ದೊಂದಿ ಬೆಳಕಿನ ಯಕ್ಷಗಾನಕ್ಕೆ ಮನಸೋತ ಯಕ್ಷ ರಸಿಕರು
Team Udayavani, Dec 17, 2018, 12:19 PM IST
ತೆಕ್ಕಟ್ಟೆ : ಆಧುನಿಕ ಭರಾಟೆಯಲ್ಲಿ ನಲುಗುತ್ತಿರುವ ಯಕ್ಷಗಾನಕ್ಕೆ ಜೀವ ಕಳೆ ತುಂಬುವ ನಿಟ್ಟಿನಿಂದ ಹುಭಾಶಿಕ ಕೊರಗ ಯುವ ಕಲಾ ವೇದಿಕೆ ಬಾರಕೂರು ಆಶ್ರಯದಲ್ಲಿ ಮಕ್ಕಳ ಮನೆ ಕುಂಭಾಸಿ ಸಾಂಸ್ಕೃತಿಕ ಬೆಳವಣಿಗೆ ಸಹಾಯಾರ್ಥ ಹೊಸತೊಂದು ಪ್ರಯತ್ನ ಮಾಡಿ ಯಶಸ್ಸು ಕಂಡಿದೆ. ಪ್ರಶಾಂತ್ ಮಲ್ಯಾಡಿ ಸಂಯೋಜನೆಯೊಂದಿಗೆ ಬಡಗಿನ ಅತಿಥಿ ಕಲಾವಿದ ಕೂಡುವಿಕೆಯಲ್ಲಿ ನಡುತಿಟ್ಟಿನ ಪಾರಂಪರಿಕ ಯಕ್ಷಗಾನ ಶೈಲಿಯಲ್ಲಿ ಡಿ.15ರಂದು ಕುಂಭಾಸಿ ಅಂಬೇಡ್ಕರ್ ನಗರದಲ್ಲಿ ಪ್ರದರ್ಶನಗೊಂಡ ದೊಂದಿ ಬೆಳಕಿನ ಯಕ್ಷಗಾನ ಕಲಾರಸಿಕರನ್ನು ತನ್ನೆಡೆಗೆ ಸೆಳೆಯುವಲ್ಲಿ ಸಫಲವಾಗಿದೆ.
ದೊಂದಿ ಬೆಳಕಿನ ಯಕ್ಷಗಾನ ಯಾವುದೇ ಬಗೆಯ ವಿದ್ಯುತ್ ಬೆಳಕಿನ ವ್ಯವಸ್ಥೆಗಳಿಲ್ಲದೆ ಸಂಪೂರ್ಣ ದೊಂದಿ ಬೆಳಕಿನಲ್ಲೇ ನಡೆಯುವ ಯಕ್ಷಗಾನದ ಪ್ರಾಕಾರವಾಗಿದೆ. ಕೋಟದಲ್ಲಿ ನಡೆದ ಈ ವಿಶೇಷ ಯಕ್ಷಗಾನಕ್ಕೆ ದೊಂದಿ ಬೆಳಕನ್ನು ಕೋಟದ ರಾಮಚಂದ್ರ ಆಚಾರ್ಯ ಅವರು ಅಚ್ಚಕಟ್ಟಾಗಿ ಒದಗಿಸಿದ್ದಾರೆ. ಸುಮಾರು 25ಕ್ಕೂ ಹೆಚ್ಚು ಮಂಡಿ ಕಲಾವಿದರು ಯಕ್ಷಗಾನಕ್ಕಾಗಿ ಬಣ್ಣ ಹಚ್ಚಿದ್ದಾರೆ. ಚಂಡೆ ವಾದಕ ಮಾ| ಸುದೀಪ್ ಅವರ ಚೆಂಡೆ ವಾದನ ದೊಂದಿ ಬೆಳಕಿನ ಯಕ್ಷಗಾನಕ್ಕೆ ಮತ್ತಷ್ಟು ಮೆರಗು ನೀಡಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
ಮಕ್ಕಳಿಗೆ ಹೊಸತನ ಕಲಿಕೆಯ ಉದ್ದೇಶ
ಮಕ್ಕಳಿಗೆ ಹೊಸತನ ಕಲಿಸಬೇಕು ಎನ್ನುವ ಮೂಲ ಉದ್ದೇಶದಿಂದ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸಬೇಕು ಎನ್ನುವ ಆಶಯವಿದೆ.
- ಗಣೇಶ್ ವಿ., ಕೊರಗ ಮುಖಂಡ
ಯಕ್ಷಗಾನದ ಮೂಲ ಸ್ವರೂಪ ಮತ್ತೆ ನೆನಪು ಆಧುನಿಕತೆಯ ನಡುವೆ ಮರೆಯಾಗುತ್ತಿರುವ ಸಾಂಪ್ರದಾಯಿಕ ಶೈಲಿ ಯಕ್ಷಗಾನದ ಮೂಲ ಸ್ವರೂಪವನ್ನು ಮತ್ತೆ ನೆನಪಿಸಬೇಕು ಎನ್ನುವ ನಿಟ್ಟಿನಿಂದ ಎಲ್ಲರ ಸಹಕಾರದೊಂದಿಗೆ ಮೊದಲ ಬಾರಿಗೆ ಯಾವುದೇ ವಿದ್ಯುತ್ ಬೆಳಕನ್ನು ಬಳಸದೆ ಕೇವಲ ದೊಂದಿ ಬೆಳಕನ್ನು ಸೃಷ್ಟಿಸಿ ಬಯಲು ಯಕ್ಷಗಾನ ಪ್ರದರ್ಶನ ನಡೆಸಿದ್ದೇವೆ. ಕಾರ್ಯಕ್ರಮದ ಯಶಸ್ಸಿಗೆ ಹಿರಿಯ ಯಕ್ಷಗಾನ ಕಲಾವಿದರ ಅನಿಸಿಕೆ, ಅಭಿಪ್ರಾಯವೇ ಕಾರಣ.
-ಪ್ರಶಾಂತ್ ಮಲ್ಯಾಡಿ ,
ಕಾರ್ಯಕ್ರಮ ಸಂಯೋಜಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ