ಮನಸೂರೆಗೊಂಡ ಹೊನಲು ಬೆಳಕಿನ ಅಷ್ಟಮ ಕ್ರೀಡೋತ್ಸವ
Team Udayavani, Dec 18, 2018, 3:25 AM IST
ತೆಕ್ಕಟ್ಟೆ: ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾ ಕೇಂದ್ರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಹೊನಲು ಬೆಳಕಿನಲ್ಲಿ ಸಾಹಸ ಕ್ರೀಡೆಯೊಂದಿಗೆ ವೈಶಿಷ್ಟ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ಡಿ. 16 ರವಿವಾರ ಸೇವಾ ಸಂಗಮ ಕ್ರೀಡಾ ಮೈದಾನದಲ್ಲಿ ನಡೆದವು. ಮಲ್ಲಕಂಬ ಪ್ರದರ್ಶನ, ನೆರೆದಿದ್ದ ಸಹಸ್ರಾರು ವೀಕ್ಷಕರಲ್ಲಿ ಕ್ಷಣ ಕ್ಷಣವೂ ಮುಂದೇನಾಗುತ್ತದೋ ಎನ್ನುವ ಕಾತುರತೆಯ ಭಾವ, ಉರಿಯುತ್ತಿರುವ ಬೆಂಕಿಯ ನಡುವೆ ಸಾಹಸ ಪ್ರದರ್ಶನದಲ್ಲಿ ತೊಡಗಿರುವ ಪುಟಾಣಿಗಳು ಹಾಗೂ ಮೈದಾನದ ಮಧ್ಯದಲ್ಲಿರಿಸಿದ ಮಲ್ಲ ಕಂಬದ ಮೇಲೆ ಸರಸರನೆ ಮೇಲೆರುವ ಬಾಲಕನೋರ್ವ ವಿವಿಧ ಆಯಾಮಗಳಲ್ಲಿ ಯೋಗಾಸನ ಪ್ರದರ್ಶನಗೈಯುವ ಸನ್ನಿವೇಶಗಳು ನೋಡುಗರ ಮನಸೂರೆಗೊಂಡವು. ಏಕ ಚಕ್ರ ಹಾಗೂ ಸೈಕಲ್ ಮೇಲೆ ಕಸರತ್ತು ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಸಾಕ್ಷಿಯಾಯಿತು.
ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಿಂದ ಸುಮಾರು 405 ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಮುಸ್ಸಂಜೆ ಘೋಷ್ ಸಹಿತ ಪಥಸಂಚಲನ ಪ್ರಾರಂಭಗೊಂಡು ಹೊನಲು ಬೆಳಕಿನಲ್ಲಿ ಶಿಶು ನೃತ್ಯ, ರಿಂಗ್ ನೃತ್ಯ, ದಕ್ಷಯಜ್ಞ, ಮಲ್ಲ ಕಂಬ ಪ್ರದರ್ಶನ, ಜಡೆ ಕೋಲಾಟ, ಸೀರೆ ನೃತ್ಯ, ಬೆಂಕಿಯಲ್ಲಿ ಸಾಹಸ, ದೀಪಾರತಿ, ಚಪ್ಪಾಳೆ ಡ್ರಿಲ್, ಯಕ್ಷಗಾನ ನೃತ್ಯಾಭಿನಯ, ಯೋಗಾಸನ, ದೊಂದಿ ಪ್ರದರ್ಶನ ಮತ್ತು ಯಕ್ಷ ರೂಪಕ, ಕೂಪಿಕಾ ಸಮತೋಲನ, ಶಾಲಾ ಸಾಮೂಹಿಕ ಪ್ರದರ್ಶನ, ವಂದೇ ಮಾತರಂ, ಧ್ವಜಾವತರಣ ಪ್ರದರ್ಶನಗೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ