ಖಾಸಗಿ ಐಟಿಐಗಳಿಗೆ ಅನುದಾನ ಸ್ಥಗಿತ ಭಾಗ್ಯ


Team Udayavani, Nov 1, 2018, 10:33 AM IST

iti.jpg

ಕುಂದಾಪುರ: ನಮ್ಮ ಸಂಸ್ಥೆಯಿಂದ ಈ ವರ್ಷ 74 ವಿದ್ಯಾರ್ಥಿಗಳು ಶಿಕ್ಷಣ ಪಡೆದು ಹೋದರು. ಈ ಪೈಕಿ 68 ಜನಕ್ಕೆ ಕೆಲಸ ದೊರೆತಿದೆ. ಎಲ್ಲರೂ ಸರಿಸುಮಾರು 12 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ. ನನಗೋ 10 ಸಾವಿರ  ರೂ. ಸಂಬಳ. ಈ ವರ್ಷ ಸೇರಿದ ವಿದ್ಯಾರ್ಥಿಗೆ ಮುಂದಿನ ವರ್ಷ 14 ಸಾವಿರ ವೇತನವಾದರೆ ನನಗೆ 10,500 ರೂ.! ಆಗುತ್ತದೆ. ಇದು ನಮ್ಮ ಹಣೆ ಬರಹ ಎಂದು ಹಣೆಯ ಬೆವರುಜ್ಜಿ ಕೊಂಡರು ಕಳೆದ ಎಂಟು ವರ್ಷಗಳಿಂದ ಖಾಸಗಿ 
ಅನುದಾನ ರಹಿತ ಐಟಿಐಯಲ್ಲಿರುವ ಕಿರಿಯ ತರಬೇತಿ ಅಧಿಕಾರಿ(ಜೆಟಿಒ)ಯೊಬ್ಬರು.

ಐಟಿಐಗೆ ಹೆಚ್ಚಾಗಿ ಗ್ರಾಮೀಣ ಪ್ರದೇಶದ, ಆರ್ಥಿಕವಾಗಿ ಸ್ಥಿತಿವಂತರಲ್ಲದ, ಬೇಗನೇ ಉದ್ಯೋಗಕ್ಕೆ ಸೇರಬೇಕೆಂಬ ಒತ್ತಡ ಇರುವವರು ಸೇರುವುದು.1 ಕೋರ್ಸಿಗೆ 16ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಸರಕಾರಿ ಕೋಟಾದಲ್ಲಿ ತೆಗೆದುಕೊಳ್ಳುವಂತಿಲ್ಲ. ವಿದ್ಯಾರ್ಥಿಗೆ ತಲಾ 10 ಸಾವಿರ ರೂ.ಗಿಂತ ಹೆಚ್ಚು ಡೊನೇಶನ್‌ ಪಡೆಯುವಂತಿಲ್ಲ. 64 ವಿದ್ಯಾರ್ಥಿಗಳಿದ್ದರೆ 6.4 ಲಕ್ಷ ರೂ. ಸಂಸ್ಥೆಗೆ ದೊರೆತರೆ ಖರ್ಚು 25 ಲಕ್ಷ ರೂ. ಬರುತ್ತದೆ. ಇದರಿಂದಾಗಿ ರಾಜ್ಯಾದ್ಯಂತ ಐಟಿಐಗಳು ಮುಚ್ಚುತ್ತಿವೆ. ಇಷ್ಟಕ್ಕೂ ಹೀಗಾಗಲು ಕಾರಣ 2000ನೆ ಇಸವಿ ನಂತರ ಆರಂಭವಾದ ಐಟಿಐಗಳಿಗೆ ರಾಜ್ಯ ಸರಕಾರ ಅನುದಾನ ನೀಡದಿರುವುದು. 

ಥಾಮಸ್‌ ವರದಿ
ಪದವಿ ಕಾಲೇಜುಗಳಿಗೆ ವಿವಿ ಧನಸಹಾಯ ಆಯೋಗ ಇದ್ದಂತೆ ಐಟಿಐಗಳಿಗೂ ಸಿಬಂದಿ ವೇತನಕ್ಕೆ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯಡಿ ಅನುದಾನವಿದೆ. ಐಟಿಐ ಅನುದಾನಕ್ಕೆ ಸಂಬಂಧಿಸಿ 2003ರಲ್ಲಿ ಥಾಮಸ್‌ ವರದಿಯೊಂದನ್ನು ರೂಪಿಸಲಾಗಿದ್ದು 3 ವರ್ಷ ಪೂರೈಸಲ್ಪಟ್ಟ ಅಲ್ಪಸಂಖ್ಯಾಕ ಐಟಿಐ, 5 ವರ್ಷ ಪೂರೈಸಿದ ಗ್ರಾಮೀಣ ಐಟಿಐಗಳಿಗೆ ಅನುದಾನ ಕೊಡಬಹುದು ಎಂದಿದ್ದು ಈ ಅನುದಾನ ನೀತಿಸಂಹಿತೆ 2016ರಿಂದ ಜಾರಿಯಲ್ಲಿದೆ.  

ರಾಜ್ಯದಲ್ಲಿ 200 ಸರಕಾರಿ, 196 ಖಾಸಗಿ, 1,300 ಅನುದಾನ ರಹಿತ ಐಟಿಐಗಳಿವೆ. ಈ ಪೈಕಿ 800ರಷ್ಟು ಐಟಿಐಗಳು ಅನುದಾನಕ್ಕೆ ಅರ್ಹತೆ ಪಡೆದಿವೆ. 2014ರಲ್ಲಿ ಪರಿವೀಕ್ಷಣೆ ನಡೆದಾಗ 436 ಅರ್ಹತೆ ಪಡೆದು 361 ಐಟಿಐಗಳಿಗೆ ಅನುದಾನ ಕೊಡಲು ಶಿಫಾರಸ್ಸಾಗಿತ್ತು. ದ.ಕ.ದಲ್ಲಿ 5, ಉಡುಪಿ 3, ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾಸನದಲ್ಲಿ 68 ಅನುದಾನರಹಿತ ಐಟಿಐಗಳಿವೆ.

ಸ್ಥಗಿತ
1986ರಿಂದ ಹೋರಾಟ ನಡೆದು 1997ರಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ ಸರಕಾರದಿಂದ ಅನುದಾನ ಸಂಹಿತೆ ತರಿಸಿ ಸಂಯೋಜನೆಗೊಳಪಟ್ಟು 7 ವರ್ಷ ಪೂರೈಸಿದ ಐಟಿಐಗಳಿಗೆ ಅನುದಾನ ಆರಂಭಿಸಿದರು. 2000ನೇ ಇಸವಿ ನಂತರದ ಈಗ 17 ವರ್ಷ ಪೂರೈಸಿದರೂ ಯಾವುದೇ ಐಟಿಐಗೂ ಪೂರ್ವಸೂಚನೆ ಇಲ್ಲದೇ ಅನುದಾನ ಸ್ಥಗಿತವಾಗಿದೆ. 

ಮಾಳಿಗೆ ಕೋರ್ಸು
ಸರಕಾರಿ ನಿಯಮದಂತೆ ಒಂದಷ್ಟು ಕಂಪ್ಯೂಟರ್‌, ತರಬೇತಿದಾರರು ಇದ್ದರೆ ಕಂಪ್ಯೂಟರ್‌ ಕೋರ್ಸಿನ ತರಬೇತಿ ನೀಡುವ “ಮಾಳಿಗೆ ತರಬೇತಿ’ಗೆ ಸರಕಾರ ಕೌಶಲಾಭಿವೃದ್ಧಿಗಾಗಿ ಕೌಶಲ ಕರ್ನಾಟಕ ಹೆಸರಿನಲ್ಲಿ ವಿದ್ಯಾರ್ಥಿ ಕೇಂದ್ರಿತ ಅನುದಾನ ಎಂದು ತಲಾ ವಿದ್ಯಾರ್ಥಿಗೆ 8 ಸಾವಿರ ರೂ., ಸಂಸ್ಥೆಗೆ 4 ಸಾವಿರ ರೂ. ಅನುದಾನ ನೀಡುತ್ತದೆ.
ಇದೇ ಅನುದಾನ ಖಾಸಗಿ ಐಟಿಐಗಳಿಗೂ ನೀಡುವ ಭರವಸೆಯಿದೆ. ಆದರೆ ಐಟಿಐಗಳು ನಿರಾಕರಿಸಿವೆ. ಏಕೆಂದರೆ ತೇರ್ಗಡೆಯಾದ  ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅನುದಾನ ವಾದರೆ ಪ್ರವೇಶ/ತೇರ್ಗಡೆ ಕಡಿಮೆಯಾದರೆ ಸಿಬಂದಿ ವೇತನಕ್ಕೂ ಕಲ್ಲು.

ಇನ್ನೂ ಆಗಿಲ್ಲ
ಥಾಮಸ್‌ ವರದಿ ಪ್ರಕಾರ ವಿದ್ಯಾರ್ಥಿ ಕೇಂದ್ರಿತ ಅನುದಾನ ನೀಡಲು ಸಂಪುಟ ನಿರ್ಧರಿಸಿದೆ. ಆದರೆ ಅದನ್ನು ಮರುಪರಿಶೀಲಿಸಲು ಖಾಸಗಿ ಐಟಿಐಗಳಿಂದ ಮನವಿಗಳು ಬಂದಿದ್ದು ಇನ್ನೂ ಪ್ರತ್ಯೇಕ ನಿರ್ಣಯ ಕೈಗೊಂಡಿಲ್ಲ. 
 ಆರ್‌. ವಿ. ದೇಶಪಾಂಡೆ, ಕೌಶಲಾಭಿವೃದ್ಧಿ ಇಲಾಖೆ ಸಚಿವರು

ಅನುದಾನ ಇಲ್ಲ
ಐಟಿಐ ಕಲಿತ ಶೇ. 95 ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುತ್ತಿದೆ. ಎಂಜಿನಿ ಯರಿಂಗ್‌ ಕಾಲೇಜು ಮಾಡುವಷ್ಟು ಸರಕಾರಿ ನಿಯಮದಂತೆ ಐಟಿಐ ಪ್ರಾರಂಭಿಸಿದರೂ 7 ವರ್ಷ ಪೂರೈಸಿದ್ದಕ್ಕೆ ಅನುದಾನ ಕೊಡಬೇಕೆಂಬ ನಿಯಮ ಇದ್ದರೂ ಕಳೆದ 17 ವರ್ಷಗಳಿಂದ ಅನುದಾನ ಮಾತ್ರ ಲಭ್ಯವಾಗುತ್ತಿಲ್ಲ.  
ಕೆ.ಎಸ್‌. ನವೀನ್‌ ಕುಮಾರ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಅನುದಾನ ರಹಿತ ಐಟಿಐಗಳ ಸಂಘಟನೆ

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.