ಸೆಳ್ಕೋಡು -ಗೋಳಿಗುಡ್ಡೆ ಧೂಳಿನ ಮಾರ್ಗಕ್ಕೆ ಮುಕ್ತಿ ಎಂದು?
Team Udayavani, Jan 27, 2019, 12:50 AM IST
ಕೊಲ್ಲೂರು: ಜಡ್ಕಲ್ ಗ್ರಾ,ಪಂ.ವ್ಯಾಪ್ತಿಯ ಸೆಳ್ಕೋಡು-ಗೋಳಿ ಗುಡ್ಡೆ ರಸ್ತೆ ಸಂಪೂರ್ಣ ಧೂಳುಮಯವಾಗಿದ್ದು, ನಿವಾಸಿಗಳು ಪರಿತಪಿಸುವಂತಾಗಿದೆ.
ಚುನಾವಣೆ ಸಂದರ್ಭ ಮಾತ್ರ ಭರವಸೆ
ಕಳೆದ ಹಲವು ವರ್ಷಗಳಿಂದ ಸೆಳ್ಕೋಡು ಬೇಕರಿಯಿಂದ ಸರಕಾರಿ ಶಾಲೆಗೆ ತೆರಳುವ 2 ಕಿ.ಮೀ. ರಸ್ತೆ ಹದಗೆಟ್ಟಿದ್ದರೂ ರಿಪೇರಿ ಆಗಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಎಚ್ಚೆತ್ತುಕೊಳ್ಳುವ ಜನಪ್ರತಿನಿಧಿಗಳು ಭರವಸೆ ನೀಡಿ ಬಳಿಕ ಜಾಣ ಮರೆವು ಪ್ರದರ್ಶಿಸುತ್ತಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಧೂಳು, ಹೊಂಡಮಯ ರಸ್ತೆ
ಧೂಳು ಮತ್ತು ಹೊಂಡ- ಗುಂಡಿಗಳಿರುವ ಮಾರ್ಗದಲ್ಲಿ ವಾಹನದಲ್ಲಿ ಅಥವಾ ಕಾಲ್ನಡಿಗೆಯಲ್ಲಿ ಸಾಗುವ ವಿದ್ಯಾರ್ಥಿಗಳ ಪಾಡು ದೇವರಿಗೇ ಪ್ರೀತಿ. ಈ ರಸ್ತೆಯನ್ನು ಅವಲಂಬಿಸಿ ಹೋಗುವವರಿಗೆ ಶಾಲೆ ಸೇರುವುದು ಹರಸಾಹಸವೇ ಸರಿ.
ಹಿಂದೆ ಇದ್ದ ಚರಂಡಿಯೂ ಈಗ ನಾಪತ್ತೆಯಾಗಿದ್ದು, ಗಮನ ವಹಿಸಬೇಕಾದ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
ಸುಮಾರು 600 ಮಂದಿ ಮರಾಠಿ ಜನಾಂಗದವರು ಈ ಭಾಗದಲ್ಲಿ ವಾಸವಿದ್ದು, 150 ಮನೆಗಳಿವೆ.
ಬಸ್ರಿಬೇರು, ಮೆಕ್ಕೆ, ತಲಕಾಣ ಹಾಗೂ ಸೆಳ್ಕೋಡು ಗ್ರಾಮದ ಮತದಾನ ಕೇಂದ್ರದ ಮುಖ್ಯ ರಸ್ತೆ ಇದಾಗಿದ್ದರೂ ಇಲ್ಲಿನ ಸಮಸ್ಯೆಗೆ ಮುಕ್ತಿ ಸಿಗದೇ ಇರುವುದು ವಿಪರ್ಯಾಸವೇ ಸರಿ.
ಮತದಾನ ಬಹಿಷ್ಕಾರ
ಸೆಳ್ಕೋಡು ಬೇಕರಿಯಿಂದ ಸರಕಾರಿ ಹಿ.ಪ್ರಾ.ಶಾಲೆವರೆಗೆ ಸಂಪೂರ್ಣ ಕಾಂಕ್ರೀಟೀಕರಣ ಅಥವಾ ಡಾಮರೀಕರಣವಾಗದಿದ್ದಲ್ಲಿ ಮುಂಬರುವ ಲೋಕಸಭಾ ಚುನಾವಣೆ ವೇಳೆ ಮತದಾನ ಬಹಿಷ್ಕರಿಸಲಾಗುವುದು. – ಬಸವ ನಾಯ್ಕ, ಸ್ಥಳೀಯರು.
ಹಣ ಬಿಡುಗಡೆ
ಇಲ್ಲಿನ ರಸ್ತೆ ದುರವಸ್ಥೆ ಬಗ್ಗೆ ಗಮನಕ್ಕೆ ಬಂದಿದೆ. ಬೈಂದೂರಿನ ಗ್ರಾಮೀಣ ಪ್ರದೇಶದ ರಸ್ತೆ ಅಭಿವೃದ್ಧಿಗೆ 100 ರೂ. ಕೋಟಿ ಅನುದಾನ ಬಿಡುಗಡೆಗೊಂಡಿದ್ದು ರಸ್ತೆ ಡಾಮರೀಕರಣಕ್ಕೆ ಅದ್ಯತೆ ಮೇರೆಗೆ ಹಣ ವಿನಿಯೋಗ ಮಾಡಲಾಗುವುದು. – ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕರು, ಬೆ„ಂದೂರು.
– ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು
Theft; 13 ರಾಜ್ಯಗಳಿಗೆ ಬೇಕಾಗಿದ್ದ ಕಳ್ಳ ಕೋಟದಲ್ಲಿ ಪೊಲೀಸರ ಬಲೆಗೆ!
MUST WATCH
ಹೊಸ ಸೇರ್ಪಡೆ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ