ಆಲೂರು : ಬಲೆಗೆ ಬಿದ್ದ ಗಂಡು ಚಿರತೆ
Team Udayavani, Feb 23, 2019, 12:50 AM IST
ಕುಂದಾಪುರ: ಆಲೂರು ಗ್ರಾಮದ ಹುಯ್ಯಾಣ ಎನ್ನುವಲ್ಲಿ ಊರವರು ಮತ್ತು ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 9ರ ಹರೆಯದ ಗಂಡು ಚಿರತೆಯೊಂದು ಬಲೆಗೆ ಬಿದ್ದಿದೆ.
ಇಲ್ಲಿನ ಪೊದೆಯೊಂದರಲ್ಲಿ ಅವಿತು ಕೊಂಡಿರುತ್ತಿದ್ದ ಚಿರತೆ ಪೊದೆ ಸಮೀಪದ ತಂತಿ ಬೇಲಿಗೆ ಸಿಲುಕಿದ್ದು ಅದನ್ನು ಸ್ಥಳೀಯರು ಕಂಡು ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ತಂತಿ ಬೇಲಿಗೆ ಹೊಂದಿಕೊಂಡು ಸುತ್ತಲೂ ಬಲೆ ಹಾಕಿ ತಂತಿ ಅಗಲಿಸಿ ಚಿರತೆ ಹೊರಬರಲು ಅನುವು ಮಾಡಿಕೊಟ್ಟು ಸೆರೆ ಹಿಡಿದು ಸುರಕ್ಷಿತವಾಗಿ ಬೇರೆಡೆಗೆ ಬಿಡಲಾಗಿದೆ.
ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಡಿಆರ್ಎಫ್ಗಳಾದ ಆಲೂರಿನ ದಿಲೀಪ್, ಕುಂದಾಪುರದ ಉದಯ, ನೇರಳಕಟ್ಟೆಯ ಹೇಮಾ, ಸಿಬಂದಿಯಾದ ಉದಯ, ಮಂಜುನಾಥ್, ಬಸವರಾಜು, ಹರಿಪ್ರಸಾದ್, ಚಾಲಕ ಅಶೋಕ್ ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yugadi: ಯುಗಾದಿ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ