ಕುಂದಾಪುರ ಆಸ್ಪತ್ರೆಗೆ ಲೋಕಾ ಶ್ಲಾಘನೆ
Team Udayavani, Dec 9, 2018, 9:54 AM IST
ಕುಂದಾಪುರ: ಇಲ್ಲಿನ ತಾಲೂಕು ಸರಕಾರಿ ಆಸ್ಪತ್ರೆಗೆ ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಅವರು ಶನಿವಾರ ದಿಢೀರ್ ಭೇಟಿ ನೀಡಿದರು. ಪ್ರತಿ ವಿಭಾಗಕ್ಕೂ ಹೋಗಿ ಪರಿಶೀಲಿಸಿ, ಕುಂದುಕೊರತೆಗಳ ಕುರಿತು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ರೋಗಿಗಳನ್ನು ಮಾತನಾಡಿಸಿದರು.
ಬಳಿಕ ಮಾಧ್ಯಮದವರ ಜತೆ ಮಾತನಾಡಿ, ಕುಂದಾಪುರ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಲು ಇಲ್ಲಿಗೆ ಬರುತ್ತಿರುವ ರೋಗಿಗಳ ಸಂಖ್ಯೆಯೇ ಉದಾಹರಣೆ. ಇಲ್ಲಿ ಉತ್ತಮ ವೈದ್ಯರಿದ್ದಾರೆ, ವ್ಯವಸ್ಥೆಯೂ ಇದೆ.
ಒಂದಷ್ಟು ಕುಂದುಕೊರತೆಗಳು ಗಮನಕ್ಕೆ ಬಂದಿದ್ದರೂ ಅದನ್ನು ಮಾಧ್ಯಮದ ಮೂಲಕ ಜಾಹೀರು ಮಾಡುವುದಿಲ್ಲ. ಹಾಗೆ ಹೇಳಿದರೆ ಅದು ಆಸ್ಪತ್ರೆ ಚೆನ್ನಾಗಿಲ್ಲ ಎಂದು ಜನರಲ್ಲಿ ತಪ್ಪು ಭಾವನೆ ಮೂಡಿಸಿದಂತಾಗುತ್ತದೆ. ಲೋಪದೋಷಗಳನ್ನು ಸರಕಾರದ ಗಮನಕ್ಕೆ ತಂದು ಸರಿಪಡಿಸಲು ಸೂಚಿಸುತ್ತೇನೆ. ಸಾರ್ವಜನಿಕರು ಕೂಡ ಸ್ಪಷ್ಟ ವಿಳಾಸ, ಮಾಹಿತಿಯೊಂದಿಗೆ ದೂರು, ಲೋಪಗಳನ್ನು ತಿಳಿಸಬಹುದು ಎಂದರು.
ಸುಳ್ಳು ದೂರಿಗೆ ದಂಡ
ದೂರು ಕೊಡುವವರಲ್ಲಿ ಹಲವು ವಿಧದವರಿರುತ್ತಾರೆ. ಅನಾವಶ್ಯಕವಾಗಿ, ಅಧಿಕಾರಿಗಳಿಗೆ ತೊಂದರೆ ಕೊಡಲು, ಕಿರುಕುಳ, ಹಣಕ್ಕಾಗಿ, ಪ್ರಚಾರಕ್ಕಾಗಿ ಅರ್ಜಿ ಹಾಕುವ ವರ್ಗದವರಿದ್ದಾರೆ. ಹಾಗೆಯೇ ನೈಜ ಕಾಳಜಿಯಿಂದ ಅರ್ಜಿ ಹಾಕುವವರೂ ಇರುತ್ತಾರೆ. ನೈಜ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು, ಸುಳ್ಳು ಅರ್ಜಿ ಸಲ್ಲಿಸಿದರೆ ಅಂತಹವರಿಗೆ ದಂಡ ವಿಧಿಸಲಾಗುವುದು ಎಂದು ಲೋಕಾಯುಕ್ತ ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ