ಶ್ರೀ ಪದ್ಧತಿ ಬೇಸಾಯ: ಚಿಂತನ- ಮಂಥನ
Team Udayavani, Dec 11, 2018, 1:50 AM IST
ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ಯೋಜನಾ ವ್ಯಾಪ್ತಿಯ ಹಾಲಾಡಿ ವಲಯದ ರಟ್ಟಾಡಿ ಕಾರ್ಯಕ್ಷೇತ್ರದಲ್ಲಿ ಪ್ರಗತಿಪರ ಬೇಸಾಯಗಾರ ರಾಜ ಕುಲಾಲ್ ಅವರ ಕೃಷಿ ತಾಕಿನಲ್ಲಿ ಶ್ರೀ ಪದ್ಧತಿ ಬೇಸಾಯದ ಕುರಿತು ಚಿಂತನ ಮಂಥನ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಅಧ್ಯಕ್ಷ ದಿನೇಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆಯನ್ನು ವಲಯ ಮೇಲ್ವಿಚಾರಕಿ ದಿವ್ಯ ಪ್ರಸನ್ನ ಆಚಾರ್ಯ ನೆರವೇರಿಸಿದರು.
ಸಂಪನ್ಮೂಲ ವ್ಯಕ್ತಿ ಪ್ರಗತಿಪರ ಕೃಷಿಕ ಪ್ರಕಾಶ್ ಗೋವಿಂಡೆ, ಶ್ರೀ ಪದ್ಧತಿ ಬೇಸಾಯ ಲಾಭದಾಯಕ ಕ್ರಮವಾಗಿದ್ದು, ಉತ್ತಮ ತಳಿಯ ಬೀಜದ ಆಯ್ಕೆ, ಬೀಜೋಪಚಾರ, ಸಸಿಮಡಿ ಮಾಡುವ ವಿಧಾನ, ಗೊಬ್ಬರ ನಿರ್ವಹಣೆ, ನೀರು ನಿರ್ವಹಣೆ ಸರಿಯಾದ ರೀತಿಯಲ್ಲಿ ಮಾಡಿ, ನಾಟಿಯನ್ನು 12-15 ದಿನಕ್ಕೆ ಮಾಡಿದ ನಂತರ ಕೋನೋವೀಡರ್ (ಕಳೆ ನಿರ್ವಹಣಾ ಯಂತ್ರದ) ಬಳಕೆಯನ್ನು ಉತ್ತಮ ರೀತಿಯಲ್ಲಿ ಮಾಡಿದಲ್ಲಿ ಹೆಚ್ಚು ಫಸಲು ದೊರೆತು ಲಾಭಗಳಿಸಲು ಸಾಧ್ಯ ಎಂದರು. ಈ ವೇಳೆ ಶ್ರೀ ಪದ್ಧತಿ ನಾಟಿ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.
ಯೋಜನೆಯ ಕೇಂದ್ರ ಸಮಿತಿಯ ಮಾಜಿ ಒಕ್ಕೂಟದ ಅಧ್ಯಕ್ಷರಾದ ಸತೀಶ್ ಹೆಗ್ಡೆ, ರೈತರಾದ ಚಂದ್ರ ಕುಲಾಲ್, ಸಂತೋಷ್ ಕುಲಾಲ್, ಉಮೇಶ್ ಹೆಗ್ಡೆ , ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಕೃಷಿ ಅಧಿಕಾರಿ ಚೇತನ್ ಕುಮಾರ್ ಪ್ರಸ್ತಾವಿಸಿ, ಸ್ವಾಗತಿಸಿ, ವಿಭಾಗದ ಸೇವಾಪ್ರತಿನಿಧಿ ವೀಣಾ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಆವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು