ಹೇಳಿದ್ದೊಂದು; ಸರಕಾರಕ್ಕೆ ಕೊಟ್ಟಿದ್ದೇ ಮತ್ತೂಂದು!


Team Udayavani, Aug 14, 2017, 7:55 AM IST

1208mlr101-netravati.jpg

ಮಹಾನಗರ: ಎತ್ತಿನಹೊಳೆ ಯೋಜನೆಗೆ ಕರಾವಳಿಯಾದ್ಯಂತ ವಿರೋಧ‌ ವ್ಯಕ್ತವಾಗುತ್ತಿರುವಾಗಲೇ, ಮತ್ತೆ ಆತಂಕ ವನ್ನು ಹೆಚ್ಚಿಸುವ ಹೊಸ ಯೋಜನೆಯನ್ನು ಭಾರತೀಯ ವಿಜ್ಞಾನ ಸಂಸ್ಥೆ  (ಐಐಎಸ್‌ಸಿ) ಸರಕಾರಕ್ಕೆ ಸಲ್ಲಿಸಿದೆ. ಕರಾವಳಿಯ ಜೀವನದಿ ನೇತ್ರಾವತಿಯ ಮೇಲೆಯೇ ಕಣ್ಣಿಟ್ಟು ಸಮುದ್ರಕ್ಕೆ ಸೇರುವ ನೀರನ್ನು ಬೆಂಗಳೂರಿಗೆ ಕುಡಿಯಲು ಬಳ ಸುವ ಪ್ರಸ್ತಾವನೆಯ ಸಾಧ್ಯತಾ ವರದಿ ಯನ್ನು ಭಾರತೀಯ ವಿಜ್ಞಾನ ಸಂಸ್ಥೆ  (ಐಐಎಸ್‌ಸಿ) ಸಿದ್ಧಪಡಿಸಿದೆ.

ಈ ವರದಿ ಸಲ್ಲಿಸಿದ ವಿಜ್ಞಾನಿ ಪ್ರೊ| ಟಿ.ಜಿ. ಸೀತಾರಾಮ್‌ ಅವರು ಈ ಹಿಂದೆ ಮಂಗಳೂರಿಗೆ ಆಗಮಿಸಿ, ಸಮುದ್ರದೊಳಗೆ ಅಣೆಕಟ್ಟು ಮಾದರಿ ಕಟ್ಟಿ ನೀರು ಸಂಗ್ರಹಿಸಿ ಜನರಿಗೆ ಸರಬರಾಜು ಮಾಡುವ ವಿನೂತನ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ವಿಚಿತ್ರವೆಂದರೆ, ಈ ವಿಜ್ಞಾನಿ ಮಂಗಳೂರಿನಲ್ಲಿ ಹೇಳಿದ್ದೇ ಒಂದಾದರೆ, ತಾವು ಸಲ್ಲಿಸಿದ ಪ್ರಸ್ತಾವನೆಯಲ್ಲಿ ಸಂಪೂರ್ಣ ವಿರುದ್ಧವಾದ ಮಾಹಿತಿಯನ್ನು ನೀಡಿರುವುದು ಆತಂಕವನ್ನು ಹೆಚ್ಚಿಸಿದೆ. 
 
ಇದೇ ವರ್ಷದ ಫೆ. 7ರಂದು ಮಂಗಳೂರಿಗೆ ಆಗಮಿಸಿದ್ದ ಪ್ರೊ| ಟಿ.ಜಿ. ಸೀತಾರಾಮ್‌ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ಯೋಜನೆಯನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಜಾರಿಗೊಳಿಸಬಹುದು ಎಂದಿದ್ದರು. ಆದರೆ, ಇತ್ತೀಚೆಗಷ್ಟೇ ಆ. 7ರಂದು ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಸಮುದ್ರದೊಳಗೆ ಅಣೆಕಟ್ಟು ಕಟ್ಟುವ ಬಗ್ಗೆ ಉಲ್ಲೇಖವಿಲ್ಲ.

ನೇತ್ರಾವತಿ ನದಿಯಿಂದ 120 ಟಿಎಂಸಿ ನೀರು ಲಭ್ಯವಾಗುತ್ತಿದೆ ಎಂದು ಮಂಗಳೂರಿನಲ್ಲಿ ಅಂದು ಹೇಳಿದ್ದ ಅವರು, ಮೊನ್ನೆ 350 ಟಿಎಂಸಿಯಷ್ಟು ಮಳೆ ನೀರು ಲಭ್ಯವಾಗುತ್ತದೆ ಎಂದಿದ್ದಾರೆ. ಈ ಮೂಲಕ ಮೊದಲು ಮಂಗಳೂರಿ ನಲ್ಲಿ ಹೇಳಿರುವುದಕ್ಕೂ, ಇತ್ತೀಚೆಗೆ ಬೆಂಗಳೂರಿನಲ್ಲಿ ಹೇಳಿರುವುದಕ್ಕೂ ಬಹಳ ವ್ಯತ್ಯಾಸವಿದೆ. ಫೆ.7ರಂದು ಮಂಗಳೂರಿನಲ್ಲಿ ಪ್ರೊ| ಟಿ. ಜಿ. ಸೀತಾರಾಮ್‌ ಅವರು ಮಾತನಾಡುವಾಗ ಹೇಳಿದ್ದಿಷ್ಟು; ಒಟ್ಟು ಮಂಗಳೂರಿಗೆ 1 ಟಿಎಂಸಿ ನೀರು ಅಗತ್ಯವಿದೆ. ಆದರೆ ನೇತ್ರಾವತಿ, ಗುರುಪುರ ಹಾಗೂ ಕುಮಾರಧಾರ ನದಿಗಳಿಂದ ಮಳೆಗಾಲದ 4 ತಿಂಗಳಿನಲ್ಲಿ 120 ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಇದರಲ್ಲಿ 20ರಿಂದ 25 ಟಿಎಂಸಿ ನೀರು ಸಂಗ್ರಹಿಸಿದರೂ ಕರಾವಳಿ ಸಹಿತ ಹೊರ ಭಾಗದ ಪ್ರದೇಶಗಳ ಜನರಿಗೆ ನೀರು ಸರಬರಾಜು ಮಾಡಬಹುದು. ಅದರಲ್ಲೂ 90 ಟಿಎಂಸಿ ನೀರು ಸಂಗ್ರಹಿಸಿದರೆ ಇಡೀ ರಾಜ್ಯಕ್ಕೆ ಇಲ್ಲಿಂದಲೇ ನೀರು ಪೂರೈಸಬಹುದು. ನೆದೆರ್ಲಾಂಡ್‌, ಸೌತ್‌ ಕೊರಿಯಾ, ಹಾಂಕಾಂಗ್‌, ಚೀನಾ, ಸಿಂಗಪುರ್‌ನಲ್ಲಿ ಈಗಾಗಲೇ ಜಾರಿಯಲ್ಲಿರುವ ಇಂತಹ ಪರಿಕಲ್ಪನೆ ರಾಜ್ಯದಲ್ಲೂ ಸುಲಭವಾಗಿ ಜಾರಿಗೊಳಿಸಬಹುದು. 

ಯೋಜನೆಯ ರೂಪ
ಅಂದು ಅವರು ಹೇಳುವ ಪ್ರಕಾರ, ನೇತ್ರಾವತಿ ಸೇರುವ ಜಾಗದಿಂದ ಮುಂಭಾಗದ ಸಮುದ್ರದಲ್ಲಿ ಸುಮಾರು 14 ಕಿ.ಮೀ ಉದ್ದ ಹಾಗೂ ಅಷ್ಟೇ ಕಿ.ಮೀ ಅಗಲದ (ಅದರ ಅರ್ಧದಷ್ಟು) ಅಣೆಕಟ್ಟು ಮಾದರಿಯ ತಡೆಗೋಡೆ ನಿರ್ಮಿಸ‌ಲಾಗುತ್ತದೆ. ಆ ಭಾಗದ ಉಪ್ಪು ನೀರನ್ನು ಸಮುದ್ರಕ್ಕೆ ಹೊರಚೆಲ್ಲಿ, ನದಿಯಿಂದ ಸಹಜವಾಗಿ ಹರಿದು ಸಮುದ್ರ ಸೇರುವ ಸಿಹಿ ನೀರನ್ನು ಸಂಗ್ರಹಿಸುವುದು. ಹೀಗೆ ಸಂಗ್ರಹಿಸಿದ್ದನ್ನು ನೀರಾವರಿ, ಕೈಗಾರಿಕೆ ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಬಳಸುವುದು. ಸಮುದ್ರದೊಳಗೆ ಈ ಯೋಜನೆ ಬರುವುದರಿಂದ ಇಲ್ಲಿ ಸಿಹಿ ನೀರಿನ ಮೀನುಗಾರಿಕೆಗೆ ಅವಕಾಶವಿರಲಿದೆ. ಗುಣಮಟ್ಟದ ಮರಳು ಲಭ್ಯವಾಗಲಿದೆ. ಜಲಾಶಯದ ಮೇಲೆ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿ ವಿದ್ಯುತ್‌ ಉತ್ಪಾದಿಸಬಹುದು. ಜತೆಗೆ ಜಲಾಶಯಕ್ಕೆ ಬಡಿಯುವ ಸಮುದ್ರದ ಅಲೆಗಳಿಂದ ಜಲವಿದ್ಯುತ್‌ ಕೂಡ ಉತ್ಪಾದಿಸಬಹುದು. ಲಕ್ಷಾಂತರ ಕೋಟಿ ರೂ.ಖರ್ಚು ಮಾಡಿ ಬೇರೆ ಬೇರೆ ಯೋಜನೆ ಸಿದ್ಧಪಡಿಸುವ ಬದಲು ಈ ಯೋಜನೆಯನ್ನು ಕೇವಲ 2,200 ಕೋ.ರೂ.ಗಳಲ್ಲಿ ರೂಪಿಸಬಹುದು ಎಂದಿದ್ದರು ಅವರು.

ಯೋಜನೆಯ ಮೂಲಕ ಹಣ ಮಾಡುವ ಯೋಚನೆ..! 
ಎಸಿ ರೂಮ್‌ನಲ್ಲಿ ಕುಳಿತು, ಯಾವುದೇ ಅನುಭವಗಳಿಲ್ಲದೇ ಕೇವಲ ಯೋಜನೆಗಳ ಮೂಲಕ ಹಣ ಮಾಡುವ ಯೋಚನೆಯಲ್ಲಿಯೇ ಮುಳುಗಿ ಹೋದ ಕೆಲವರಿಂದಾಗಿ ಇಂದು ನಮ್ಮ ಜೀವ ನದಿ ಬರಡಾಗುತ್ತಿದೆ. ಎತ್ತಿನಹೊಳೆಯಲ್ಲಿ ನೀರಿಲ್ಲ ಎಂದು ನಾವೆಲ್ಲ ಗಟ್ಟಿಯಾಗಿ ಹೇಳಿದರೂ ಕೇಳದ ಆಡಳಿತ ವ್ಯವಸ್ಥೆಗೆ ಈಗ ನೀರಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ನೇತ್ರಾವತಿ ಸಮುದ್ರ ಸೇರುವ ಜಾಗಕ್ಕೆ ಆಘಾತ ನೀಡಲು ಹೊಸ ಪ್ರಸ್ತಾವನೆಯನ್ನು ಸ್ವೀಕರಿಸಿದೆ. ಕರಾವಳಿಯ ಬದುಕಿನ ಮೇಲೆ ಇದೀಗ ನೇರ ಪ್ರಹಾರಕ್ಕೆ ವೇದಿಕೆ ಸಿದ್ದವಾಗುತ್ತಿದ್ದು, ಇದನ್ನು ವಿರೋಧಿಸಬೇಕಿದೆ.
– ದಿನೇಶ್‌ ಹೊಳ್ಳ, ಸಹ್ಯಾದ್ರಿ ಸಂಚಯ ಪ್ರಮುಖರು

ಗೊಂದಲ ಹಾಗೂ ವೈಜ್ಞಾನಿಕ ರಹಿತ ಯೋಜನೆ
ಪ್ರೊ| ಟಿ.ಜಿ. ಸೀತಾರಾಮ್‌ ಅವರು ಮಂಗಳೂರಿನಲ್ಲಿ ಮಾತನಾಡಿದಾಗಲೇ, ಅಲ್ಲಿ ಉಪಸ್ಥಿತರಿದ್ದ ಎನ್‌ಐಟಿಕೆ ನಿವೃತ್ತ ಪ್ರೊಫೆಸರ್‌ ಪ್ರೊ| ಎಸ್‌.ಜಿ.ಮಯ್ಯ ಅವರು ಈ ಪ್ರಸ್ತಾವವನ್ನು ತಿರಸ್ಕರಿಸಿದ್ದರು. ‘ಇದು ವೈಜ್ಞಾನಿಕವಾಗಿ ಸರಿಹೊಂದುವ ಯೋಜನೆಯಲ್ಲ. ಇದರಲ್ಲಿ ಹಲವು ಗೊಂದಲಗಳು ಹಾಗೂ ಅಪಾಯಗಳಿವೆ. ಇಲ್ಲಿನ ಭೌಗೋಳಿಕ ಅಂಶಗಳು ಈ ಪ್ರಸ್ತಾವಕ್ಕೆ ತಕ್ಕುದಲ್ಲ. ಹೊರದೇಶದಲ್ಲಿ ಇದು ಸಾಧ್ಯವಾದರೂ, ಇದು ಇಲ್ಲಿಗೆ ಒಪ್ಪುವುದಿಲ್ಲ. ಇಲ್ಲಿನ ಮಣ್ಣಿನ ಸವೆತ ಹಾಗೂ ಉಪ್ಪು ನೀರಿನ ಅಂಶಗಳ ಬಗ್ಗೆ ಗಹನವಾದ ಅಧ್ಯಯನ ಮಾಡಬೇಕಿದೆ. ಇಲ್ಲಿನ ಯಾವುದೇ ಅಂಶಗಳನ್ನು ಇಲ್ಲಿದ್ದುಕೊಂಡು ಅಧ್ಯಯನ ಮಾಡದೆ, ಕೇವಲ ದೂರದೂರಿನಲ್ಲಿ ಕುಳಿತು ಹೊಸ ಹೊಸ ಸಂಶೋಧನೆ ಮಾಡುವವರೇ ಅಧಿಕವಿದ್ದಾರೆ ಎಂದು ಅವರು ಹೇಳಿದ್ದರು.

ನೀರಿಲ್ಲ ಎಂದ ವಿಜ್ಞಾನಿ..! 
ಎತ್ತಿನಹೊಳೆಯಲ್ಲಿ ಸರಕಾರ ಭಾವಿಸಿದಷ್ಟು ನೀರು ಲಭ್ಯವಿಲ್ಲ. ಅದರ ವೆಚ್ಚ ಕೂಡ ಇದರಿಂದ ದುಪ್ಪಟ್ಟಾಗಲಿದೆ. ಹೀಗಾಗಿ ಈ ಯೋಜನೆಯಿಂದ ಯಾವುದೇ ಲಾಭ‌ವಾಗಲಾರದು. ಇದಕ್ಕಾಗಿ ನೇರವಾಗಿ ಸಮುದ್ರ ಸೇರುವ ನೀರನ್ನೇ ಬಳಸಿದರೆ ಕಡಿಮೆ ಹಣದಲ್ಲಿ ಅತ್ಯಂತ ಯಶಸ್ವಿ ಹಾಗೂ ರಾಜ್ಯದ ಎಲ್ಲಾ ಜನರಿಗೂ ಲಭ್ಯವಾಗುವ ನೀರು ಸಿಗಲಿದೆ ಎಂದಿದ್ದವರು ಪ್ರೊ| ಟಿ.ಜಿ. ಸೀತಾರಾಮ್‌.   

– ದಿನೇಶ್‌ ಇರಾ

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.