ಮೂಡಬಿದಿರೆ ಭಗವಾನ್ ಬಾಹುಬಲಿಗೆ ಮಸ್ತಕಾಭಿಷೇಕ
Team Udayavani, Mar 26, 2017, 12:37 PM IST
ಮೂಡಬಿದಿರೆ: ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ನೋಡಿದಾಗ ಆಗುವ ಅನುಭವವನ್ನೇ ನೀಡುವ “ಮಸ್ತಕಾಭಿಷೇಕ ‘ ಶುಕ್ರವಾರ ರಾತ್ರಿ ಮೂಡಬಿದಿರೆಯ ಸಾವಿರ ಕಂಬದ ಬಸದಿಯ ಆವರಣದಲ್ಲಿ 61 ವರ್ಷಗಳ ಬಳಿಕ ನಡೆಯಿತು.
ಶ್ರೀ ಜೈನಮಠದ ಆಡಳಿತಕ್ಕೊಳಪಟ್ಟಿರುವ ಸಾವಿರ ಕಂಬದ ಬಸದಿಯ ಮುಖ್ಯ ಆರಾಧನಾ ಮೂರ್ತಿ ಚಂದ್ರನಾಥ ಸ್ವಾಮಿಯ ಸನ್ನಿಧಿಯಲ್ಲೇ ಇರುವ, ಮೂರು ಅಡಿ ಎತ್ತರದ ಸುಮಾರು 300 ಕೆ.ಜಿ. ತೂಕದ “ಹಾಲು ಬೆಳ್ಳಿ’ಯಲ್ಲಿ ನಿರ್ಮಿತ, ಭಗವಾನ್ ಬಾಹುಬಲಿ ಸ್ವಾಮಿಯ ಮೂರ್ತಿಯನ್ನು ಬಹಳ ಜಾಗರೂಕತೆಯಿಂದ ಹೊರತಂದು, ಒಳಾಂಗಣದಲ್ಲಿ ನಿರ್ಮಿಸಿದ ಸುಂದರವಾದ ಅಟ್ಟಳಿಗೆಯಲ್ಲಿರಿಸಿ, ಶ್ರೀ ಜೈನ ಮಠಾಧೀಶ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ನಡೆದ ಈ ಮಸ್ತಕಾಭಿಷೇಕದಲ್ಲಿ ಮಹಾಮಸ್ತ¤ಕಾಭಿಷೇಕದಲ್ಲಿ ಬಳಸಲಾಗುವ ದ್ರವ್ಯಗಳನ್ನೇ ಬಳಸಲಾಗಿದ್ದು ನೋಟಕರಿಗೆ ದಿವ್ಯಾನುಭವ ನೀಡಿತು.
ಮೊದಲಿಗೆ 54 ಕಲಶಗಳಲ್ಲಿ ನೀರಿನ ಅಭಿಷೇಕ ನಡೆದ ಬಳಿಕ ಎಳನೀರು, ಇಕ್ಷುರಸ (ಕಬ್ಬಿನ ಹಾಲು), ಹಾಲು, ನವ ಧಾನ್ಯ, ಹಸುವಿನ ತುಪ್ಪ, ಕಷಾಯ, ಕಲ್ಕಚೂರ್ಣ (ಅಕ್ಕಿ ಹಿಟ್ಟು), ಅರಶಿನ, ಕೇಸರಿ ಹಿಟ್ಟು, ಕೇಸರಿ ದ್ರವ ಮತ್ತು ಚತುಷೊRàನ ಕಲಶಾಭಿಷೇಕ, ಭತ್ತದ ಅರಳು, ಶ್ರೀಗಂಧ, ಚಂದನ ಇಂಥ ದ್ರವ್ಯಗಳಿಂದ ಭಗವಾನ್ ಬಾಹುಬಲಿಸ್ವಾಮಿಗೆ ಅಭಿಷೇಕ ಮಾಡಿದಾಗ ಈ ಬಿಂಬವು ಶುದ್ಧ ರಜತ ಕಾಂತಿಯುತವಾಗಿ, ಹಲವು ತಿಳಿವರ್ಣಗಳನ್ನು, ಒಂದೊಮ್ಮೆ ಶುದ್ಧ ಶ್ವೇತ ವರ್ಣವನ್ನೇ ಹೊದ್ದುಕೊಂಡ ಮೂರ್ತಿಯಾಗಿ, ಚಿನ್ನದಂಥ ಮೈಕಾಂತಿಯನ್ನು ಸೂಸುತ್ತ, ಶ್ರೀಗಂಧವನ್ನು ಲೇಪಿಸಿಕೊಂಡು ಪರಿಮಳಿಸಿ, ಕೊನೆಗೆ ಅಷ್ಟಗಂಧ ಅಭಿಷೇಕವಾದಾಗ ಕೆಂಬಣ್ಣದಲ್ಲಿ ಕಂಗೊಳಿಸಿತು ಬಿಂಬ.
ಲೋಕದ ಕಂಟಕಗಳು ಚಿಂದಿ ಚಿಂದಿಯಾಗಿ ಕ್ಷೇಮ ಉಂಟಾಗಲಿ ಎಂಬ ಪ್ರಾರ್ಥನೆ (ಮಹಾಶಾಂತಿದಾರ)ಯಾಗಿ, ಕನಕ ಸಹಿತ ಪುಷ್ಪವೃಷ್ಟಿಯಾಗಿ ಅಘÂì ನೀಡಿ ಮಹಾಮಂಗಳಾರತಿ, ಗುರುಗಳ ಪಾದಪೂಜೆಯೊಂದಿಗೆ ಅಭಿಷೇಕದ ವಿಧಿವಿಧಾನಗಳು ಸಂಪನ್ನಗೊಂಡವು.
ಸೇವಾದಾರರಾದ ದಿವಂಗತ ಆರೋಹ ಆದಿರಾಜರ ಪುತ್ರರಾದ ನಾಗೇಂದ್ರ ಕುಮಾರ್, ಶೈಲೇಂದ್ರ ಕುಮಾರ್, ಪುತ್ರಿಯರು, ಕುಟುಂಬಸ್ಥರು ಹಾಗೂ ಪರಿವಾರದವರು ಮಸ್ತಕಾಭಿಷೇಕದ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಭಟ್ಟಾರಕ ಸ್ವಾಮೀಜಿ ಸರ್ವ ವಿಧಿವಿಧಾನಗಳ ಮಾರ್ಗದರ್ಶಕರಾಗಿ, ಸೂಕ್ತ ವಿವರಣೆಗಳನ್ನೂ ನೀಡಿದರು. ಜೈನ ಯುವಜನರು ಸ್ವಯಂಸೇವಕರಾಗಿ ವಿಶೇಷ ಸಹಕಾರ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ