ಹೊಸಾಡು: ಕುಡಿಯುವ ನೀರಿನದ್ದೇ ಪ್ರಮುಖ ಸಮಸ್ಯೆ
Team Udayavani, Jan 31, 2019, 1:00 AM IST
ತ್ರಾಸಿ: ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಭಗತ್ನಗರ, ಖಾರ್ವಿಕೆರೆ ಗ್ರಾಮಸ್ಥರಿಗೆ ಈಗಲೇ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.
ಇಲ್ಲಿಯ 90 ಮನೆಗಳಿಗೆ ಒಂದೇ ಸರಕಾರಿ ಬಾವಿ ಇದೆ. ಒಂದು ಬೋರ್ವೆಲ್ ಕೊರೆಸಿದ್ದರೂ ಅದರಲ್ಲಿ ನೀರಿಲ್ಲ. 7-8 ಮನೆಗಳಲ್ಲಿ ಸ್ವಂತ ಬಾವಿಗಳಿದ್ದರೂ, ಹೆಚ್ಚಿನದ್ದು ಬತ್ತಿ ಹೋಗಿದೆ. ಖಾರ್ವಿಕೆರೆಯಲ್ಲಿರುವ ಗ್ರಾ.ಪಂ. ಬಾವಿಯಿಂದ ಟ್ಯಾಂಕ್ಗೆ ನೀರು ಹರಿಸಲಾಗುತ್ತದೆ. ಇದರಿಂದ ಕೇವಲ 1ಗಂಟೆ ಮಾತ್ರ ನೀರು ಸಸಿಗುತ್ತದೆ. ಕಳೆದ ಬಾರಿ ಮೇ ವರೆಗೆ ಬಾವಿಯಲ್ಲಿ ನೀರಿತ್ತು. ಈ ವರ್ಷ ನೀರು ಆಳಕ್ಕೆ ಹೋಗಿದ್ದು ಕೆಲವೇ ದಿನಗಳಲ್ಲಿ ಬತ್ತಿ ಹೋಗುವ ಸಂಭವವಿದೆ.
2 ದಿನಕ್ಕೊಮ್ಮೆ ನೀರು
ಭಗತ್ನಗರದಲ್ಲಿರುವ ಓವರ್ ಹೆಡ್ ಟ್ಯಾಂಕ್ನಲ್ಲಿ 25 ಸಾವಿರ ಲೀಟರ್ ನೀರು ಹಿಡಿಯ ಬಹುದಾಗಿದ್ದರೂ 20 ಸಾವಿರ ಲೀಟರ್ ನೀರು ಮಾತ್ರ ತುಂಬುತ್ತಿದೆ. 100 ಮನೆಗಳಿಗೆ ಹೆಚ್ಚೆಂದರೆ 5-6 ಕೊಡ ನೀರು ಮಾತ್ರ ಸಿಗುತ್ತಿದೆ. ತಗ್ಗು ಪ್ರದೇಶದಲ್ಲಿದ್ದವರಿಗೆ ತುಸು ಹೆಚ್ಚು ಸಿಗುತ್ತದೆ. ಒಂದು ದಿನ ಭಗತ್ನಗರ ಹಾಗೂ ಮತ್ತೂಂದು ದಿನ ಖಾರ್ವಿಕೆರೆಗೆ 2 ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ.
ನೀರಿನ ಸಮಸ್ಯೆ ಗಂಭೀರ
ಇಲ್ಲಿನ ಇಷ್ಟೂ ಮನೆಗಳಿಗೆ ಒಂದೇ ಬಾವಿಯಿಂದ ನೀರು ಪೂರೈಸಬೇಕಾಗಿ ರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ. ಅದೂ ಹೆಚ್ಚು ನೀರು ಸಿಗುವುದಿಲ್ಲ. ಶಾಶ್ವತ ಪರಿಹಾರ ಎನ್ನುವಂತೆ ಬೋರ್ವೆಲ್ ಅಥವಾ ತೆರೆದ ಬಾವಿ ತೋಡಿಸಿದರೆ ಸಮಸ್ಯೆ ನಿವಾರಣೆಯಾಗಬಹುದು.
– ಸುರೇಶ್, ಸ್ಥಳೀಯರು
– ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು
Sand Mining; ಉದ್ಯಾವರ: ಚುನಾವಣ ಚೆಕ್ಪೋಸ್ಟ್ ಬಳಿ ಅಕ್ರಮ ಮರಳು ಸಾಗಾಟ ಪತ್ತೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ