ಆದರ್ಶ ಬದುಕೇ ಕ್ರಿಸ್ತರ ಸಂದೇಶ ಸಾರುವ ಸಾಧನೆ
Team Udayavani, Oct 22, 2017, 1:15 PM IST
ಬೆಳ್ತಂಗಡಿ, ಅ. 21: ಯೇಸುಕ್ರಿಸ್ತರ ಸಂದೇಶವನ್ನು ಸಾರುವವರು ಮೊದಲು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು. ತಾನು ಅನುಭವಿಸಿದ ಕ್ರಿಸ್ತನನ್ನು ತನ್ನ ಬದುಕಿನ ಮೂಲಕ ಇತರರಿಗೂ ತಿಳಿಸುವ ಕಾರ್ಯ ಮಾಡಬೇಕು, ಆದರ್ಶ ಬದುಕೇ ಕ್ರಿಸ್ತರ ಸಂದೇಶ
ಸಾರುವ ಸಾಧನವಾಗಬೇಕು ಹೊರತು ಪುಸ್ತಕದ ಭಾಷಣಗಳಲ್ಲ ಎಂದು ಸುಪ್ರೀಂ ಕೋರ್ಟಿನ ನ್ಯಾಯಾಧೀಶ ಕುರಿಯನ್ ಜೋಸೆಫ್ ಹೇಳಿದರು.
ಅವರು ಶನಿವಾರ ಬೆಳ್ತಂಗಡಿಯ ಸಂತ ಲಾರೆನ್ಸ್ ಪ್ರಧಾನ ದೇವಾಲಯದ ಆವರಣದಲ್ಲಿ ನಡೆದ ಕಿರಿಯ ಕುಸುಮ ಮಿಷನ್ ಲೀಗ್ನ (ಸಿಎಂಎಲ್) 70ನೇ ವರ್ಷಾಚರಣೆಯ ರಾಷ್ಟ್ರ ಮಟ್ಟದ ಸಮಾವೇಶದಲ್ಲಿ ಮುಖ್ಯ ಭಾಷಣಕಾರ ರಾಗಿ ಮಾತನಾಡಿದರು.
ಪ್ರೀತಿಯ ಸಂದೇಶ ತಾನು ತನ್ನ ವ್ಯಕ್ತಿತ್ವವನ್ನು ಸಿಎಂಎಲ್ ಮೂಲಕವೇ ರೂಪಿಸಿಕೊಂಡವ ಎಂದ ಅವರು, ಈ ಸಂಘಟನೆ ಸೇವೆ, ತ್ಯಾಗ, ಪ್ರೀತಿ, ಸಹನೆಯ ಸಂದೇಶವನ್ನು ನೀಡುತ್ತಾ ತನ್ನ ಸದಸ್ಯರಲ್ಲಿ ಈ ಗುಣಗಳನ್ನು ಬೆಳೆಸುವ ಮೂಲಕ ಜಗತ್ತಿಗೆ ಸೇವೆ ಮಾಡುವ ಕಾರ್ಯವನ್ನು ಮಾಡುತ್ತಿದೆ. ಸೇವೆ ಹಾಗೂ ತ್ಯಾಗಪೂರ್ಣವಾದ ಜೀವನದ ಮೂಲಕ ಮಿಷನರಿಗಳು ಜಗತ್ತಿನಲ್ಲಿ ಯೇಸುಕ್ರಿಸ್ತರ ಪ್ರೀತಿಯ ಸಂದೇಶವನ್ನು ಸಾರುತ್ತಿವೆ ಸೇವೆ ಮಾಡುವುದು ಎಂದಿಗೂ ಮತಾಂತರಕ್ಕಾಗಿ ಅಲ್ಲ ಅದು ಗುರಿಯೂ ಅಲ್ಲ, ಉತ್ತಮ ಜೀವನ ನಡೆಸುವ ಮೂಲಕ ಇತರರಿಗೆ ಕ್ರಿಸ್ತರ ಸಂದೇಶವನ್ನು ನೀಡುವವನೇ ನೈಜ ಅರ್ಥದಲ್ಲಿ ಕ್ರೈಸ್ತನಾಗುತ್ತಾನೆ ಎಂದರು.
ತಲಶ್ಮೇರಿ ಮಹಾ ಧರ್ಮಪ್ರಾಂತದ ಆರ್ಚ್ ಬಿಷಪ್ ರೈ| ರೆ| ಜಾರ್ಜ್ ಞರಳಕ್ಕಾಟ್ ಕಾರ್ಯಕ್ರಮ ಉದ್ಘಾಟಿಸಿದರು. ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಬಿಷಪ್ ರೈ| ರೆ| ಲಾರೆನ್ಸ್ ಮುಕ್ಕುಯಿ, ಸಂಘಟನೆಯ ಹಿರಿಯ ಸದಸ್ಯರನ್ನು ಸಮ್ಮಾನಿಸಿದರು.
ಭದ್ರಾವತಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಜೋಸೆಫ್ ಅರುಮಚ್ಚಾಡತ್, ಮಂಡ್ಯ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ|ಆ್ಯಂಟನಿ ಕರಿಯಿಲ್, ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಗೀವರ್ಗೀಸ್ ಮಾರ್ಮಕ್ಕಾರಿಯೋಸ್ ಶುಭ ಹಾರೈಸಿದರು.
ಸಿಎಂಎಲ್ನ ರಾಷ್ಟ್ರೀಯ ಅಧ್ಯಕ್ಷ ಬಿನೋಯಿ ಪಳ್ಳಿಪರಂಬಿಲ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಮುಖಂಡರಾದ ಡೇವಿಸ್ ವಾಲೂರಾನ್, ಫಾ| ಹ್ಯಾರಿ ಡಿ’ಸೋಜಾ, ರೋಯಿ ಮ್ಯಾಥ್ಯೂ, ಜ್ಞಾನಪ್ರಕಾಶ್, ಜೋರ್ಜ್ಕಾರಕ್ಕಲ್, ಫಾ| ಆ್ಯಂಟನಿ ಪುದಿಯ ಪರಂಬಿಲ್, ಸುಜಿ ಥಾಮಸ್, ಮೀರಾ ಜಾರ್ಜ್ ಉಪಸ್ಥಿತರಿದ್ದರು.
ರಾಜ್ಯ ಸಿಎಂಎಲ್ ನಿರ್ದೇಶಕ ಫಾ| ಜೋಸೆಫ್ ಮಟ್ಟಂ ಸ್ವಾಗತಿಸಿ, ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಸುಜಿ ಥಾಮಸ್ ವರದಿ ವಾಚಿಸಿದರು. ಟೈಟಸ್ ಮಂಪರಂಬಿಲ್ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ 3,000ಕ್ಕೂ ಅಧಿಕ ಮಂದಿ ಭದ್ರಾವತಿ, ಮಂಡ್ಯ, ತಲಶ್ಮೇರಿ ಹಾಗೂ ಕೊಡಗು, ದ.ಕ., ಉಡುಪಿ ಪ್ರಾಂತದ ಸಿಎಂಎಲ್ ಸದಸ್ಯರಿಂದ ಭವ್ಯ ರ್ಯಾಲಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ