ಗೆಳೆಯನ ಅಗಲಿಕೆ ಅರಗಿಸಿಕೊಳ್ಳಲಾಗದ ನೋವಿನಲ್ಲಿ ಸ್ನೇಹಿತರು


Team Udayavani, Feb 16, 2019, 7:26 AM IST

geleyan.jpg

ಮಂಡ್ಯ: ತನ್ನ ವಿಶೇಷ ಗುಣದಿಂದಲೇ ಎಲ್ಲರ ಮೆಚ್ಚುಗೆ ಗಳಿಸಿದ್ದ ಯೋಧ ಗುರು ಅವರ ಅಗಲಿಕೆಯನ್ನು ಕುಟುಂಬದವರು ಮತ್ತು ಸ್ನೇಹಿತರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಗುರುವನ್ನು ಬಲಿ ತೆಗೆದುಕೊಂಡ ಉಗ್ರರಿಗೆ ತಕ್ಕ ಶಿಕ್ಷೆ ಆಗಲೇಬೇಕೆಂಬ ಒತ್ತಾಯ ಮಾಡುತ್ತಿದ್ದಾರೆ.

ಗುರು ಪ್ರೀತಿ, ವಿಶ್ವಾಸ, ಆತ್ಮೀಯತೆಗೆ ಕಾಲೋನಿಯ ಜನರು ಮರುಳಾಗಿದ್ದರು. ಊರಿನ ತುಂಬೆಲ್ಲಾ ಇವನನ್ನು ಪ್ರೀತಿಸುವ ಜನರಿದ್ದರು, ಆತ್ಮೀಯ ಗೆಳೆಯರೂ ಇದ್ದರು. ಅವರ್ಯಾರು ಗುರು ಉಗ್ರರ ದಾಳಿಗೆ ಬಲಿಯಾಗಿರುವುದನ್ನು ಈಗಲೂ ನಂಬುವ ಸ್ಥಿತಿಯಲ್ಲಿಲ್ಲ.

ಗುರುವಾರ ಸಂಜೆ ಉಗ್ರರ ದಾಳಿಗೆ ಯೋಧರು ವೀರ ಮರಣವನ್ನಪ್ಪಿದ್ದಾರೆಂಬ ಮಾಹಿತಿ ಪ್ರಸಾರವಾಗುತ್ತಿದ್ದಂತೆ ಅದಾಗಲೇ ಗುಡಿಗೆರೆ ಕಾಲೋನಿಯೊಳಗೆ ಆತಂಕ ಮಡುಗಟ್ಟಿತ್ತು. ಆದರೆ, ಈ ವಿಷಯವನ್ನು ಕುಟುಂಬದವರಿಗೆ ತಿಳಿಸಿರಲಿಲ್ಲ. ಬಳಿಕ ಒಬ್ಬರಿಂದ ಒಬ್ಬೊಬ್ಬರಿಗೆ ವಿಷಯ ಹರಡಿ ಕುಟುಂಬದವರಿಗೂ ಮಾಹಿತಿ ಸಿಕ್ಕಿದ ಕೂಡಲೇ ಕಾಲೋನಿಯ ವಾತಾವರಣವೇ ಬದಲಾಯಿತು. ಸಂಬಂಧಿಕರು, ಸ್ನೇಹಿತರು, ಅಕ್ಕಪಕ್ಕದ ಮನೆಯವರೆಲ್ಲ ಗುರು ಅವರ ಮನೆ ಎದುರು ಜಮಾಯಿಸಿದ್ದರು.

ಈ ವೇಳೆಗೆ ವಿಷಯವನ್ನು ಗುರು ವೀರ ಮರಣದ ಸುದ್ದಿ ತಿಳಿದು ಸಹೋದರರು, ತಂದೆ, ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಇವರ ರೋಧನೆ ಕಂಡು ಸ್ಥಳದಲ್ಲಿದ್ದವರ ಕಣ್ಣಾಲಿಗಳೂ ಒದ್ದೆಯಾದವು. ಇನ್ನು ಪತ್ನಿಗೆ ಸುಮಾರು ಸಮಯ ಮಾಹಿತಿ ನೀಡಿರಲಿಲ್ಲ. ಬಳಿಕ ಸಮಾಧಾನಪಡಿಸಿ ಗುಡಿಗೆರೆ ಕಾಲೋನಿಗೆ ಕರೆದುಕೊಂಡು ಬರಲಾಯಿತು.  

ತಂದೆಯ ರೋದನ: ಮಗನನ್ನು ಕೊಂದವರಿಗೆ ಘೋರ ಶಿಕ್ಷೆಯಾಗಬೇಕು. ನಿನ್ನೆ ರಾತ್ರಿ ನನ್ನ ಮಗನ ಜತೆ ಫೋನ್‌ನಲ್ಲಿ ಮಾತನಾಡಿ¨ªೆ. ಮಗನಿಗಾಗಿ ಹೊಸ ಮನೆ ಕಟ್ಟಿಸಿ, ಈಗಷ್ಟೇ ಮದುವೆ ಮಾಡಿದ್ದೆ. ಆದ್ರೆ, ಈಗ ನನ್ನ ಮಗ ನಮ್ಮ ಜತೆಯಿಲ್ಲ. ನನ್ನ ಮಗ ಎಲ್ಲರ ಮೇಲೂ ಪ್ರೀತಿ ಇಟ್ಟುಕೊಂಡಿದ್ದ. ಅವನನ್ನ ಕೊಂದ ದುಷ್ಟರನ್ನು ಬಿಡಬಾರದು ಎಂದು ಗುರು ತಂದೆ ಹೊನ್ನಯ್ಯ ಕಣ್ಣೀರಾದರು. 

ಪ್ರೀತಿಯ ಕರಿಯ: ಹುತಾತ್ಮ ಯೋಧ ಗುರುವನ್ನು ಪ್ರೀತಿಯಿಂದ ಕರಿಯ ಎಂದು ಸ್ನೇಹಿತರು ಕರೆಯುತ್ತಿದ್ದರು. ಜತೆಯಲ್ಲಿ ಟ್ರೈನಿಂಗ್‌ ಮಾಡಿದ ಮತ್ತು ಕೆಲಸ ಮಾಡುತ್ತಿದ್ದ ಗೆಳೆಯರು ಕರಿಯ ಎಂದು ಕರೆಯುತ್ತಿದ್ದರು. ಆದರೆ, ಏನೇ ತಮಾಷೆ ಮಾಡಿದ್ರು ನಗುತ್ತಲೇ ಮಾತನಾಡುತ್ತಿದ್ದರು.  

ಚುರುಕಿನ ಗುರು: ಗೆಳೆಯನ ಬಗ್ಗೆ ಮಾತನಾಡಿದ ಮತ್ತೂಬ್ಬ ಸಿಆರ್‌ಪಿಎಫ್ ಯೋಧ ಮಹದೇವ್‌, ಗುರು ತುಂಬಾ ಚುರುಕಿನವನಾಗಿದ್ದನು. ಆಟೋಟ ಎಲ್ಲದ್ದರಲ್ಲೂ ಮುಂದಿದ್ದ, ಬೆಂಗಳೂರಿನ ತರಾಳು ಟ್ರೈನಿಂಗ್‌ ಸೆಂಟರ್‌ನಲ್ಲಿ ಒಟ್ಟಿಗೆ ತರಬೇತಿ ಮುಗಿಸಿದ್ದೆವು. ಆದ್ರೆ ಇದೀಗ ಗುರು ಹುತಾತ್ಮರಾಗಿದ್ದು, ಇದಕ್ಕೆಲ್ಲ ತಕ್ಕ ಉತ್ತರ ಕೊಡುತ್ತೇವೆ ಎಂದು ಮೈಸೂರು ಮೂಲದ ಯೋಧ ಬಾವುಕರಾದರು.

ಫೋಟೋ, ಸೆಲ್ಫಿ ವಿಡಿಯೋ ವೈರಲ್‌: ಇನ್ನು ಗುರು, ಕರ್ತವ್ಯದಲ್ಲಿದ್ದ ವೇಳೆ ತೆಗೆಸಿಕೊಂಡಿದ್ದ ಪೋಟೋ ಮತ್ತು ಸೆಲ್ಫಿ ವಿಡಿಯೋಗಳನ್ನು ಕಂಡು ಕುಟುಂಬದವರು, ಸ್ನೇಹಿತರು ಕಣ್ಣೀರು ಹಾಕುತ್ತಿರುವ ದೃಶ್ಯ ಕಂಡುಬಂದಿತು. ಇನ್ನು ಕೆಲ ದಿನದ ಹಿಂದೆ ಗುರು ಜಮ್ಮುವಿನಿಂದ ಸೆಲ್ಫಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್‌ ಆಗಿದೆ. 

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್‌ಡಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.