ಪಾಂಗಾಳ: ಸಂಪರ್ಕ ರಸ್ತೆಯ ಮರು ಡಾಮರೀಕರಣಕ್ಕೆ ಜನಾಗ್ರಹ
Team Udayavani, Jan 9, 2019, 8:45 PM IST
ಕಟಪಾಡಿ : ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಗೆ ಬಲಿಯಾದ ಪಾಂಗಾಳ-ಆಲಡೆ ರಸ್ತೆ ದುರಸ್ತಿ ಕಾಣದೆ ಗ್ರಾಮಸ್ಥರು ಸಂಚಾರಕ್ಕೆ ಸಂಕಟ ಪಡುವುದರೊಂದಿಗೆ ಇಲಾಖಾಧಿಕಾರಿಗಳಿಗೆ ಹಿಡಿಶಾಪ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ನಿರ್ಮಾಣಗೊಂಡು ಕಳೆದ 5-6 ವರ್ಷಗಳಿಂದಲೂ ಸ್ಥಳೀಯರು, ಗ್ರಾಮಸ್ಥರು, ವಾಹನ ಸಂಚಾರಿಗಳು ತಮ್ಮ ಸಮಸ್ಯೆಗಳ ಬಗ್ಗೆ ಮನವಿಗಳನ್ನು ನೀಡುತ್ತಲೇ ಇದ್ದರು. ಕಾಪುವಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲೂ ಗಮನ ಸೆಳೆದಿದ್ದರು. ಆದರೆ ಈವರೆಗೆ ಸಮಸ್ಯೆ ಬಗೆಹರಿದಿಲ್ಲ.
ಜಾತ್ರೆ ವೇಳೆ ಹೆಚ್ಚಿನ ದಟ್ಟನೆ
ಈ ರಸ್ತೆಯು ಈ ಭಾಗದ ಪ್ರಮುಖ ಇತಿಹಾಸ, ಕಾರಣಿಕ ಪ್ರಸಿದ್ಧ ಎರಡು ಆಲಡೆಗಳ ಸಹಿತ ಸುಮಾರು 80ರಷ್ಟು ಮನೆಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ನಿತ್ಯ ನೂರಾರು ಜನರು ಈ ರಸ್ತೆಯನ್ನೇ ಸಂಪರ್ಕಕ್ಕೆ ಆಶ್ರಯಿಸಿದ್ದಾರೆ. ವರ್ಷಕ್ಕೆ ಎರಡು ದಿನ ನಡೆಯುವ ಆಲಡೆಗಳ ಜಾತ್ರಾ ಸಂದರ್ಭ (ಸಿರಿ ಜಾತ್ರೆ) ಹೊರ ರಾಜ್ಯಗಳಿಂದಲೂ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಈ ವೇಳೆ ವಾಹನ ಸಂಚಾರಕ್ಕೆ, ಪಾರ್ಕಿಂಗ್ಗೆ ಅಡೆತಡೆ ಉಂಟಾಗುತ್ತಿದ್ದು, ಜನರು ಬವಣೆ ಪಡುವಂತಾಗಿದೆ.
ವಾಹನ ಸಂಚರಿಸಲು ಹಿಂದೇಟು
ಮಳೆಗಾಲದಲ್ಲಂತೂ ಇಲ್ಲಿನ ಈ ಮಣ್ಣಿನ ರಸ್ತೆಯ ಕೆಸರು ನೀರಿನ ಅಭಿಷೇಕ ತಪ್ಪಿದ್ದಲ್ಲ. ವಾಹನ ಸಂಚಾರವೂ ಕಷ್ಟಕರವಾಗಿದ್ದು, ಶಾಲಾ ವಾಹನಗಳೂ ಮಕ್ಕಳನ್ನು ಕರೆತರಲು ಈ ರಸ್ತೆಯಲ್ಲಿ ಸಂಚರಿಸಲು ಒಪ್ಪುತ್ತಿಲ್ಲ. ಈ ಬಗ್ಗೆ ಸ್ಥಳೀಯ ಇನ್ನಂಜೆ ಗ್ರಾ.ಪಂ. ಗಮನವನ್ನು ಗ್ರಾಮಸ್ಥರು ಸೆಳೆದಿದ್ದು ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ, ಹೆದ್ದಾರಿ ಇಲಾಖೆಗಳಿಗೆ ಸಮಸ್ಯೆಯನ್ನು ಪರಿಹರಿಸುವಂತೆ ಕೋರಿ ಪತ್ರವನ್ನೂ ಬರೆಯಲಾಗಿದೆ. ಇಷ್ಟಾದರೂ ಹೆದ್ದಾರಿ ಗುತ್ತಿಗೆದಾರರ ದಿವ್ಯ ನಿರ್ಲಕ್ಷ್ಯ, ಇಲಾಖಾಧಿಕಾರಿಗಳ ಮೌನದ ಬಗ್ಗೆ ಜನರು ಸಹನೆ ಕಳೆದುಕೊಂಡಿದ್ದಾರೆ.
ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಿ
ಪಾಂಗಾಳ-ಆಲಡೆ-ಮಂಡೇಡಿ ಸಂಪರ್ಕದ ಪ್ರಮುಖ ರಸ್ತೆ ಇದಾಗಿದೆ. ಹೆದ್ದಾರಿ ಕಾಮಗಾರಿಯಿಂದ ಇದ್ದ ಡಾಮರು ರಸ್ತೆಯನ್ನು ನಾವು ಕಳೆದುಕೊಳ್ಳುವಂತಾಗಿದೆ. ಮರು ಡಾಮರೀಕರಣ ಮಾಡಿಲ್ಲದಿರುವುದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಕೂಡಲೇ ಇಲಾಖೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.
– ರಮಾನಂದ ಶೆಟ್ಟಿ, ಮುಕ್ಕಾಲಿ ಮನೆ
ಪ್ರತಿಫಲ ಶೂನ್ಯ
ಈ ಸಮಸ್ಯೆಯನ್ನು ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದಿದ್ದು, ಇದುವರೆಗೂ ಪ್ರತಿಫಲ ಶೂನ್ಯವಾಗಿದೆ. ಪಂಚಾಯತ್ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ನಿರ್ಣಯದ ಮೂಲಕ ಹೆದ್ದಾರಿ ಇಲಾಖೆಗೂ ನೊಟೀಸ್ ನೀಡಲಾಗಿದೆ. ಆದರೂ ಯಾವುದೇ ರೀತಿಯಾದ ಪ್ರತಿಕ್ರಿಯೆ ಇಲ್ಲ.
– ನಾಗೇಶ್ ಭಂಡಾರಿ, ಇನ್ನಂಜೆ ಗ್ರಾ.ಪಂ. ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ