ಅ. 9ರಂದು ಸಮೀಕ್ಷೆ  ಕಾರ್ಯಕ್ಕೆ  ಚಾಲನೆ: ನಳಿನ್‌


Team Udayavani, Oct 7, 2017, 11:41 AM IST

07-27.jpg

ಮಂಗಳೂರು: ಮೂಲ್ಕಿ- ಕಟೀಲು- ಕೈಕಂಬ- ಪೊಳಲಿ- ಬಿ.ಸಿ. ರೋಡು ಹಾಗೂ ತೊಕ್ಕೊಟ್ಟು – ಮುಡಿಪು- ಮೆಲ್ಕಾರ್‌ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸುವ ಕಾಮಗಾರಿಗೆ  ಅ. 9ರಂದು ಸಮೀಕ್ಷೆ ಕಾರ್ಯ  ಆರಂಭಗೊಳ್ಳಲಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರುವ ಸಂಸದರ ಕಚೇರಿಯಲ್ಲಿ  ಶುಕ್ರವಾರ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಕೇಂದ್ರ ಸರ ಕಾರದ ಭಾರತ ಮಾಲಾದಲ್ಲಿ  ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರ ರಾಷ್ಟ್ರೀಯ ಹೆದ್ದಾರಿ ಯಿಂದ- ಹೆದ್ದಾರಿಗೆ ಸಂಪರ್ಕ ಯೋಜನೆಯಲ್ಲಿ  ಈ  ಎರಡೂ ರಸ್ತೆ ಗಳನ್ನು  ಚತುಷ್ಪಥವಾಗಿ ಉನ್ನತೀಕರಣಗೊಳಿಸುವ  ಕಾಮಗಾರಿ ಕೈಗೊಳ್ಳ  ಲಾಗುತ್ತಿದೆ. ಒಟ್ಟು 90 ಕಿ.ಮೀ. ರಸ್ತೆ ಉನ್ನತೀ  ಕರಣ ಗೊಳ್ಳ ಲಿದೆ. ಇದರ ಸಮೀಕ್ಷೆ ಕಾರ್ಯವನ್ನು ಮುಂಬಯಿ ಸ್ಟೂಪ್‌ ಕನ್ಸಲ್ಟೆನ್ಸಿಗೆ ವಹಿಸಿ ಕೊಟ್ಟಿದ್ದು  ಅ. 9 ರಂದು ಚಾಲನೆ ನೀಡಲಾಗುವುದು ಎಂದರು.

ಬಂಟ್ವಾಳ-ಮೂಡಬಿದಿರೆ ಸೇರಿದಂತೆ 3 ರಸ್ತೆಗಳ ಅಭಿವೃದ್ದಿ
ಬಂಟ್ವಾಳ- ಸಿದ್ದಕಟ್ಟೆ- ಮೂಡ ಬಿದಿರೆ, ಕಲ್ಲಡ್ಕ- ವಿಟ್ಲ- ಚೇರ್ವತ್ತೂರು ಹಾಗೂ ಗುಂಡ್ಯ- ಸುಬ್ರಹ್ಮಣ್ಯ ರಸ್ತೆ  ಗಳನ್ನು  ಚತುಷ್ಪಥಗೊಳಿಸುವ ಯೋಜನೆ  ಗಳಿಗೆ ಈಗಾಗಲೇ ಮಂಜೂ  ರಾತಿ ದೊರಕಿದೆ. ಇದರಲ್ಲಿ  ಕಲ್ಲಡ್ಕ- ವಿಟ್ಲ-ಚೇರ್ವತ್ತೂರು ಹಾಗೂ ಗುಂಡ್ಯ- ಸುಬ್ರಹ್ಮಣ್ಯ ರಸ್ತೆಗಳು ಟೆಂಡರ್‌ ಪ್ರಕ್ರಿಯೆ ಯಲ್ಲಿವೆ. ಕೇಂದ್ರ ಲೋಕೋಪ ಯೋಗಿ ಇಲಾಖೆ ಇದನ್ನು  ಅನು ಷ್ಠಾನ ಗೊಳಿಸುತ್ತದೆ  ಎಂದು ನಳಿನ್‌ ಕುಮಾರ್‌ ತಿಳಿಸಿದರು.

ಅ. 30ರೊಳಗೆ ಹೆದ್ದಾರಿ ಗುಂಡಿ ಮುಚ್ಚಲು ಸೂಚನೆ
ರಾಷ್ಟ್ರೀಯ ಹೆದ್ದಾರಿಯಲ್ಲಿ  ಗುಂಡಿಗಳನ್ನು  ಮುಚ್ಚುವ ಕಾಮಗಾರಿ ನಡೆಸಲು ಮಳೆಯಿಂದಾಗಿ ಸಾಧ್ಯ ವಾಗಿರ ಲಿಲ್ಲ.  ಅಕ್ಟೋಬರ್‌ 30ರೊಳಗೆ  ಈ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲು ಹೆದ್ದಾರಿ ಪ್ರಾಧಿಕಾರಕ್ಕೆ  ಸೂಚಿಸ ಲಾಗಿದೆ ಎಂದು ಸಂಸದರು  ತಿಳಿಸಿದರು. 

ಬಿ.ಸಿ. ರೋಡು- ಗುಂಡ್ಯ ಚತುಷ್ಪಥ ಕಾಂಕ್ರೀಟ್‌  ರಸ್ತೆ  ಕಾಮಗಾರಿ ಪ್ರಾರಂಭ ಗೊಂಡಿದೆ. ಕೆಲವು ಕಡೆ ಇರುವ ಸಮಸ್ಯೆ ಗಳನ್ನು  ಬಗೆ ಹರಿ ಸಲು ಕ್ರಮ ಕೈಗೊಳ್ಳಲಾಗಿದೆ ಎಂದವರು ವಿವರಿಸಿದರು. ಪಂಪ್‌ವೆಲ್‌ ಹಾಗೂ ತೊಕ್ಕೊಟ್ಟು  ಫ್ಲೆಓವರ್‌ ಕಾಮಗಾರಿ ಗಳ ನಿಧಾನಗತಿಗೆ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಅವರು ತ್ವರಿತ ಗತಿಯಲ್ಲಿ ಮುಗಿಸುವಂತೆ ಸೂಚಿಸಿದರು. 

ರಾಷ್ಟ್ರೀಯ ಹೆದ್ದಾರಿ ಗುಂಡಿ ಮುಚ್ಚುವ ಕಾಮಗಾರಿಗೆ ಈಗಾಗಲೇ ಟೆಂಡರ್‌ ಕರೆಯ ಲಾಗಿದೆ. ಬಿ.ಸಿ. ರೋಡಿನಲ್ಲಿ  ಸರ್ವಿಸ್‌ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ  ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್‌ ವಿಜಯ ಕುಮಾರ್‌  ತಿಳಿಸಿದರು.

ಪಡೀಲ್‌ ರೈಲ್ವೇ ಕೆಳಸೇತುವೆ ಅ. 16ಕ್ಕೆ  ಸಂಚಾರಕ್ಕೆ  ಮುಕ್ತ
ರಾ.ಹೆ. 75ರಲ್ಲಿ ಪಡೀಲ್‌ನಲ್ಲಿ  ಹೊಸದಾಗಿ ನಿರ್ಮಾಣವಾಗಿರುವ ರೈಲ್ವೇ ಕೆಳಸೇತುವೆ ಅ. 16ರಂದು ಸಂಚಾರಕ್ಕೆ ತೆರವುಗೊಳಿಸಲಾಗುವುದು. ಬಳಿಕ ಹಳೆಯ ಕೆಳಸೇತುವೆಯನ್ನು ದುರಸ್ತಿ ಕಾಮಗಾರಿಗಳಿಗಾಗಿ  ಮುಚ್ಚ ಲಾಗುವುದು. ರೈಲುಗಳು ಸಂಚರಿಸುವಾಗ  ಸೇತುವೆ  ಕೆಳಗೆ ಸಾಗುವ ವಾಹನಗಳ ಮೇಲೆ ಮಲಿನಗೊಂಡ ನೀರು ಬೀಳುತ್ತಿರುವುದನ್ನುನಿಲ್ಲಿ ಸಲು ತಡೆಯನ್ನು ನಿರ್ಮಿಸಲಾಗುವುದು. ಪಂಪ್‌ವೆಲ್‌ ಹಾಗೂ ತೊಕ್ಕೊಟ್ಟು ಫ್ಲೆ$çಓವರ್‌ ಕಾಮಗಾರಿಗಳನ್ನು  ಮುಂದಿನ ಎಪ್ರಿಲ್‌ನೊಳಗೆ ಪೂರ್ಣ ಗೊಳಿ ಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ನಳಿನ್‌ ವಿವರಿಸಿದರು.

ಟಾಪ್ ನ್ಯೂಸ್

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.