‘ಜಂಬೂನದಿ ಪವಿತ್ರ ಕ್ಷೇತ್ರಕ್ಕೆ ಪ್ರಚಾರಬೇಕಿದೆ’
Team Udayavani, Dec 6, 2018, 1:45 AM IST
ಬಸ್ರೂರು: ಜಪ್ತಿ ಗ್ರಾಮದ ಶ್ರೀ ಜಂಬೂಕೇಶ್ವರ ದೇವಸ್ಥಾನದಲ್ಲಿ ಉತ್ತರ ಕ್ರಿಯಾದಿಗಳನ್ನು ನೆರವೇರಿಸಲು ಅನುಕೂಲವಾಗುವಂತೆ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಪೈತೃಕ ಮಂದಿರ ( ಪಿತೃ ಶಾಲೆ)ವನ್ನು ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಅವರು ಡಿ. 2ರಂದು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪವಿತ್ರ ಕ್ಷೇತ್ರವಾದ ಜಂಬೂನದಿಯ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಿಸಿದ ಪೈತೃಕ ಮಂದಿರ ಈ ಭಾಗದ ಜನರಿಗಷ್ಟೆ ಅಲ್ಲದೆ ದೂರದವರಿಗೂ ಅಗತ್ಯವಾಗಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಜಪ್ತಿ ಗ್ರಾಮದ ಜಂಬೂ ನದಿಯ ತಟದಲ್ಲಿರುವ ಶ್ರೀ ಜಂಬೂಕೇಶ್ವರ ದೇವಸ್ಥಾನವನ್ನು ಈಗಾಗಲೇ ಶಿಲಾಮಯ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಉತ್ತರ ಕ್ರಿಯಾದಿಗಳನ್ನು ನೆರವೇರಿಸಲು ಈ ಮಂದಿರ ಆತ್ಯಂತ ಸಹಕಾರಿ. ಈ ಕ್ಷೇತ್ರಕ್ಕೆ ಇನ್ನಷ್ಟು ಪ್ರಚಾರ ಬೇಕಾಗಿದೆ. ಸದ್ಯದಲ್ಲೇ ಇಲ್ಲಿಗೆ ಬರುವ ರಸ್ತೆಯೂ ದುರಸ್ತಿಯಾಗಬಹುದು. ಇಂದು ಇಲ್ಲಿ ನಿರ್ಮಿಸಿರುವ ಭಾಗೀರಥಿ ಘಾಟ್ ನಲ್ಲಿ ಭಾಗೀರತಿ ಆರತಿಯನ್ನು ನೆರವೇರಿಸಲಾಗುವುದು ಎಂದರು. ನಂತರ ವಿದ್ವಾನ್ ಮಾಧವ ಅಡಿಗ ಅವರಿಂದ ಧಾರ್ಮಿಕ ಪ್ರವಚನ ನಡೆಯಿತು. ಕೆ. ಜಯಕರ ಶೆಟ್ಟಿ ಅವರು ಸಮಾರೋಪ ಭಾಷಣ ಮಾಡಿದರು.
ಡಾ| ಬಿ. ವಿ. ಉಡುಪ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸತ್ಯನಾರಾಯಣ ಉಡುಪ ನಿರೂಪಿಸಿ, ವಂದಿಸಿದರು. ಅನಂತರ ಭಾಗೀರಥಿ ಆರತಿ ಮತ್ತು ಗಂಗಾ ಪೂಜೆಯನ್ನು ವೇ| ಮೂ| ಚೆನ್ನಕೇಶವ ಭಟ್ಆನಗಳ್ಳಿ ಮತ್ತು ತಂಡದವರು ನೆರವೇರಿಸಿದರು. ಬಳಿಕ ಸಾರ್ವಜನಿಕರಿಂದ ಗಂಗೆಗೆ ದೀಪ ಸಮರ್ಪಣೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
MUST WATCH
ಹೊಸ ಸೇರ್ಪಡೆ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು