ಹೆಸರಿಗೆ ಮಾತ್ರ ಬೈಂದೂರು ಹೊಸ ತಾಲೂಕು
Team Udayavani, Feb 14, 2019, 1:00 AM IST
ಬೈಂದೂರು: ಬಹುನಿರೀಕ್ಷಿತ ಬೈಂದೂರು ತಾಲೂಕು ಘೋಷಣೆಯಾಗಿ ಒಂದು ವರ್ಷ ಕಳೆದಿದೆ. ಆದರೆ ಈ ಘೋಷಣೆ ಕಡತಕ್ಕೆ ಮಾತ್ರ ಸೀಮಿತವಾಗಿದ್ದು, ಯಾವುದೇ ಸವಲತ್ತುಗಳೂ ಸಿಕ್ಕಿಲ್ಲ.
ನಾಲ್ಕು ದಶಕಗಳ ಹೋರಾಟ
1984ರಿಂದ ಬೈಂದೂರು ತಾ.ಹೋರಾಟ ಶುರುವಾಗಿದ್ದು 2018ರ ಬಜೆಟ್ನಲ್ಲಿ ತಾಲೂಕು ಘೋಷಣೆಯಾಗಿತ್ತು. ಹೊಸ ತಾಲೂಕಿನಲ್ಲಿ ಒಟ್ಟು 20 ಗ್ರಾಮಗಳಿವೆ. ಒಟ್ಟು 1,42,911.50 ಎಕ್ರೆ ವಿಸ್ತಿರ್ಣ ಹೊಂದಿದೆ.
ಸೌಲಭ್ಯಗಳು ಸಿಕ್ಕಿಲ್ಲ
ಹೊಸ ತಾಲೂಕು ಉದ್ಘಾಟನೆಯಾದ ಬಳಿಕ ವಿಶೇಷ ತಹಶೀಲ್ದಾರ್ ಕಚೇರಿ ಫಲಕ ತಾಲೂಕು ದಂಡಾಧಿಕಾರಿಗಳ ಕಚೇರಿ ಎಂದು ಬೋರ್ಡ್ ಮಾತ್ರ ಬದಲಾವಣೆಯಾಗಿದೆ. ಒಟ್ಟು 21 ಕಚೇರಿಗಳು ಸದ್ಯ ಕಾರ್ಯನಿರ್ವಹಿಸುತ್ತಿವೆ. ಆದರೆ ಪಡಿತರ ವ್ಯವಸ್ಥೆ, ಆಹಾರ ವಿಭಾಗ, ಭೂನ್ಯಾಯ ಮಂಡಳಿ ಇದುವರೆಗೂ ಕಚೇರಿಗೆ ಬಂದಿಲ್ಲ. ತಾಲೂಕು ಪಂಚಾಯತ್, ನ್ಯಾಯಾಲಯ ಸಂಕೀರ್ಣಕ್ಕಾಗಿ ಜನರು ಕಾಯುವಂತಾಗಿದೆ.
ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಬೇಕು
ಈ ತಾಲೂಕಿನ ಜನರಿಗೆ ಅವಶ್ಯವಿರುವುದು ತಾ| ಆಸ್ಪತ್ರೆ. 30 ಬೆಡ್ಗಳಿರುವ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿದರೆ 100 ಹಾಸಿಗೆ ಆಸ್ಪತ್ರೆಯಾಗಲಿದೆ. ಆದರೆ ಈ ಬಗ್ಗೆ ಸರಕಾರ ಮನಸ್ಸು ಮಾಡಿಲ್ಲ. ಉತ್ತಮ ವೈದ್ಯಾಧಿಕಾರಿಗಳ ತಂಡವಿದ್ದರೂ ಸೌಲಭ್ಯಗಳಿಲ್ಲದ್ದರಿಂದ ಜನ ಸಣ್ಣಪುಟ್ಟ ಸಮಸ್ಯೆ ಪರಿಹಾರಕ್ಕೂ 40 ಕಿ.ಮೀ. ದೂರದ ಕುಂದಾಪುರಕ್ಕೆ ತೆರಳಬೇಕಾಗಿದೆ.
ಅನುದಾನ ಬೇಕು
ತಾಲೂಕಿಗೆ ಅಗತ್ಯವಿರುವ ಕಚೇರಿಗಳನ್ನು ಶೀಘ್ರ ಆರಂಭಿಸಲು ಮುಖ್ಯಮಂತ್ರಿಗಳಿಗೆ ಹಾಗೂ ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ. ಅಗ್ನಿಶಾಮಕ ಠಾಣೆ,ತಾಲೂಕು ಆಸ್ಪತ್ರೆ ಮುಂತಾದವುಗಳನ್ನು ಆದಷ್ಟು ಶೀಘ್ರ ಆರಂಭಿಸಲು ಸರಕಾರ ಅನುದಾನ ನೀಡಬೇಕಾಗಿದೆ.
-ಬಿ. ಜಗನ್ನಾಥ ಶೆಟ್ಟಿ, ಅಧ್ಯಕ್ಷರು, ಬೈಂದೂರು, ತಾ| ರಚನೆ ಮತ್ತು ಅಭಿವೃದ್ಧಿ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
MUST WATCH
ಹೊಸ ಸೇರ್ಪಡೆ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ