ಇನ್ನೂ ಹಾಕಿಲ್ಲ ವಾರಾಹಿ ಗೇಟು: ಕುಡಿಯುವ ನೀರಿಗೆ ಸಂಕಷ್ಟ !


Team Udayavani, Oct 30, 2018, 2:25 AM IST

varahi-water-29-10.jpg

ಕುಂದಾಪುರ: ಭೀಕರ ಮಳೆಗೆ ತೆರೆದ ವಾರಾಹಿ ನದಿಯ ಉಪನದಿ ಜಂಬೂ ನದಿಯ ಗೇಟು ಮುಚ್ಚದಿದ್ದ ಕಾರಣ ಕುಂದಾಪುರ ಪುರಸಭೆಗೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಸಂಗ್ರಹವಾಗದಿದ್ದರೆ ಈ ಬಾರಿಯ ಬೇಸಗೆ ಕಡು ಕಷ್ಟಕಾಲ ತರಲಿದೆ. ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ.

ತೆರೆದ ಗೇಟು
ಆಗಸ್ಟ್‌ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಜಂಬೂ ನದಿ ತುಂಬಿ ಹರಿದಿತ್ತು. ಆ.14ರಂದು ವಾರಾಹಿ ಜಲವಿದ್ಯುತ್‌ ಯೋಜನೆ ವತಿಯಿಂದ ಗೇಟು ತೆರೆಯುವ ಪ್ರಕಟನೆ ನೀಡಲಾಗಿತ್ತು. ತದನಂತರದ ದಿನಗಳಲ್ಲಿ ಗೇಟು ಮುಚ್ಚದ ಕಾರಣ ನೀರು ಸರಾಗವಾಗಿ ಹರಿದು ಸಮುದ್ರ ಸೇರುತ್ತಿತ್ತು. ರವಿವಾರ ರಾತ್ರಿ ಪುರಸಭೆಗೆ ಕುಡಿಯುವ ನೀರಿಗೆ ಬರುವ ನೀರಿನ ಪ್ರಮಾಣ ಕಡಿಮೆಯಾದಾಗ ಅವಾಂತರ ಗಮನಕ್ಕೆ ಬಂದಿದೆ.

ಏನು ಸಮಸ್ಯೆ
ಹೊಳೆಯಲ್ಲಿ ನೀರು ಖಾಲಿಯಾದರೆ ಐದು ಪಂಚಾಯತ್‌ ಹಾಗೂ ಕುಂದಾಪುರ ಪುರಸಭೆ ವ್ಯಾಪ್ತಿಯ ಜನರಿಗೆೆ ಕುಡಿಯುವ ನೀರಿಗೆ ಇರುವ ಏಕೈಕ ಆಧಾರ ಕೈ ಕೊಟ್ಟಂತಾಗುತ್ತದೆ. ಈಗಲೇ ನೀರಿನ ಹರಿವು ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಬರಬಹುದು. 

ಸಮುದ್ರದ ಉಬ್ಬರ ಇಳಿತದ ಸಂದರ್ಭ ಈ ಪ್ರದೇಶಕ್ಕೆ ಹಿನ್ನೀರು ಹೋಗುತ್ತದೆ. ಆಗ ಕೂಡಾ ಗೇಟಿನ ಆವಶ್ಯಕತೆ ಇರುತ್ತದೆ. ಉಪ್ಪುನೀರು ನದಿಯೊಳಗೆ ಮರಳಿ ಹರಿದಾಗ ಗೇಟು ಹಾಕಿರದಿದ್ದರೆ ಕುಡಿಯುವ ನೀರಿನ ಜತೆ ಉಪ್ಪು ನೀರು ಸೇರಿ ಸಮಸ್ಯೆ ಬಿಗಡಾಯಿಸುತ್ತದೆ. ಹಾಗೇನೂ ಸಮಸ್ಯೆಯಾಗಲು ಬಿಡುವುದಿಲ್ಲ. ಕುಡಿಯುವ ನೀರಿನ ಅಗತ್ಯವಿದೆ ಎಂದ ಕೂಡಲೇ ನಮ್ಮಲ್ಲಿ ನೀರಿನ ಲಭ್ಯತೆಯಿದ್ದು ತತ್‌ಕ್ಷಣ ಗೇಟು ಹಾಕಿ ಸಹಕರಿಸುತ್ತೇವೆ ಎಂದು ವಾರಾಹಿ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ್‌ ಹೆಗಡೆ ‘ಉದಯವಾಣಿ’ಗೆ ತಿಳಿಸಿದ್ದಾರೆ.

ಕುಂದಾಪುರಕ್ಕೆ ನೀರು
ಜಂಬೂ ನದಿಯಿಂದ ಜಪ್ತಿ ಎಂಬಲ್ಲಿ ನೀರು ಸಂಗ್ರಹಿಸಿ ಶುದ್ಧೀಕರಿಸಿ ಪುರಸಭೆ ನಾಗರಿಕರಿಗೆ ಕುಡಿಯಲು ನೀರು ಕೊಡಲಾಗುತ್ತದೆ. ಹೀಗೆ ಪೈಪ್‌ಲೈನ್‌ ಮೂಲಕ ನೀರು ತರುವಾಗ ಪೈಪ್‌ಲೈನ್‌ ಹಾದುಹೋಗುವ ಆನಗಳ್ಳಿ, ಬಸ್ರೂರು, ಕೋಣಿ, ಹಂಗಳೂರು, ಕಂದಾವರ, ಭಾಗಶಃ ಕೋಟೇಶ್ವರ ಪಂಚಾಯತ್‌ನ ಜನತೆಗೆ ನೀರು ಒದಗಿಸಲಾಗುತ್ತದೆ. ಪುರಸಭೆಯಲ್ಲಿ 2,815 ಮನೆಗಳಿಗೆ, 35 ಇತರ, 169 ವಾಣಿಜ್ಯ ಸಂಪರ್ಕಗಳಿವೆ. ಅಗ್ನಿಶಾಮಕ ಠಾಣೆ ಹಾಗೂ ಎಂಜಿನಿಯರಿಂಗ್‌ ಕಾಲೇಜಿಗೆ ಕೂಡಾ ಇದೇ ನೀರಿನ ಸಂಪರ್ಕವಿದೆ. 

ರಾಜ್ಯಕ್ಕೆ ನಂ.1
ನೀರಿನ ವಿತರಣೆ ಹಾಗೂ ಬಿಲ್ಲು ಸಂಗ್ರಹದಲ್ಲಿ ಶೇ.85 ವಸೂಲಿ ಮಾಡಿದ ಇಲ್ಲಿನ ಪುರಸಭೆ ರಾಜ್ಯದಲ್ಲಿ ನಂ.1 ಸ್ಥಾನ ಗಳಿಸಿದ ಹೆಗ್ಗಳಿಕೆಯಲ್ಲಿದೆ. 2017-18ರಲ್ಲಿ 1.15 ಕೋ.ರೂ. ನೀರಿನ ಬಿಲ್ಲು ಸಂಗ್ರಹಿಸಿದ್ದು ಈ ವರ್ಷ ಎಪ್ರಿಲ್‌ನಿಂದ ಅ.25ರವರೆಗೆ 59.54 ಲಕ್ಷ ರೂ. ಸಂಗ್ರಹಿಸಿದೆ. ಈ ವರ್ಷ ಈಗಾಗಲೇ 65,12,38,912ಲೀ. ನೀರು ಖರ್ಚಾಗಿದೆ. ಕಳೆದ ವರ್ಷ 102,08,88,741 ಲೀ. ನೀರು ಖರ್ಚಾಗಿದೆ. 

ದಿನವಿಡೀ ನೀರು
ಪುರಸಭೆಯಲ್ಲಿ ಒಟ್ಟು 23 ವಾರ್ಡ್‌ ಗಳಿದ್ದು ಈಗ 3 ವಾರ್ಡ್‌ಗಳಿಗೆ ದಿನವಿಡೀ ನೀರು ಪೂರೈಸಲಾಗುತ್ತಿದೆ. ಉಳಿದ 17 ವಾರ್ಡ್‌ಗಳಿಗೆ 8 ಗಂಟೆ ನೀರು ಕೊಡಲಾಗುತ್ತಿದ್ದು ಕೋಡಿಯ ಮೂರು ವಾರ್ಡ್‌ಗಳಿಗೆ ನೀರು ಸರಬರಾಜು ವ್ಯವಸ್ಥೆ ಇಲ್ಲ. ಇಲ್ಲಿಗೆ 17 ಕೋ.ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಆರಂಭವಾಗಿದೆ. ಇದಾದ ಬಳಿಕ ಇಡೀ ಪುರಸಭೆ ವ್ಯಾಪ್ತಿಗೆ ದಿನದ 24 ತಾಸು ನೀರು ಕೊಡಲು ಪುರಸಭೆ ಚಿಂತನೆ ನಡೆಸಿದೆ.

ಕ್ರಮ ವಹಿಸಲಾಗುವುದು
ಸಾಮಾನ್ಯವಾಗಿ ವರ್ಷವೂ ನ.15ರ ನಂತರ ಗೇಟು ಹಾಕಲಾಗುತ್ತದೆ. ಹಿನ್ನೀರು ಬಂದಿದೆಯೇ ಎಂದು ಪರಿಶೀಲಿಸಲಾಗುತ್ತಿದ್ದು ಉಪ್ಪುನೀರು ಬಂದ ಕೂಡಲೇ ಗೇಟು ಹಾಕಲಾಗುತ್ತದೆ. ಪುರಸಭೆಗೆ ನೀರು ಕಡಿಮೆಯಾಗಿದೆ ಎಂದು ಮಾಹಿತಿ ತಿಳಿದ ಕೂಡಲೇ ಗೇಟು ಹಾಕಲು ಕ್ರಮ ವಹಿಸಲಾಗುವುದು.
– ಅಶೋಕ್‌, ಸಹಾಯಕ ಎಂಜಿನಿಯರ್‌, ವಾರಾಹಿ ಯೋಜನೆ

ಮಾಹಿತಿ ಕೊಡಲಾಗಿದೆ
ವಾರಾಹಿ ಯೋಜನೆಯವರಿಗೆ ನೀರು ಕಡಿಮೆಯಾದ ಕುರಿತು ಮಾಹಿತಿ ಕೊಡಲಾಗಿದೆ. ಅವರು ಗೇಟು ಹಾಕಿದ ಬಳಿಕ ಪರಿಸ್ಥಿತಿ ಸುಧಾರಿಸಬಹುದು ಎಂಬ ವಿಶ್ವಾಸವಿದೆ.
– ಮಂಜುನಾಥ್‌ ಶೆಟ್ಟಿ, ಎಂಜಿನಿಯರ್‌, ಪುರಸಭೆ, ಕುಂದಾಪುರ

— ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.