ಬೇಸಾಯಕ್ಕೆ ಸಿಗದ ಕಂಡಲೂರಿನ ಬಾಗಾಳ್ಕೆರೆಯ ನೀರು
Team Udayavani, Jan 24, 2019, 12:50 AM IST
ಬಸೂÅರು: ನೀರಾವರಿಗೆ ಕೆರೆಯ ವ್ಯವಸ್ಥೆಯಿದ್ದರೂ, ಅನುದಾನ, ನಿರ್ವಹಣೆ ಕೊರತೆಯಿಂದ ಕೃಷಿ ಮಾಡಲಾಗದ ಸ್ಥಿತಿ ಕಾವ್ರಾಡಿ (ಕಂಡಲೂರು) ಗ್ರಾಮದ ಕೃಷಿಕರದ್ದು. ಇಲ್ಲಿನ ಮರಾಶಿಯಲ್ಲಿನ ಬಾಗಾಳ್ಕೆರೆಯ ನೀರು ಕಳೆದ 20 ವರ್ಷಗಳಿಂದಲೂ ಪಶ್ಚಿಮದ ಕೃಷಿ ಭೂಮಿ ಪ್ರದೇಶವಾದ ಮರಾಶಿ ಬೈಲ್ ಹಾಗೂ ಕುಬಾj ನದಿ ದಡದ ಕಂಡಲೂರು ಬೈಲಿನ ಅಂದಾಜು 500 ಎಕ್ರೆ ಕೃಷಿ ಭೂಮಿಗೆ ತೋಡಿನ ಮೂಲಕ ಹರಿಯುತ್ತಿತು. ಆದರೆ ಇಲ್ಲೀಗ ಹೂಳೆತ್ತದೇ ಇರುವುದರಿಂದ ಕೃಷಿಕರು ಅಸಹಾಯಕ ಸ್ಥಿತಿಯಲ್ಲಿದ್ದಾರೆ.
ಹೂಳೆತ್ತಿಲ್ಲ
ಬಾಗಾಳ್ಕೆರೆ 86 ಸೆಂಟ್ಸ್ ವಿಸ್ತೀರ್ಣದಲ್ಲಿದ್ದು 20 ವರ್ಷಗಳಿಂದ ಹೂಳೆತ್ತಿಲ್ಲ. ಕೆರೆ ಹೂಳೆತ್ತಿದರೆ ಕೆರೆಯ ಪಶ್ಚಿಮಕ್ಕಿರುವ ಇಡೀ ಕೃಷಿ ಪ್ರದೇಶಗಳ ಕಾತಿ, ಸುಗ್ಗಿ ಹಾಗೂ ಕೊಳ್ಕೆ ಬೇಸಾಯಗಳಿಗೆ ಪ್ರಯೋಜನಕಾರಿಯಾಗುತ್ತದೆ. ಗ್ರಾ.ಪಂ., ತಾ.ಪಂ., ಜಿ.ಪಂ. ಹಾಗೂ ಶಾಸಕರಿಗೂ ಕೆರೆ ಹೂಳೆತ್ತುವಂತೆ ಸ್ಥಳೀಯರು ಮನವಿಯನ್ನು ನೀಡಿದ್ದಾರೆ. ಡಿಸಿ ಹಾಗೂ ಮಾಜಿ ಸಚಿವರಿಗೂ ಈ ಬಗ್ಗೆ ಮನವಿ ನೀಡಲಾಗಿತ್ತು. ಸಣ್ಣ ನೀರಾವರಿ ಇಲಾಖೆಗೂ ಮನವಿ ನೀಡಿದ್ದರೂ, ಈ ಬಗ್ಗೆ ಗಮನ ಹರಿಸಿಲ್ಲ. ಶಾಸಕರು ಈ ಬಗ್ಗೆ ಪತ್ರ ನೀಡಿದ್ದರೂ, ಬೇಡಿಕೆ ಪತ್ರದಲ್ಲೇ ಉಳಿದುಕೊಂಡಿದೆ. ಇನ್ನು ಕಳೆದ ಮೂರು ವರ್ಷಗಳಿಂದ ಈ ಭಾಗದ ರೈತರು ಬಾಗಾಳ್ಕೆರೆಯ ಹೂಳೆತ್ತಿ ಕಾಯಕಲ್ಪ ಮಾಡಬೇಕೆಂದು ಹೋರಾಟ ನಡೆಸುತ್ತಲೇ ಬಂದಿದ್ದರೂ ಕೆರೆಗೆ ಇನ್ನೂ ಕಾಯಕಲ್ಪವಾಗಿಲ್ಲ.
ಹೂಳೆತ್ತಿದರೆ ಕೃಷಿ ಸಾಧ್ಯ
ಬಾಗಾಳ್ಕೆರೆಯನ್ನು ಹೂಳೆತ್ತಿ ಎರಡು ಕಡೆ ನೀರು ಹರಿಯುವ ತೋಡುಗಳನ್ನು ಕಲ್ಲು ಕಟ್ಟಿ ಸರಿಪಡಿಸಿದರೆ ನಮಗೆ ಮೂರೂ ಬೆಳೆಯನ್ನು ಸಮೃದ್ಧಿಯಾಗಿ ಬೆಳೆಯಲು ನೀರು ಸಿಗುತ್ತದೆ. ನಮ್ಮ ಕೃಷಿಭೂಮಿ ಹಸನಾಗಿ ನಮ್ಮ ಬಾಳೂ ಹಸನಾಗಬಹುದು.
– ದಿನಕರ ಆಚಾರ್ಯ, ಸ್ಥಳೀಯ ಕೃಷಿಕ,
ಅನುದಾನ ಸಾಲದು
ಕಂಡಲೂರಿನ ಬಾಗಾಳ್ಕೆರೆ ಹೂಳೆತ್ತಲು ಗ್ರಾ.ಪಂ. ಅನುದಾನ ಸಾಕಾಗುವುದಿಲ್ಲ. ಕೆರೆ ಹೂಳೆತ್ತಿ, ತೋಡುಗಳಲ್ಲಿ ನೀರು ಹರಿಯುವಂತೆ ಮಾಡಲು ಅಂದಾಜು ರೂ.25 ಲಕ್ಷ ಅಗತ್ಯವಿದೆ. ಈ ಬಗ್ಗೆ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಿ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆಯನ್ನು ಶೀಘ್ರ ಕಳಿಸಲಾಗುವುದು.
– ಗೌರಿ ಆರ್. ಶ್ರೀಯಾನ್, ಅಧ್ಯಕ್ಷೆ, ಗ್ರಾ.ಪಂ. ಕಾವ್ರಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ