ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಡಾ| ಕೆ.ಜಿ.ಜಗದೀಶ್‌


Team Udayavani, Sep 30, 2017, 11:41 AM IST

29-Mng-3.jpg

ದೇರಳಕಟ್ಟೆ : ಶೈಕ್ಷಣಿಕ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರೆ, ಮುಂದಿನ ವೃತ್ತಿ ಜೀವನದಲ್ಲಿ ದಕ್ಷತೆ, ಪ್ರಾಮಾಣಿಕತೆಯೊಂದಿಗೆ ವೃತ್ತಿ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಅಭಿಪ್ರಾಯಪಟ್ಟರು.

ನಿಟ್ಟೆ  ವಿವಿಯ ಕೆ.ಎಸ್‌. ಹೆಗ್ಡೆ ವೈದ್ಯಕೀಯ ಕಾಲೇಜಿನ 18ನೇ ವಾರ್ಷಿಕೋತ್ಸವದಲ್ಲಿ ವೈದ್ಯಕೀಯ ಕಾಲೇಜಿನ ವಿವಿಧ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ, ಪ್ರಶಸ್ತಿ ವಿತರಿಸಿ, ನೂತನ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜು ಜೀವನದಲ್ಲಿ ಸಿಗುವ ಸಮಯ ಅತ್ಯಮೂಲ್ಯವಾದದ್ದು. ಆ ಕ್ಷಣ ಗಳ ಮಹತ್ವ ಭವಿಷ್ಯದ ಜೀವನದಲ್ಲಿ ನಮಗೆ ಅರಿವಿಗೆ ಬರುತ್ತದೆ. ಶೈಕ್ಷಣಿಕ ಜೀವನದಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಜತೆ ಸಾಗುತ್ತಿರುವಂತೆಯೇ ಸಮಯ ಹೋಗುವುದೇ ಗೊತ್ತಾಗುವುದಿಲ್ಲ.  ಕಾಲೇಜಿನಲ್ಲಿ ಕಳೆಯುವ ಪ್ರತಿ ಕ್ಷಣಕ್ಕೂ ಮಹತ್ವವಿರುವುದರಿಂದ  ಪ್ರತಿ ನಿಮಿಷವನ್ನು ಅವಿಸ್ಮರಣೀಯವಾಗಿಸಬೇಕು ಎಂದರು.

ವಿವಿ ಸಹ ಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಡಾ| ಎಸ್‌.ರಮಾನಂದ ಶೆಟ್ಟಿ, ವಿದ್ಯಾರ್ಥಿ ಸಂಘದ ಸಲಹೆಗಾರ, ಡಾ| ಸಿದ್ದಾರ್ಥ ಹಾಗೂ ನಿಟ್ಟೆ ವಿವಿ ಪರೀಕ್ಷಾಂಗ ಕುಲಸಚಿವೆ ಪ್ರೊ| ಅಲ್ಕಾ ಕುಲಕರ್ಣಿ ಉಪಸ್ಥಿತರಿದ್ದರು.

ದಿ| ಕಿದಿಯೂರು ತೇಜಪ್ಪ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ, ದಿ| ಅಂಜಾರು ಕರು ಣಾಕರ ಹೆಗ್ಡೆ ಸ್ಮರಣಾರ್ಥ ಪ್ರಶಸ್ತಿ ಎಲಿಶಾ ಅಣ್ಣಾ ವರ್ಗಿಸ್‌, ದಿ| ಪರಿಕಶೇಖರ್‌ ಹೆಗ್ಡೆ ಸ್ಮರಣಾರ್ಥ ಪ್ರಶಸ್ತಿಯನ್ನು ಫಿಸಿ ಯೊಲಾಜಿಯ ಸತ್ಯಾ ರೋಯ್‌, ಜಸ್ಟಿಸ್‌ ಕೆ.ಎಸ್‌.ಹೆಗ್ಡೆ ಪ್ರಶಸ್ತಿಯನ್ನು ಎಂಬಿಬಿಎಸ್‌ನ ಪೇಸ್‌ ಒನ್‌ನಲ್ಲಿ ಸತ್ಯಾ ರೋಯ್‌, ದಿ| ಡಾ| ಬಿ.ಎನ್‌.ಶ್ರೀನಿವಾಸ ರಾವ್‌ ಪ್ರಶಸ್ತಿಯನ್ನು ಪಥೋಲಾಜಿಯ ಸಂಯುಕ್ತ ಸಂಕರನ್‌, ವೋಂತಿಬೆಟ್ಟು ದಿ| ಡಾ. ರವಿವರ್ಮ ಹೆಗ್ಡೆ ಪ್ರಶಸ್ತಿಯನ್ನು ಮೈಕ್ರೋ ಬಯೋಲಾಜಿಯ ನಂದನಾ ಮುರಳೀಧರನ್‌, ದಿ| ಸೂರ್ಯನಾರಾಯಣ ಶೆಟ್ಟಿ ಪ್ರಶಸ್ತಿ ಯನ್ನು ಫಾರ್ಮೊಕಾಲಾಜಿಯ ನಂದನಾ ಮುರಳೀಧರನ್‌, ದಿ| ಆದಿವಾಚಾರ್‌ ಸೌದಿ ಪ್ರಶಸ್ತಿಯನ್ನು ಫೋರೋನ್ಸಿಕ್‌ ಮೆಡಿಸಿನ್‌ನ ನಝೀನ್ ನ್  ಕಲ್ಲಿವಲಪ್ಪಿಲ್‌, ಎಂಎಂಬಿಬಿಎಸ್‌ ಪೇಸ್‌ 2ವಿಷಯಗಳಲ್ಲಿ ನಿಟ್ಟೆ ಎಜುಕೇಶನ್‌ ಟ್ರಸ್ಟ್ ಪ್ರಶಸ್ತಿಯನ್ನು ಶರ್ಮಿಳಾ ಎಸ್‌., ಮೊಳಹಳ್ಳಿ ವಿಶಾಲಾಕ್ಷಿ ಶೆಟ್ಟಿ  ಪ್ರಶಸ್ತಿಯನ್ನು ಕಮ್ಯೂನಿಟಿ ಮೆಡಿ ಸಿನ್‌ನ ವತ್ಸಲಾ ಎನ್‌., ಬಾವಬೀಡು ಗೋಪಿ ಎಸ್‌. ಭಂಡಾರಿ ಮತ್ತು ಹೇರೂರು ಸದಾಶಿವ ಭಂಡಾರಿ ಪ್ರಶಸ್ತಿಯನ್ನು ಇಎನ್‌ಟಿಯ ಸಬರಿದಾಸ್‌ ಎಸ್‌, ಸಚ್ಚರಪರಾರಿ ದಿ| ಜಲಜಾ ಶೆಟ್ಟಿ ಹಾಗೂ ದಿ| ಅರ್ಚನಾ ಶೆಟ್ಟಿ ಪ್ರಶಸ್ತಿ, ಓಪ್ತೊಮೋಲಾಜಿಯ ನಿಶಾ ಚಂದ್ರಶೇಖರ್‌, ನಿಟ್ಟೆ ಎಜುಕೇಶನ್‌ ಟ್ರಸ್ಟ್‌ ಎಂಬಿಬಿಎಸ್‌ ಪೇಸ್‌ 3 ರಲ್ಲಿ ಅಪರ್ಣಾ ಕಲ್ಯಾಣಿ ಪರಿಯಾದತ್‌, ಡಾ| ವಿ.ಆರ್‌. ಭಟ್‌ ಪ್ರಶಸ್ತಿಯನ್ನು ಜೆನರಲ್‌ ಮೆಡಿಸಿನ್‌ನ  ಹರ್ಷಿತಾ ಕೆ. ಪೂಂಜ, ಜನರಲ್‌ ಸರ್ಜರಿಯಲ್ಲಿ ಸುಲೋಚನಾ ಆರ್‌. ಬಲ್ಲಾಳ್‌ ಪ್ರಶಸ್ತಿ , ಪೀಡಿಯಾಟ್ರಿಕ್ಸ್‌ ನಲ್ಲಿ ದಿ| ವಿಠಲ ಶೆಟ್ಟಿ ಪ್ರಶಸ್ತಿ, ಪ್ರೊ| ಅಮರನಾಥ ಹೆಗ್ಡೆ ಪ್ರಶಸ್ತಿ , 2012-13ರ ಬ್ಯಾಚಿನ ಅತ್ಯುತ್ತಮ ಔಟ್‌ ಗೋಯಿಂಗ್‌ ಪ್ರಶಸ್ತಿಯನ್ನು  ಹರ್ಷಿತಾ ಕೆ.ಪೂಂಜ, ಒಬಿಜಿ ಯಲ್ಲಿ ಬೆಳೆಂಜೆ ಕಮಲಾ ಹೆಗ್ಡೆ ಪ್ರಶಸ್ತಿ ದಿಲ್‌ರಶ ರಶ್‌  ಫಾತಿಮಾ ಅಡೂರು, ವಿದ್ಯಾರ್ಥಿ ಒಬಿಜಿಯಲ್ಲಿ ಡಾ. ಎಂ ಸತ್ಯಾ ನಂದ ಹೆಗ್ಡೆ ಪ್ರಶಸ್ತಿ ಡಾ| ಸ್ಪಂದನಾ ಜೆ.ಸಿ ಅವರಿಗೆ ನೀಡಿ ಗೌರವಿಸಲಾಯಿತು.

ಕಾಲೇಜಿನ ಸ್ಮರಣ ಸಂಚಿಕೆ (ಎಕ್ಕೋ) ಕುರಿತಾಗಿ ಸಂಪಾದಕಿ ಅನ್ವೀನಾ ಕಿರು ಮಾಹಿತಿ ನೀಡಿದರು. ಸಾಧಕರನ್ನು ಕ್ಷೇಮ ಕುಲಸಚಿವ ಡಾ| ಜಯಪ್ರಕಾಶ್‌ ಶೆಟ್ಟಿ ಹಾಗೂ ಕಳೆದ ಸಾಲಿನಲ್ಲಿ ಕ್ರೀಡಾ ಕ್ಷೇತ್ರದ ಸಾಧಕನ್ನು   ಕ್ಷೇಮ ಕ್ರೀಡಾ ಸಲಹೆಗಾರ ಡಾ| ಮುರಳಿಕೃಷ್ಣ ವಾಚಿ ಸಿದರು. ವೈಸ್‌ ಡೀನ್‌ ಡಾ| ಎ.ಎಮ್‌.ಮಿರಾಜ್ಕ್ ರ್‌ ವಾರ್ಷಿಕ ವರದಿ ಮಂಡಿಸಿದರು. ವೈಸ್‌ ಡೀನ್‌ ಡಾ| ಪ್ರಕಾಶ್‌  ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು. ವಿದ್ಯಾರ್ಥಿ ಅಜೀಶ್‌ ಸ್ಯಾಮ್‌ ಜಾರ್ಜ್‌ ಚಟುವಟಿಕೆಗಳನ್ನು ವಿವರಿಸಿದರು. ಕುರುಪ್‌ ವಂದಿಸಿದರು.

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.