ಇ -ಹಾಜರಾತಿ: ದ.ಕ., ಉಡುಪಿಗೆ ಅಗ್ರಸ್ಥಾನ


Team Udayavani, Feb 17, 2019, 4:18 AM IST

bio.jpg

ಕುಂದಾಪುರ: ಪಂಚಾಯತ್‌ ರಾಜ್‌ ಇಲಾಖೆಯ ಪಂಚತಂತ್ರ ತಂತ್ರಾಂಶದ ಮೂಲಕ ಹಾಕುವ ಇ-ಹಾಜರಾತಿಯಲ್ಲಿ ರಾಜ್ಯ ಮಟ್ಟದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳು ಅಗ್ರಸ್ಥಾನದಲ್ಲಿವೆ. 
ಆದರೆ ಕೆಳಹಂತದ ಅಧಿಕಾರಿಗಳು ಈ ಸಾಧನೆಯನ್ನು ಶೇ.100ಕ್ಕೆ ಕೊಂಡೊಯ್ದರೆ ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳು ಮಾತ್ರ ಬಳಸುತ್ತಿಲ್ಲ. ಹಾಗಾಗಿ ಕಡ್ಡಾಯ ಡಿಜಿಟಲ್‌ ಹಾಜರಾತಿ ಮೇಲಿನ ಸ್ತರದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ.

ಪಾರದರ್ಶಕ ಕಾಯಿದೆಯನ್ವಯ ಈ ತಂತ್ರಾಂಶದಲ್ಲಿ ಅನೇಕ ಅನುಕೂಲಗಳಿವೆ. ನಾಗರಿಕರು ರಾಜ್ಯದ ಯಾವುದೇ ಜಿ.ಪಂ., ತಾ.ಪಂ., ಗ್ರಾ.ಪಂ.ಗಳ ಚಟುವಟಿಕೆಗಳ ಮಾಹಿತಿ ಅಂಗೈಯಲ್ಲೆ ಲಭ್ಯ. ಈ ಸಂಸ್ಥೆಗಳಲ್ಲಿನ ಸಿಬಂದಿಗಳ ಸಂಖ್ಯೆ, ಅವರ ಹಾಜರಾತಿ ವಿವರ, ಅನುದಾನ ಬಳಕೆ, ಪಂಚಾಯತ್‌ ಸೊತ್ತುಗಳು, ಕಾಮಗಾರಿ ಹಾಗೂ ಸದಸ್ಯರ ವಿವರಗಳು ಇದರಲ್ಲಿ ಲಭ್ಯ.

ಮಾಹಿತಿಯಿಲ್ಲ
ರಾಜ್ಯದಲ್ಲಿ 6,024 ಗ್ರಾ.ಪಂ.ಗಳಿದ್ದು, ಈ ಪೈಕಿ 5,650ರಲ್ಲಿ ಇ ಹಾಜರಾತಿ ಅಳವಡಿಕೆಯಾಗಿದ್ದರೆ, 4,052ರಲ್ಲಿ ಬಳಕೆಯಾಗುತ್ತಿದೆ. ಜ.30ರ ಮಾಹಿತಿಯಂತೆ ಉಡುಪಿ, ದ.ಕ., ಬೆಂಗಳೂರು ಗ್ರಾಮಾಂ ತರ, ಕೊಡಗು, ಮೈಸೂರು, ಉ.ಕ. ಜಿಲ್ಲೆಗಳನ್ನು ಬಿಟ್ಟರೆ ಇತರ ಬಹುತೇಕ ಜಿಲ್ಲೆಗಳ ಅಧಿಕಾರಿಗಳ ಹಾಜರಾತಿ ಮಾಹಿತಿ ಅಪ್‌ಡೇಟ್‌ ಆಗಿಲ್ಲ. 

ಪಂಚಾಯತ್‌ಗಳು
ಉಡುಪಿಯಲ್ಲಿ ಶೇ. 98, ದ.ಕ. ಶೇ.96 ಇದ್ದರೆ ಕಲಬುರ್ಗಿಯಲ್ಲಿ ಕನಿಷ್ಠ ಶೇ.10 ಇದೆ. ಕುಂದಾಪುರ ಶೇ.98, ಉಡುಪಿ ಶೇ.98, ಕಾರ್ಕಳ ಶೇ.94, ಸುಳ್ಯ ಶೇ.100, ಪುತ್ತೂರು ಶೇ.97, ಬಂಟ್ವಾಳ ಶೇ. 96, ಬೆಳ್ತಂಗಡಿ ಶೇ.95, ಮಂಗಳೂರು ಶೇ.94 ಹಾಜರಾತಿ ಇದೆ. 

ಕುಂದಾಪುರದ ಬೆಳ್ವೆ, ಉಡುಪಿಯ ಆವರ್ಸೆ, ಕಾರ್ಕಳದ ನೀರೆ, ಇರ್ವತ್ತೂರು, ಪುತ್ತೂರಿನ ಬಡಗನ್ನೂರು, ಬಂಟ್ವಾಳದ ಕಡೇಶ್ವಾಲ್ಯ, ಬರಿಮಾರು, ಬೆಳ್ತಂಗಡಿಯ ತಣ್ಣೀರುಪಂತ, ಬಾರ್ಯ, ಮಂಗಳೂರಿನ ಬೋಳಿಯಾರು, ತಲಪಾಡಿ, ಶಿರ್ತಾಡಿ ಪಂ.ಗಳ ಮಾಹಿತಿ ಅಪ್‌ಡೇಟ್‌ ಆಗಿಲ್ಲ. ಈ ಕುರಿತು ಮಾತನಾಡಿದ ಬೆಳ್ವೆ ಪಿಡಿಒ ಪ್ರಭಾಶಂಕರ ಪುರಾಣಿಕ್‌, ವಾರದಿಂದ ಇಂಟರ್ನೆಟ್‌ ಸಮಸ್ಯೆಯಿಂದ ಅಪ್‌ಡೇಟ್‌ ಆಗಿಲ್ಲ. ಇ -ಹಾಜರಾತಿಯ ಬಳಕೆಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ ಎಂದಿದ್ದಾರೆ.

ಇವರ ಕಥೆ ಬೇರೆಯೇ
ಇದಿಷ್ಟು ಕೆಳಹಂತದ ಅಧಿಕಾರಿಗಳದ್ದಾದರೆ, ತಾ.ಪಂ., ಜಿ.ಪಂ. ಅಧಿಕಾರಿ- ಸಿಬಂದಿಯದು ಬೇರೆ. ತಾ.ಪಂ. ಹಾಜರಾತಿಯಲ್ಲಿ ಉಡುಪಿ 18ನೇ ಸ್ಥಾನ, ದ.ಕ. 21ನೇ ಸ್ಥಾನದಲ್ಲಿದೆ. ಬೆಂಗಳೂರು, ಮೈಸೂರು, ಉ.ಕ., ಚಿಕ್ಕಬಳ್ಳಾಪುರ ಜಿಲ್ಲೆಗಳ ತಾ.ಪಂ.ಗಳು ಶೇ.100ರಲ್ಲಿದ್ದರೆ, ಉಡುಪಿ ಶೇ.66, ದ.ಕ. ಶೇ.60  ಹಾಜರಾತಿ ತೋರಿಸುತ್ತಿವೆ. ಇಲ್ಲೂ  ಕಲಬುರಗಿ ಜಿಲ್ಲೆ ಕನಿಷ್ಠ ಶೇ.14ರಲ್ಲಿದೆ. ರಾಜ್ಯದ 176 ತಾ.ಪಂ.ಗಳ ಪೈಕಿ 169ರಲ್ಲಿ ಇ ಹಾಜರಾತಿ ವ್ಯವಸ್ಥೆ ಅಳವಡಿಸಿದ್ದು, ಜ.30ರಂದು 118 ತಾ.ಪಂ.ಗಳ ಮಾಹಿತಿ ಅಪ್‌ಡೇಟ್‌ ಆಗಿದೆ. 

ಅಸಡ್ಡೆ
ಎಲ್ಲ ಜಿ.ಪಂ.ಗಳಲ್ಲಿ ಇ-ಹಾಜರಾತಿ ಅಳವಡಿಸಿದ್ದರೂ ಅಧಿಕಾರಿಗಳ ಅಸಡ್ಡೆ ಎದ್ದುಕಾಣುತ್ತಿದೆ. ಏಕೆಂದರೆ ಗ್ರಾ.ಪಂ.ಗಳಂತೆ ಇವರಿಗೆ ಇಂಟರ್‌ನೆಟ್‌ ಸಮಸ್ಯೆ ಇಲ್ಲ. ಹಾಗಿದ್ದರೂ ಬೆಂಗಳೂರು, ಬೆಂ. ಗ್ರಾಮಾಂತರ, ಬೀದರ್‌, ಕೊಪ್ಪಳ ಮೊದಲಾದವು ಕನಿಷ್ಠ ಹಾಜರಾತಿ ತೋರಿಸುತ್ತಿವೆ. ದ. ಕನ್ನಡದ 91 ಮಂದಿಯ ಪೈಕಿ 26, ಉಡುಪಿಯ 62 ಮಂದಿಯ ಪೈಕಿ 26 ಮಂದಿಯ ಹಾಜರಾತಿ ಮಾತ್ರ ದಾಖಲಾಗಿದೆ. ಬಹುತೇಕ ಜಿ.ಪಂ. ಗಳಲ್ಲಿ ಅರ್ಧದಷ್ಟು ಅಧಿ ಕಾರಿ ಗಳೂ ಇದನ್ನು ಪಾಲಿಸುತ್ತಿಲ್ಲ ಎನ್ನುತ್ತದೆ ಪಂಚತಂತ್ರದ ಅಂಕಿಅಂಶಗಳು.

ನಿರ್ದೇಶಿಸಲಾಗಿದೆ
ಇ- ಹಾಜರಾತಿ ಹಾಕುವಂತೆ ಎಲ್ಲರಿಗೂ ಸೂಚಿಸಲಾಗಿದೆ. ಬಯೋಮೆಟ್ರಿಕ್‌ ಮೂಲಕ ಹಾಜರಾತಿ ಹಾಕುತ್ತಿದ್ದರೂ ತಂತ್ರಾಂಶದಲ್ಲಿನ ಹಿನ್ನಡೆಗೆ ಸ್ಪಷ್ಟ ಕಾರಣದ ಅರಿವಿಲ್ಲ. 
 ಸಿಂಧೂ ಬಿ. ರೂಪೇಶ್‌, ಉಡುಪಿ ಜಿ.ಪಂ. ಸಿಇಒ

ಕಾರಣ ಕೇಳಿ  ನೋಟಿಸ್‌
ಸಿಬಂದಿ ಕಚೇರಿಗೆ ತಡವಾಗಿ ಬರುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಡಿಸೆಂಬರ್‌ನಲ್ಲಿ ಕಾರಣ ಕೇಳಿ ನೋಟಿಸ್‌ ಕೊಡಲಾಗಿದೆ. ಫೆಬ್ರವರಿಯಿಂದ ಇ- ಹಾಜರಾತಿ ಆಧಾರದಲ್ಲೇ ವೇತನ ನೀಡುವುದಾಗಿ ತಿಳಿಸಲಾಗಿದೆ.
ಡಾ| ಆರ್‌. ಸೆಲ್ವಮಣಿ,  ದ.ಕ. ಜಿ.ಪಂ. ಸಿಇ

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.