“ಮಾಧ್ಯಮ ಜನತೆಯ ಭಾವನೆಗಳಿಗೆ ಧ್ವನಿಯಾಗಲಿ’
Team Udayavani, Jul 19, 2017, 2:55 AM IST
ಮಹಾನಗರ: ಮಾಧ್ಯಮಗಳು ಜನತೆಯ ಭಾವನೆಗಳಿಗೆ ಧ್ವನಿಯಾಗಬೇಕೆಂದು ಲೇಖಕಿ ಡಾ| ಚಂದ್ರಕಲಾ ನಂದಾವರ ಅವರು ಹೇಳಿದ್ದಾರೆ.
ಸಂದೇಶ ಕಲಾ ಮತ್ತು ಶಿಕ್ಷಣ ಪ್ರತಿಷ್ಠಾನವು ಕೆನರಾ ಕಮ್ಯುನಿಕೇಶನ್ ಸೆಂಟರ್, ದಾಯಿjವರ್ಲ್ಡ್ ವೀಕ್ಲಿಯ ಸಹಯೋಗದಲ್ಲಿ ಏರ್ಪಡಿಸಿರುವ ಪತ್ರಿಕೋದ್ಯಮ ಶಿಬಿರವನ್ನು ಅವರು ಸೋಮವಾರ ಉದ್ಘಾಟಿಸಿದರು.
ಪತ್ರಕರ್ತರು ಪರಿಪೂರ್ಣ ವೃತ್ತಿಪರತೆಯನ್ನು ಹೊಂದಿರಬೇಕು. ಈ ಕಾರಣ ದಿಂದ ಪತ್ರಿಕಾರಂಗವನ್ನು ಪ್ರಜಾತಂತ್ರದ ನಾಲ್ಕನೆಯ ಆಯಾಮವೆಂದು ಗೌರವಿಸಲಾಗುತ್ತಿದೆ. ಪತ್ರಿಕೋದ್ಯಮದ ಕುರಿತಾದ ಜಾಗೃತಿಯನ್ನು ಮೂಡಿಸುವ ಇಂತಹ ಶಿಬಿರಗಳು ಸ್ವಾಗತಾರ್ಹ ಎಂದು ಸಂಘಟಕರನ್ನು ಅಭಿನಂದಿಸಿದರು.
ಸಂದೇಶದ ನಿರ್ದೇಶಕ ಫಾ| ವಿಕ್ಟರ್ ವಿಜಯ್ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಆಗಸ್ಟ್ 5ರವರೆಗೆ ಶಿಬಿರ ನಡೆಯಲಿದೆ. 53 ಶಿಬಿರಾರ್ಥಿಗಳನ್ನು ಆರಿಸಲಾಗಿದೆ. ಮಾಧ್ಯಮ ಕ್ಷೇತ್ರದ ತಜ್ಞರು ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ ಎಂದು ತಿಳಿಸಿದರು. ಸ್ಟಾನಿ ಬೇಳ ಉಪಸ್ಥಿತರಿದ್ದರು.
ಸಿಸಿಸಿಯ ನಿರ್ದೇಶಕ ಫಾ| ರಿಚರ್ಡ್ ಡಿ’ ಸೋಜಾ ಸ್ವಾಗತಿಸಿದರು. ಪ್ರಾಯೋಗಿಕ ಪತ್ರಿಕೆಗಳ ರಚನೆ ಸಹಿತ ಮುದ್ರಣ- ವಿದ್ಯುನ್ಮಾನ ಮಾಧ್ಯಮಗಳ ಬಗ್ಗೆ ಸಮಗ್ರ ತರಬೇತಿ ಶಿಬಿರದಲ್ಲಿ ನೀಡಲಾಗುವುದೆಂದು ವಿವರಿಸಿದರು. ಸಂದೇಶದ ಸಹಾಯಕ ನಿರ್ದೇಶಕ ವಿಕ್ಟರ್ ಕ್ರಾಸ್ತಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು