ಬೆಡ್‌ಶೀಟ್‌ ಕದ್ದವರಿಗಿಲ್ಲ ಶಿಕ್ಷೆ


Team Udayavani, Mar 10, 2018, 5:27 PM IST

man.jpg

ಮಂಡ್ಯ: ಶ್ರವಣಬೆಳಗೊಳದಲ್ಲಿ ಬೆಡ್‌ಶೀಟ್‌, ದಿಂಬು ಕದ್ದು ಸಿಕ್ಕಿಹಾಕಿಕೊಂಡ ಪೊಲೀಸ್‌ ಪೇದೆಗಳಿಗೆ ಶಿಕ್ಷೆ ನೀಡಲು ಕ್ರಮ ವಹಿಸದ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಪೊಲೀಸ್‌ ಪೇದೆಯೊಬ್ಬನ ಮೇಲೆ ದುರ್ವರ್ತನೆ ಆರೋಪದ ಮೇಲೆ ಅಮಾನತು ಶಿಕ್ಷೆಗೊಳಪಡಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ದ್ವಂದ್ವ ನೀತಿ: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ರಾಮಕೃಷ್ಣ ಅಮಾನತುಗೊಂಡ ಪೇದೆ. ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಪೊಲೀಸ್‌ ಠಾಣೆಯ ದಫೇದಾರ್‌ಗಳಾದ ಶ್ರೀನಿವಾಸ್‌ ಮತ್ತು ಯೋಗಣ್ಣ ಹಾಸನ ಜಿಲ್ಲೆ ಶ್ರವಣಬೆಳಗೊಳದಲ್ಲಿ ಕಂಬಳಿ ಕದ್ದು ಸಿಕ್ಕಿಬಿದ್ದಿದ್ದರು. ಕರ್ತವ್ಯದಲ್ಲಿ ದುರ್ನಡತೆ ಯಿಂದ ವರ್ತಿಸಿರುವ ಬಗ್ಗೆ ಫೆ.8ರಂದೇ ತಿಳಿಸಿದ್ದರು. ಇದಕ್ಕೆ ಕ್ರಮ ಜರುಗಿಸದಿರುವುದು ಇಲಾಖೆ ದ್ವಂದ್ವ ನೀತಿಗೆ ಕಾರಣವಾಗಿದೆ.

ಸಂದೇಶ ರವಾನೆ: ಮಹಾಮಸ್ತಕಾಭಿಷೇಕದ ಬಂದೋಬಸ್ತ್ ಕರ್ತವ್ಯಕ್ಕೆ ಶ್ರೀನಿವಾಸ್‌ ಮತ್ತು ಯೋಗಣ್ಣ ಅವರನ್ನು ನಿಯೋಜಿಸಲಾಗಿತ್ತು. ಶ್ರವಣಬೆಳಗೊಳಗದ ಪೊಲೀಸ್‌ ನಗರದಲ್ಲಿ ವಸತಿ ಗೃಹದ ಬೆಡ್‌ಶೀಟ್‌ ಮತ್ತು ದಿಂಬುಗಳನ್ನು ಕಳವು ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದರು. 

ಕರ್ತವ್ಯದಲ್ಲಿದ್ದುಕೊಂಡು ದುರ್ವರ್ತನೆ ಪ್ರದರ್ಶಿಸಿದರೆಂಬ ಕಾರಣಕ್ಕೆ ಅವರನ್ನು ಫೆ.8ರಂದೇ ಹಾಸನ ಜಿಲ್ಲಾ
ಪೊಲೀಸ್‌ ಅಧೀಕ್ಷಕರು ಕರ್ತವ್ಯದಿಂದ ಬಿಡುಗಡೆ ಮಾಡಿ ಮಂಡ್ಯ ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ ಸಂದೇಶ ರವಾನಿಸಿದ್ದರು.

ಆರೋಪ: ದುರ್ನಡತೆ ಪ್ರದರ್ಶಿಸಿದ ಪೊಲೀಸ್‌ ಪೇದೆಗಳಾದ ಶ್ರೀನಿವಾಸ್‌ ಮತ್ತು ಯೋಗಣ್ಣ ಅವರನ್ನು ಇಂದಿಗೂ ಕರ್ತವ್ಯದಲ್ಲಿ ಉಳಿಸಿಕೊಂಡಿದ್ದು, ಅನಾರೋಗ್ಯ ಕಾರಣಕ್ಕೆ ರಜೆ ಕೇಳಿದ ರಾಮಕೃಷ್ಣ ಅವರನ್ನು ಇದಕ್ಕೆ ಪ್ರಶ್ನೆ
ಮಾಡಿದರೆಂಬ ಒಂದೇ ಕಾರಣಕ್ಕೆ ದುರ್ನಡತೆ ಆರೋಪದಡಿ ಅಮಾನತು ಮಾಡಲಾಗಿದೆ.

ರಾಮಕೃಷ್ಣರ ವರ್ತನೆ ದುರ್ನಡತೆಯಾದಲ್ಲಿ ಹಾಸಿಗೆ ದಿಂಬು ಕದ್ದವರದ್ದು ಯಾವ ನಡತೆ ಎಂದು ಇಲಾಖೆಯವರೇ ಪ್ರಶ್ನೆ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. 

ಶಿಸ್ತುಕ್ರಮ ಕಡ್ಡಾಯ: ಶ್ರವಣಬೆಳಗೊಳದಲ್ಲಿ ಬೆಡ್‌ಶೀಟ್‌, ದಿಂಬು ಕಳವು ಮಾಡಲು ಯತ್ನಿಸಿದ ಶ್ರೀನಿವಾಸ ಮತ್ತು ಯೋಗಣ್ಣನವರ ವಿರುದ್ಧವೂ ಶಿಸ್ತು ಕ್ರಮ ಜರುಗಿಸುತ್ತೇವೆ. ನಮಗೆ ಹಾಸನ ಪೊಲೀಸ್‌ ಅಧೀಕ್ಷಕರಿಂದ ವರದಿ ಬರಬೇಕಿದೆ. ಅಲ್ಲಿಂದ ಬರುವ ವರದಿ ಆಧರಿಸಿ ವಿಚಾರಣೆ ನಡೆಸಿ ಬಳಿಕ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕಿ ಜಿ. ರಾಧಿಕಾ ಸ್ಪಷ್ಟಪಡಿಸಿದರು. 

ಪೇದೆ ರಾಮಕೃಷ್ಣ ಅವರು ಅನಧಿಕೃತ ರಜೆ ಹಾಗೂ ಮೇಲಧಿಕಾರಿಗಳೊಂದಿಗೆ ದುರ್ವರ್ತನೆ ಪ್ರದರ್ಶಿಸಿದ್ದಾರೆ. ಇದು ಒಮ್ಮೆ ನಡೆದಿರುವ ಘಟನೆಯಲ್ಲ. ಹಲವು ಬಾರಿ ಇದೇ ವರ್ತನೆ ನಡೆಸಿದ್ದರಿಂದ ಅಮಾನತುಪಡಿಸಲಾಗಿದೆ.
ಜಿ.ರಾಧಿಕಾ , ಜಿಲ್ಲಾ ಪೊಲೀಸ್‌ ಅಧೀಕ್ಷಕಿ 

ಮಹಿಳೆಯರೊಂದಿಗೆ ಪೊಲೀಸರ ಅನುಚಿತ ವರ್ತನೆ 
 ಪಾಂಡವಪುರ: ಅಗಲಿದ ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯನವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿದ್ದ ವೇಳೆ ಅವರಿಗೆ ಮನವಿ ಕೊಡಲು ಯತ್ನಿಸಿದ ಮಹಿಳೆಯರನ್ನು ದೂರ ತಳ್ಳಿ ಪೊಲೀಸರು ದೌರ್ಜನ್ಯ ಪ್ರದರ್ಶಿಸಿದ್ದಾರೆ.
 
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದೇ ಪೊಲೀಸರು ಮಹಿಳೆಯರೊಂದಿಗೆ ದರ್ಪ ಪ್ರದರ್ಶಿಸುವ
ಮೂಲಕ ಅಮಾನವೀಯವಾಗಿ ನಡೆದು ಕೊಂಡಿದ್ದಾರೆ. ಪೊಲೀಸರ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನಡೆದ ಪುಟ್ಟಣ್ಣಯ್ಯ ಶ್ರದ್ಧಾಂಜಲಿ  ಕಾರ್ಯಕ್ರಮ ಮುಗಿಸಿ ಕಾರಿನತ್ತ ತೆರಳುತ್ತಿದ್ದ
ವೇಳೆ, ಲೋಕಾಯುಕ್ತರಿಗೆ ಯುವಕನೊಬ್ಬ ಚಾಕು ಹಾಕಿದ ಪ್ರಕರಣವನ್ನು ಮುಂದಿಟ್ಟು ಕೊಂಡು ಇಬ್ಬರು ಮಹಿಳೆಯರು ಭದ್ರತೆ ನೆಪದಲ್ಲಿ ಮನವಿ ಕೊಡಲು ಮುಂದಾದ ಮಹಿಳೆಯರಿಗೆ ಈ ಅವಸ್ಥೆ ಎದುರಾಗಿದೆ.

ಮನವಿ ಕೊಡುವ ವೇಳೆ ಸಿಎಂ ಅವರತ್ತ ತಿರುಗಿಯೂ ನೋಡದೆ ಕಾರಿನಲ್ಲಿ ಕುಳಿತರು. ಆದರೆ ಅಲ್ಲೇ ಇದ್ದ ಪೊಲೀಸರು ಇಬ್ಬರೂ ಮಹಿಳೆಯರ ರಟ್ಟೆ ಹಿಡಿದು ದೂರಕ್ಕೆ ನೂಕಿದರು. ಅಲ್ಲದೆ, ಇದೇ ವೇಳೆ ಮನವಿ ನೀಡಲು ಮುಂದಾದ ವೃದ್ಧರೊಬ್ಬರ ಕುತ್ತಿಗೆ ಹಿಡಿದು ಬಹುದೂರ ಕರೆದುಕೊಂಡು ಹೋಗಿ ದರ್ಪ ಪ್ರದರ್ಶಿಸಿದ್ದಾರೆ. 

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.