್ಛಾವಣಿ, ಹಿಂಭಾಗ ಹಾಗೂ ಬಲ ಭಾಗದ ಸಿಮೆಂಟ್ ಶೀಟಿನ ತಗಡಿನ ಮಾಡು ಜಖಂಗೊಂಡಿದೆ. ವಿದ್ಯುತ್ ಉಪಕರಣಗಳು ಹಾನಿಗೀಡಾಗಿವೆ. ವಿದ್ಯುತ್ ಕಂಬದಿಂದ ಮನೆಗೆ ಅಳವಡಿಸಿದ ಸರ್ವಿಸ್ ವಯರ್, ಮೀಟರ್ ಬೋರ್ಡ್, ಸ್ವಿಚ್ ಬೋರ್ಡ್, ಒಳ ಭಾಗದ ವಯರಿಂಗ್ ಸಂಪೂರ್ಣ ಸುಟ್ಟುಹೋಗಿದೆ. ಮೀಟರ್ ಬೋರ್ಡ್ ಮನೆಯಿಂದ 10 ಮೀಟರ್ ದೂರಕ್ಕೆ ಹಾರಿ ಬಿದ್ದಿದೆ. ಸೋಲಾರ್ ವ್ಯವಸ್ಥೆಯೂ ಹಾನಿಗೀಡಾಗಿದೆ.
ಆಸ್ಪತ್ರೆಗೆ ದಾಖಲು
ಮೋಹನ ನಾಯ್ಕ ಅವರು ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ವಾಸವಾಗಿದ್ದು, ಸಿಡಿಲು ಬಡಿಯುವ ಸಂದರ್ಭ ತಂದೆ ಮತ್ತು ಮಗಳು ಜ್ಯೋತಿ ಮಾತ್ರ ಮನೆಯಲ್ಲಿದ್ದರು. ಉಳಿದ ಮೂವರು ಹೊರಗಡೆ ಕೆಲಸಕ್ಕೆ ಹೋಗಿದ್ದರು. ಜ್ಯೋತಿ ಅಡುಗೆ ಮನೆಯ ಪಕ್ಕದಲ್ಲಿರುವ ಒಂದು ಕೋಣೆಯಲ್ಲಿ ಟೈಲರಿಂಗ್ ಮಾಡುತ್ತಿದ್ದರು. ಮುಂಭಾಗದ ಗೋಡೆಯ ಮೂಲಕ ಒಳ ಪ್ರವೇಶಿಸಿದ ಸಿಡಿಲು ಜ್ಯೋತಿ ಅವರಿದ್ದ ಕೋಣೆಯ ಮೂಲಕ ಹೊರ ಹೋಗಿದ್ದು ಅವರು ಆಘಾತಕ್ಕೊಳಗಾಗಿದ್ದಾರೆ. ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊರಗಿನ ಜಗಲಿಯಲ್ಲಿ ಕುಳಿತಿದ್ದ ಮೋಹನ ನಾಯ್ಕ ಕೂಡ ಆಘಾತಕ್ಕೆ ಒಳಗಾಗಿದ್ದಾರೆ. ಘಟನ ಸ್ಥಳಕ್ಕೆ ಹೆಂಗವಳ್ಳಿ ಗ್ರಾ.ಪಂ. ಸದಸ್ಯ ವಸುಂಧರ ಹೆಗ್ಡೆ, ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕ, ಕಾರ್ಯದರ್ಶಿ ಅಶೋಕ್ ಕುಮಾರ ಶೆಟ್ಟಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಗ್ರಾ.ಪಂ. ತುರ್ತು ಕ್ರಮ
ಸಿಡಿಲಿನಿಂದ ಮನೆಯ ಛಾವಣಿ ಸಂಪೂರ್ಣ ಹಾನಿಗೀಡಾಗಿರುವುದರಿಂದ ಸ್ಥಳೀಯ ಗ್ರಾ.ಪಂ. ವತಿಯಿಂದ ತುರ್ತಾಗಿ ಸಿಮೆಂಟ್ ಶೀಟ್ ತರಿಸಿ ಹಾಕಿಸಿಕೊಟ್ಟಿದ್ದಾರೆ. ಜ್ಯೋತಿ ಅವರು ಚಿಕಿತ್ಸೆ ಪಡೆಯುತ್ತಿರುವುದರಿಂದ ಪರಿಹಾರಕ್ಕಾಗಿ ಕಂದಾಯ ಇಲಾಖೆಗೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ