ಹಲಗೂರು ಬಳಿ ಹೆಬ್ಟಾವು ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ
Team Udayavani, Dec 13, 2018, 4:33 PM IST
ಮಳವಳ್ಳಿ: ನಿಟ್ಟೂರು ಕೋಡಿಹಳ್ಳಿ ಮತ್ತು ಎಚ್.ಬಸಾಪುರ ಗ್ರಾಮದ ಮಧ್ಯೆ ಇರುವ ಇಗ್ಗಲೂರು ನಾಲೆಯ ಬಳಿ ಮಂಗಳವಾರ ರಾತ್ರಿ ಹೆಬ್ಟಾವು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.
ತಾಲೂಕಿನ ವಳಗೆರೆ ದೊಡ್ಡಿಗ್ರಾಮದ ಆನಂದ್ ಕಾರ್ಯನಿಮಿತ್ತ ನಿಟ್ಟೂರು ಗ್ರಾಮಕ್ಕೆ ತೆರಳಿ ವಾಪಸ್ ಸ್ವ-ಗ್ರಾಮಕ್ಕೆ ತೆರಳುತ್ತಿದ್ದಾಗ ಇಗ್ಗಲೂರು ನಾಲೆಯ ಸಮೀಪದಲ್ಲಿರುವ ರಾಮು ತೋಟದ ಬಳಿ ಸುಮಾರು 12 ಅಡಿ ಉದ್ದದ ಹೆಬ್ಟಾವು ಹೋಗುತ್ತಿದ್ದನ್ನು ನೋಡಿ ಗಾಬರಿಗೊಂಡರು. ಕೂಡಲೇ ನಿಟ್ಟೂರು ಕೋಡಿಹಳ್ಳಿ ಮತ್ತು
ಬಸಾಪುರ ಗ್ರಾಮದವರಿಗೆ ವಿಷಯ ತಿಳಿಸಿದಾಗ ಹೆಬ್ಟಾವನ್ನು ನೋಡಲು ಜನರದಂಡೆ ಸ್ಥಳದಲ್ಲಿ ಜಮಾಯಿಸಿತು.
ನಿಟ್ಟೂರು ಕೋಡಿಹಳ್ಳಿ ಗ್ರಾಮದ ವಾಸಿ ರುಕ್ಕು ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ ಮೇರೆಗೆ ಅರಣ್ಯರಕ್ಷಕ ತಾಜು ಫ್ರಾನ್ಸಿಸ್, ಬಸವಣ್ಣ ಸ್ಥಳಕ್ಕೆ ಭೇಟಿ ನೀಡಿ ಹೆಬ್ಟಾವನ್ನು ಸುರಕ್ಷಿತವಾಗಿ ತೆಗೆದುಕೊಂಡು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟರು. ಈ ಸಂದರ್ಭದಲ್ಲಿ ರುಕ್ಕು ಮಾತನಾಡಿ, ಗ್ರಾಮಸ್ಥರು ಈಗಾಗಲೇ ಚಿರತೆಗಳ ಹಾವಳಿಯಿಂದ ಭಯಭೀತರಾಗಿದ್ದಾರೆ.
ಸಾಕು ಪ್ರಾಣಿಗಳಾದ ಆಡು, ಕುರಿ, ಮತ್ತು ಸಾಕು ನಾಯಿಗಳನ್ನು ಹಿಡಿದು ತಿನ್ನುತ್ತಿರುವುದರಿಂದ ನಮಗೆ ರಾತ್ರಿ ವೇಳೆ ಹೊರ ಬರಲು ಭಯ ಪಡುವ ಪರಿಸ್ಥಿತಿ ಇದೆ. ಇದರ ಜೊತೆಗೆ ಈಗ ಹೆಬ್ಟಾವು ಕಾಣಿಸಿಕೊಂಡು ಜನರ ಆತಂಕವನ್ನು ಹೆಚ್ಚಿಸಿದೆ. ನಾವು ಹೊಲ-ಗದ್ದೆಗಳಿಗೆ ಹೋಗುವುದಕ್ಕೂ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.
ಅಂತರಹಳ್ಳಿ ಗುಡ್ಡ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಂಡು ರೈತರು ಆತಂಕದಲ್ಲಿದ್ದಾರೆ. ಚಿರತೆ ಸೆರೆಗೆ ಬೋನು ಇಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್