“ಆರೋಗ್ಯಯುತ ಮೂತ್ರಪಿಂಡಗಳಿಗಾಗಿ ಆರೋಗ್ಯಕರ ಜೀವನ’ ಅಭಿಯಾನ
Team Udayavani, Mar 9, 2017, 1:18 PM IST
ಮಂಗಳೂರು: ಮೂತ್ರಪಿಂಡ ಸಂಬಂಧಿತ ರೋಗ ಮತ್ತು ಆರೋಗ್ಯಕ್ಕೆ ಮೂತ್ರ ಪಿಂಡಗಳ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿ
ಸುವ ನಿಟ್ಟಿನಲ್ಲಿ ಕೆಎಂಸಿ ಆಸ್ಪತ್ರೆ ಅಭಿಯಾನ ಪ್ರಾರಂಭಿಸಿದೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಆನಂದ್ ವೇಣುಗೋಪಾಲ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದ ಜಾಗತಿಕ ತಿರುಳಾದ “ಮೂತ್ರಪಿಂಡ ರೋಗ ಮತ್ತು ಬೊಜ್ಜು ಮೈ’ ವಿಷಯಕ್ಕೆ ತಕ್ಕಂತೆ ಹಾಗೂ “ಆರೋಗ್ಯಯುತ ಮೂತ್ರಪಿಂಡಗಳಿಗಾಗಿ ಆರೋಗ್ಯಕರ ಜೀವನ’ ಧ್ಯೇಯ ಅನುಸರಿಸುವುದಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಅಭಿಯಾನದ ಅಂಗವಾಗಿ ಕೆಎಂಸಿ ಮೂತ್ರ ಪಿಂಡ ರೋಗಿಗಳ ಲಾಭಕ್ಕಾಗಿ ಹಲವು ಪ್ಯಾಕೇಜ್ ಆರಂಭಿಸಿದೆ. ಈ ಸಂದರ್ಭ ಆಸ್ಪತ್ರೆ ನಿಗದಿತ ಡಯಾಲಿಸಿಸ್ ರೋಗಿಗೆ 600 ರೂ. ದರದಲ್ಲಿ ಒಂದು ಡಯಾಲಿಸಿಸ್ ಮತ್ತು ಸಾಧಾರಣ ಪ್ರಯೋಗಾಲಯ ಪರೀಕ್ಷೆಗಳನ್ನು ಉಚಿತವಾಗಿ 40 ಡಯಾಲಿಸಿಸ್ ರೋಗಿಗಳಿಗೆ ನಡೆಸಿ ಕೊಡುತ್ತಿದೆ ಎಂದರು.
ಮೂತ್ರಪಿಂಡರೋಗ ಸಲಹಾ ತಜ್ಞ ಡಾ| ಸುಶಾಂತ್ಕುಮಾರ್ ಮಾತನಾಡಿ, ಬೊಜ್ಜು ಮೈ ಮೂತ್ರಪಿಂಡ ರೋಗ ಹೆಚ್ಚಾಗಲು ಪ್ರಮುಖ ಕಾರಣ ಎಂದರು. ಮೂತ್ರಪಿಂಡ ಸಲಹಾ ತಜ್ಞ ಡಾ| ಅಶೋಕ್ ಭಟ್ ಮಾತನಾಡಿ, ದೀರ್ಘಕಾಲದ ಮೂತ್ರ ಪಿಂಡ ರೋಗದ ಅಪಾಯದ ಅಂಶ ಹೊಂದಿ ರುವ ರೋಗಿಗಳು ಸೂಕ್ತ ತಪಾಸಣೆಗಳಿಗೆ ಒಳಗಾಗಬೇಕು ಎಂದರು. ಮೂತ್ರರೋಗ ಸಲಹಾ ತಜ್ಞ ಡಾ| ಜಿ.ಜಿ. ಲಕ್ಷ್ಮಣ್ ಪ್ರಭು, ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ 2004ರಲ್ಲಿ ಮೊದಲ ಮೂತ್ರ ಪಿಂಡ ಕಸಿ ನಡೆದಾಗಿನಿಂದ ಬದಲಿ ಮೂತ್ರಪಿಂಡ ಜೋಡಣೆ ಸೇವೆ ಉತ್ತಮವಾಗಿ ನಡೆಯುತ್ತಿವೆ. ಮೂತ್ರ ಪಿಂಡ ತೆಗೆದು ಕಸಿ ಮಾಡಲು ಆಸ್ಪತ್ರೆ ಅಧಿಕೃತ ಮಾನ್ಯತೆ ಪಡೆದಿದೆ ಎಂದರು. ಆಸ್ಪತ್ರೆ ಪ್ರಥಮ ಮೂತ್ರಪಿಂಡ ಕಸಿ ರೋಗಿ ದಾಮೋದರ್ ಆಚಾರ್ಯ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ