ಬಸ್ರೂರು ಮೂರುಕೈ: ಲೆವೆಲ್‌ ಕ್ರಾಸಿಂಗ್‌ ಅವಕಾಶ ಕೊಡಿ


Team Udayavani, Oct 23, 2018, 6:10 AM IST

2210kdlm10ph1.jpg

ಕುಂದಾಪುರ: ಬಸ್ರೂರು ಮೂರುಕೈಯಲ್ಲಿ ಮಾಡುತ್ತಿರುವ ಅಂಡರ್‌ಪಾಸ್‌ನ ಅಗಲ ಹಾಗೂ ಎತ್ತರ ಹೆಚ್ಚಿಸಬೇಕು. ಇಲ್ಲದಿದ್ದರೆ ಅಂಡರ್‌ಪಾಸ್‌ ರದ್ದು ಮಾಡಿ ಲೆವೆಲ್‌ ಕ್ರಾಸಿಂಗ್‌ ಅವಕಾಶ ಕೊಡಬೇಕು ಎಂದು ಎಂಜಿನಿಯರ್ಸ್‌ ಅಸೋಸಿಯೇಶನ್‌ನವರು ಹಾಗೂ ಸ್ಥಳೀಯರು  ಆಗ್ರಹಿಸಿದ್ದಾರೆ.

ಸೋಮವಾರ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಅವರ ಸಲಹೆ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್‌ ವಿಜಯಕುಮಾರ್‌ ಅವರು ಆಗಮಿಸಿದ್ದರು. ಗುತ್ತಿಗೆದಾರ ಸಂಸ್ಥೆ ನವಯುಗ ಕಂಪೆನಿಯ ಪ್ರತಿನಿಧಿಗಳಾದ ರಾಘವೇಂದ್ರ , ಶಂಕರ್‌ ಅವರಿದ್ದರು. 

ನಾಗರಿಕ ಸಮಿತಿಯ ಕಿಶೋರ್‌ ಕುಮಾರ್‌ ಅವರು, ಮಲ್ಟಿ ಎಕ್ಸೆಲ್‌ ಬಸ್ಸುಗಳು, ಕೆಎಸ್‌ಆರ್‌ಟಿಸಿ ಬಸ್ಸುಗಳು, ಬುಲೆಟ್‌ ಟ್ಯಾಂಕರ್‌ಗಳು ಶಿವಮೊಗ್ಗ ಹೆದ್ದಾರಿ ಸಂಪರ್ಕಿಸಲು ಈ ಅಂಡರ್‌ಪಾಸ್‌ ಮೂಲಕವೇ ಹೋಗಬೇಕಾಗುತ್ತದೆ. ಅಂಡರ್‌ಪಾಸ್‌ನ ಅಗಲ ಕಡಿಮೆಯಿದ್ದರೆ ದೊಡ್ಡ ವಾಹನಗಳು ತಿರುಗುವುದಿಲ್ಲ ಎಂದರು.

ರದ್ದು ಮಾಡಿ
ಪ್ರಸ್ತುತ ವಿನ್ಯಾಸದ ಪ್ರಕಾರ 7 ಮೀ. ಅಗಲದ ರಸ್ತೆ, ಎರಡು ಕಡೆ ತಲಾ 1.5 ಮೀ. ಅಗಲದ ಪಾದಚಾರಿ ರಸ್ತೆಯಿದೆ. ಇದನ್ನು 15 ಮೀ. ಮಾಡಬೇಕು, 12 ಮೀ. ವಾಹನ ಹೋಗಲು, 3 ಮೀ. ಪಾದಚಾರಿಗೆ ಎನ್ನುವುದು ಎಂಜಿನಿಯರ್ಸ್‌ ಎಸೋಸಿಯೇಶನ್‌ನ ಅಧ್ಯಕ್ಷ ಬಿ.ಎಂ. ಗುರುರಾಜ್‌ ರಾವ್‌ ತಂಡದವರ ಬೇಡಿಕೆ. ಎಂಜಿನಿಯರ್‌ ನರೇಂದ್ರ ಶೆಟ್ಟಿ, ಕುಂದಾಪುರ ಭಾಗದಲ್ಲಿ ಆಗುವ ಅಗ್ನಿ ಅನಾಹುತಗಳಿಗೆ ಅಗ್ನಿಶಾಮಕ ವಾಹನ ಬರದಂತಾಗುತ್ತದೆ. ಅಗ್ನಿಶಾಮಕ ಠಾಣೆ ಕೂಡಾ ಬಸೂÅರು ರಸ್ತೆಯಲ್ಲಿಯೇ ಇರುವುದು ಎಂದು ಗಮನಕ್ಕೆ ತಂದರು. 

ಎಂಜಿನಿಯರ್‌ ಕೌಶಿಕ್‌ ಯಡಿಯಾಳ್‌, ಶಿರಾಡಿ ಹಾಗೂ ಚಾರ್ಮಾಡಿ ಘಾಟಿ ಸಂಚಾರ ನಿರ್ಬಂಧ ವಿಧಿಸಿದಾಗ ಘನ ವಾಹನಗಳ ಸಂಚಾರಕ್ಕೆ ಈ ರಸ್ತೆ ಆವಶ್ಯಕವಾಗಿದ್ದು  ಅಂಡರ್‌ಪಾಸ್‌ ಗಾತ್ರ ಕಿರಿದಾದರೆ ಶಿವಮೊಗ್ಗ ಹಾಗೂ ಕುಂದಾಪುರ ಸಂಪರ್ಕವೇ ಕಡಿತವಾಗುವ ಭೀತಿಯಿದೆ. ಆದ್ದರಿಂದ ಗಾತ್ರದಲ್ಲಿ ವ್ಯತ್ಯಾಸ ಮಾಡಲಾಗದಿದ್ದರೆ ಅಂಡರ್‌ಪಾಸ್‌ ರದ್ದು ಮಾಡಿ, ಅಂಬಲಪಾಡಿಯಲ್ಲಿ ನೀಡಿದಂತೆ ಲೆವೆಲ್‌ ಕ್ರಾಸಿಂಗ್‌ ಕೊಡಿ ಎಂದರು.

ಪ್ರಯೋಜನ ಶೂನ್ಯ
ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಅವರು ಯೋಜನಾ ನಿರ್ದೇಶಕರ ಬಳಿ ಮಾತನಾಡಿ, ಎಂಆರ್‌ಪಿಎಲ್‌ ಸೇರಿದಂತೆ ಬೇರೆ ಬೇರೆ ಕೈಗಾರಿಕೆಗಳಿಗೆ ಸೇರಿದ ಘನ ವಾಹನಗಳು ಕುಡಾ ಈ ಮಾರ್ಗದ ಮೂಲಕ ಚಲಿಸುತ್ತವೆ. ಕೇವಲ ಒಂದೆರಡು ವರ್ಷದ ವಾಹನಗಳ ಓಡಾಟದ ಅಂದಾಜಿನ ಮೇರೆಗೆ ಇಂತಹ ರಚನೆಗಳನ್ನು ಮಾಡುವುದು ಸರಿಯಲ್ಲ. ಭವಿಷ್ಯದ ಸಂಚಾರದ ಒತ್ತಡವನ್ನು ಗಮನಿಸಿವುದು ಕೂಡಾ ಅಗತ್ಯ. ಈಗಾಗಲೇ ಕೊಟೆಶ್ವರ ಹಾಗೂ ಬ್ರಹ್ಮಾವರದಲ್ಲಿ ನಿರ್ಮಾಣ ಮಾಡಿದ ಅಂಡರ್‌ಪಾಸ್‌ಗಳು ಸಾರ್ವಜನಿಕ ಉಪಯೋಗಕ್ಕೆ ಇಲ್ಲದಂತಾಗಿದೆ. ಅದರ ಮೇಲ್ಭಾಗದಲ್ಲಿ ವಾಹನ ಸಂಚರಿಸಿದರೂ ಸ್ಥಳೀಯರಿಗೆ ಉಪಯೋಗಕ್ಕೆ ದೊರೆಯದಂತಾಗಿದೆ ಎಂದರು. 

ಮಾತಿನ ಚಕಮಕಿ
ಒಂದು ಹಂತದಲ್ಲಿ ನವಯುಗ ಸಂಸ್ಥೆಯವರಿಗೂ ಸ್ಥಳೀಯರಿಗೂ ಮಾತಿನ ಚಕಮಕಿ ನಡೆಯಿತು. ಊರವರ ಎಲ್ಲ ಬೇಡಿಕೆಗೆ ನವಯುಗ ಸಂಸ್ಥೆ ಅಸಾಧ್ಯ ಎಂದೇ ತಲೆಯಾಡಿಸುತ್ತಿದ್ದ ಕಾರಣ ಜನ ಸಹನೆ ಕಳೆದುಕೊಳ್ಳಲಾರಂಭಿಸಿದರು. ಸಂಸದೆ ಶೋಭಾ, ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಪ್ರಿಯಾಂಕಾ ಬಂದು ಹೇಳಿದರೂ ನವಯುಗ ಸಂಸ್ಥೆ ತನ್ನದೇ ಹಠ ಹಿಡಿಯುತ್ತಿದೆ ಎಂದರು. ಆಗ ಜಯಪ್ರಕಾಶ್‌ ಹೆಗ್ಡೆ ಅವರು ನೀವು ಜನರಿಗಾಗಿ ಕೆಲಸ ಮಾಡುತ್ತಿರುವುದು ಎನ್ನುವುದು ಗಮನದಲ್ಲಿರಲಿ ಎಂದರು.

ಪುರಸಭೆ ಸದಸ್ಯ ಗಿರೀಶ್‌ ಎಚ್‌., ಎಂಜಿನಿಯರ್ ಅಸೋಸಿಯೇಶನ್‌ ಅಧ್ಯಕ್ಷ ಬಿ.ಎಂ. ಗುರುರಾಜ ರಾವ್‌, ಅರ್ಕಿಟೆಕ್ಟರ್‌ ಇಕ್ಬಾಲ್‌, ಚೇತನ್‌ ಹೆಗ್ಡೆ, ರಮೇಶ್‌ ಆಚಾರ್‌, ಸತೀಶ್‌, ಕೌಶಿಕ್‌ ಯಡಿಯಾಳ್‌, ಅರುಣ್‌ ಶೆಟ್ಟಿ, ನಾಗರಿಕ ಸಮಿತಿಯ ಕಿಶೋರ್‌ ಕುಮಾರ್‌, ನರೇಂದ್ರ ಶೆಟ್ಟಿ ಉಪಸ್ಥಿತರಿದ್ದರು. 

ಹೊಸದು ಕಷ್ಟ
ಹೊಸದಾಗಿ ಯಾವುದೇ ಮಾರ್ಪಾಡು ಮಾಡಿದರೂ ಅದು ದಿಲ್ಲಿಗೆ ಹೋಗಿ ಅಲ್ಲಿ ಒಪ್ಪಿಗೆ ಪಡೆದಾಗಬೇಕು. ಆಗ ತಡವಾಗುತ್ತದೆ. ಜತೆಗೆ ಈಗಾಗಲೇ ಇಲ್ಲಿ ಅನುಮೋದಿತ ನಕ್ಷೆಗೆ ಕಾಮಗಾರಿ ಆರಂಭಿಸಿದ್ದು ಕಾಮಗಾರಿಯ ನಕ್ಷೆ ಬದಲಿಸಿದರೆ ಅವರಿಗೆ ಪರಿಹಾರ ಕೊಡಬೇಕಾಗುತ್ತದೆ. ಹೆದ್ದಾರಿ ಸಂಬಂಧಿಸಿದ ನಕ್ಷೆಗಳಲ್ಲಿ ಒಂದೊಂದು ಕಡೆಗೆ ಒಂದೊಂದು ಮಾದರಿಯ ಅಂಡರ್‌ಪಾಸ್‌, ಫ್ಲೈ ಓವರ್‌ ಎಂದು ವಿನ್ಯಾಸ ಕಷ್ಟ. ಆದ್ದರಿಂದ ಈಗ ಇರುವ ವಿನ್ಯಾಸದ ಬದಲಿಸುವುದು ಕಷ್ಟ ಎಂದು ಸ್ಯಾಮ್ಸನ್‌ ವಿಜಯಕುಮಾರ್‌ ಹೇಳಿದರು.

ಬದಲಿಗೆ ಒಪ್ಪಿಗೆ
ಈಗ ಇರುವ 7.5 ಮೀ. ಅಗಲದ ಜತೆಗೆ 3 ಮೀ. ಅಗಲದ ಪಾದಚಾರಿ ರಸ್ತೆಯನ್ನು ಸೇರಿಸಿ ಪಾದಚಾರಿಗಳಿಗೆ ಬದಲಿ ವ್ಯವಸ್ಥೆ ಮಾಡಿಕೊಡಿ ಎಂದು ಜಯಪ್ರಕಾಶ್‌ ಹೆಗ್ಡೆ ಅವರು ಮಾಡಿದ ಮನವಿಗೆ ವಿಜಯಕುಮಾರ್‌ ಒಪ್ಪಿದರು. ಎತ್ತರವನ್ನು ಅರ್ಧ ಮೀ. ಹೆಚ್ಚಿಸಲು ತಾತ್ವಿಕ ಒಪ್ಪಿಗೆ ದೊರಕಿದ್ದು ಈ ಸಂಬಂಧ ಪತ್ರವ್ಯವಹಾರ ನಡೆಸಲು ಒಪ್ಪಿದರು. ಆದರೆ ಸ್ಥಳೀಯರು ಇದನ್ನು ಒಪ್ಪುತ್ತಿಲ್ಲ. ಬದಲಿಗೆ 12 ಮೀ. ಅಗಲವೇ ಬೇಕು, 5.5ಮೀ. ಎತ್ತರವೇ ಬೇಕು, ಸಾಧ್ಯವಾಗ ದಿದ್ದರೆ ಲೆವೆಲ್‌ಕ್ರಾಸಿಂಗ್‌ ಮಾಡಿ ಎಂದು ಒತ್ತಾಯಿಸಿದ್ದಾರೆ. 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

ಕನ್ನಡಕುದ್ರು: ತೆಂಗಿನ ಮರಗಳಿಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳ ತಂಡ ಭೇಟಿ; ಪರಿಶೀಲನೆ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

“ಆಟ’ಕ್ಕೆ ಅಂತಾರಾಷ್ಟ್ರೀಯ ದಿನ ನಿಗದಿಗೆ ಹಕ್ಕೊತ್ತಾಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.