ಆಟಿಕೆ ಪಿಸ್ತೂಲಿನಲ್ಲಿ ಆಡಿದವ ಇಂದು ಗಡಿ ಕಾಯುವ ಯೋಧ


Team Udayavani, Jan 27, 2019, 12:50 AM IST

pistol.jpg

ಸೇನೆಗೆ ಸೇರಬೇಕೆನ್ನುವ ಕನಸು ಹೊಂದಿದ್ದರೂ ಕೆಲವರು ಒಂದೆರಡು ಪ್ರಯತ್ನಗಳ ಬಳಿಕ ಕೈ ಬಿಡುವುದು ಇದೆ. ಆದರೆ ಇವರು ಹಾಗಲ್ಲ. 10 ಬಾರಿ ಪರೀಕ್ಷೆ ಎದುರಿಸಿ ತನ್ನ ಮಹದಾಸೆ ಈಡೇರಿಸಿಕೊಂಡಿದ್ದಾರೆ.

ಕುಂದಾಪುರ: ಯೋಧ ಬಸೂÅರಿನ ಪ್ರದೀಪ್‌ ಖಾರ್ವಿಯವರ ಯಶೋಗಾಥೆ ಆರಂಭ ವಾಗುವುದೇ ವಿಶೇಷ ಪುಟಗಳಿಂದ.

ಯೋಧನಾಗಬೇಕೆಂಬ ಆಸೆಯನ್ನು ಕಂಗಳಲ್ಲಿ ತುಂಬಿಕೊಂಡು ಸದಾ ಪರೀಕ್ಷೆ ಬರೆದರೂ ಅನುತ್ತೀರ್ಣನಾಗುತ್ತಿದ್ದರು ಪ್ರದೀಪ್‌. ಒಂದಲ್ಲ..ಒಂಬತ್ತು ಬಾರಿ. ಹಾಗೆಂದು ನಿರಾಶರಾಗಿ ಕೈಕಟ್ಟಿ ಕೊಂಡು ಕುಳಿತುಕೊಳ್ಳಲಿಲ್ಲ. ಬದಲಾಗಿ ಹತ್ತನೇ ಪ್ರಯತ್ನದಲ್ಲಿ ಕನಸನ್ನು ದಕ್ಕಿಸಿಕೊಂಡೇಬಿಟ್ಟರು.

ಸಾಂಬಾ ಸೆಕ್ಟರ್‌ನಲ್ಲಿ ಕಾರ್ಯ ನಿರ್ವಹಿಸು  ತ್ತಿರುವ ಪ್ರದೀಪ್‌ ಅಸೀಮ ಛಲ, ಸ್ಥೈರ್ಯ ಹಾಗೂ ಆತ್ಮಬಲದಿಂದ ರಾಷ್ಟ್ರದ ಗಡಿ ಕಾಯು ತ್ತಿದ್ದಾರೆ. “ನನ್ನ ಭಾರತ, ನನ್ನ ಹೆಮ್ಮೆ’ ಎನ್ನುತ್ತಾ ಯುವ ಸಮೂಹಕ್ಕೆ ಸ್ಫೂರ್ತಿಯ ಚಿಲುಮೆಯಾಗಿರುವವರು. ಅವರಿಗೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೋದರ ಮಾವನೇ ಸ್ಫೂರ್ತಿ. 

ಯೋಧರಾದ ತಮ್ಮ ಮಾವನಿಂದಲೇ ಉತ್ತೇಜನ ಪಡೆದು ಚಿಕ್ಕ ಪ್ರಾಯದಲ್ಲೇ ಸೈನಿಕ ನಾಗಬೇಕು ಎನ್ನುವ ನಿರ್ಧಾರ ತಳೆದಿದ್ದರು ಪ್ರದೀಪ್‌. 9 ಬಾರಿ ನೇಮಕಾತಿ ಪರೀಕ್ಷೆ ಬರೆದು ಫೇಲಾಗಿ 2011ರ ಎ. 15ರಂದು 10ನೇ ಪ್ರಯತ್ನದಲ್ಲಿ ಯಶಸ್ವಿಯಾದರು.

ಬಸೂÅರು ವಿಲಾಸಕೇರಿಯ ಜನಾರ್ದನ ಖಾರ್ವಿ ಹಾಗೂ ಗೌರಿ ಖಾರ್ವಿ ದಂಪತಿಯ ನಾಲ್ವರು (ಇಬ್ಬರು ಗಂಡು, ಇಬ್ಬರು ಹೆಣ್ಣು) ಮಕ್ಕಳ ಪೈಕಿ ಮೂರನೆಯವರು ಪ್ರದೀಪ್‌. ಬಸೂÅರಿನ ಹಿಂದೂ ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ನಿವೇದಿತಾ ಪ್ರೌಢಶಾಲೆಯಲ್ಲಿ ಹೈಸ್ಕೂಲ್‌ ಶಿಕ್ಷಣ ಹಾಗೂ ಪ.ಪೂ. ಶಿಕ್ಷಣವನ್ನು ಬಸೂÅರಿನ ಶಾರದಾ ಕಾಲೇಜಿನಲ್ಲಿ ಪೂರೈಸಿದರು. 

ಜನ್ಮದಿನದಂದೇ ಸೇನೆಗೆ ನೇಮಕ
ಪ್ರದೀಪ್‌ ಖಾರ್ವಿ 1988ರ ಎ. 15ರಂದು ಜನಿಸಿದ್ದು, ಜನ್ಮದಿನ ಅಂದರೆ 2011ರ ಎ.15 ರಂದು ಸೇನೆಗೆ ನೇಮಕಗೊಂಡು ತಮ್ಮ ಬದುಕಿನ ಅತ್ಯುನ್ನತ ಕನಸನ್ನು ಈಡೇರಿಸಿಕೊಂಡರು. ಹಾಗಾಗಿ ಆ ದಿನಕ್ಕೆ ಪ್ರತಿವರ್ಷವೂ ಇಮ್ಮಡಿ (ಡಬ್ಬಲ್‌) ಸಂಭ್ರಮ.

ವಿವಿಧೆಡೆ ಸೇವೆ
ಪ್ರದೀಪ್‌ ಅವರು ಗಡಿ ಭದ್ರತಾ ಪಡೆಯ ವಿವಿಧೆಡೆ 7 ವರ್ಷ ದುಡಿದಿದ್ದಾರೆ. 2011 ರಲ್ಲಿ ಯಲಹಂಕದಲ್ಲಿ 9 ತಿಂಗಳು ತರಬೇತಿ. ಅಲ್ಲಿಂದ ಎರಡೂವರೆ ವರ್ಷ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಿಯೋಜನೆ. 2014ರಿಂದ ಗಡಿ ರಾಜ್ಯ ಜಮ್ಮುವಿನಲ್ಲಿ ಸೇವೆ ಸಲ್ಲಿಕೆ. ಸದ್ಯ ಜಮ್ಮುವಿನ ಸಾಂಬಾ ಸೆಕ್ಟರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನಕ್ಸಲ್‌ ದಾಳಿಯ ನೆನಪು
ಛತ್ತೀಸ್‌ಗಢದಲ್ಲಿ ನಿಯೋಜನೆಗೊಂಡ 2ನೇ ದಿನ ನಕ್ಸಲ್‌ ದಾಳಿಗೆ 89 ಬೆಟಾಲಿಯನ್‌ ವಾಹನ ಬ್ಲಾಸ್ಟ್‌ ಆಗಿದ್ದ ನೆನಪು ಈಗಲೂ ಕಣ್ಣ ಮುಂದೆ ಬರುತ್ತದೆ ಎನ್ನುವ ಪ್ರದೀಪ್‌, 2016ರಲ್ಲಿ 2 ಸಲ ಗುಂಡಿನ ದಾಳಿಯಾಗಿದ್ದು, ಆ ಸಮಯದಲ್ಲಿ 3 ದಿನ ಸಂಪರ್ಕದಲ್ಲೇ ಇರಲಿಲ್ಲ. 3 ದಿನ ಹೊಟ್ಟೆಗೆ ಏನೂ ಇಲ್ಲದೇ ಇದ್ದೆವು. ಆದರೂ ದೇಶ ಕಾಯುವ ಕೆಲಸ ಬಹಳ ಶ್ರೇಷ್ಠವಾದದ್ದು ಎನ್ನುತ್ತಾರೆ ಅವರು.

ಏಳನೇ ತರಗತಿಯಲ್ಲಿದ್ದಾಗ ಸೇನೆಯಲ್ಲಿದ್ದ ಮಾವ ಗಣಪತಿ ಖಾರ್ವಿಯವರು ಒಂದು ಆಟಿಕೆ ಪಿಸ್ತೂಲು ನೀಡಿದ್ದರು. ಆಗಲೇ ನಾನು ಕೂಡ ಸೇನೆಗೆ ಸೇರಬೇಕು ಎನ್ನುವ ಆಸೆ ಬೆಳೆಯಿತು. ನಾನೀಗ ಸೇನೆಯಲ್ಲಿದ್ದೇನೆ ಅಂದರೆ ಅದಕ್ಕೆ ಮಾವನೇ ಸ್ಫೂರ್ತಿ. ನಾನೊಬ್ಬ ಯೋಧನಾಗಿರುವುದಕ್ಕೆ, ಭಾರತಾಂಬೆಯ ಸೇವೆ ಮಾಡುತ್ತಿರುವುದಕ್ಕೆ ತುಂಬಾ ಹೆಮ್ಮೆಯಿದೆ. ಎಲ್ಲರಿಗೂ ಈ ಅವಕಾಶ ಸಿಗದು.
– ಪ್ರದೀಪ್‌ ಖಾರ್ವಿ, ಯೋಧ, ವಿಲಾಸಕೇರಿ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.