ಥಿಯೇಟರ್ ಮಾಲಕರಿಂದಲೇ ತುಳು ಚಿತ್ರಕ್ಕೆ ಅನ್ಯಾಯ: ಕಾಪಿಕಾಡ್
Team Udayavani, Oct 28, 2017, 12:09 PM IST
ಮಂಗಳೂರು: ಬೊಳ್ಳಿ ಮೂವೀಸ್ ನಿರ್ಮಾಣದ “ಅರೆಮರೆಲರ್’ ಸಿನೆಮಾವನ್ನು ಪ್ರಭಾತ್ ಸಿನೆಮಾ ಮಂದಿರದಿಂದ ಥಿಯೇಟರ್ ಮಾಲಕರು ಎತ್ತಂಗಡಿ ಮಾಡುವ ಮೂಲಕ ತುಳು ಚಿತ್ರಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ನಟ, ನಿರ್ಮಾಪಕ ದೇವದಾಸ್ ಕಾಪಿಕಾಡ್ ದೂರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ನಾಟಕ ಮತ್ತು ಚಿತ್ರ ನನ್ನ ಉಸಿರು. ಆದರೆ ಥಿಯೇಟರ್ ಮಾಲಕರಿಂದ, ಪರಭಾಷಾ ಚಿತ್ರಗಳಿಂದ ನಿರಂತರ ಅನ್ಯಾಯವಾಗುತ್ತಿದೆ. ತುಳು ಭಾಷೆ ಮೇಲೆ ಅಭಿಮಾನದಿಂದ “ಅರೆಮರೆಲರ್’ ಚಿತ್ರ ಮಾಡಿದ್ದೇನೆ. ಆದರೆ ಬೇರೆ ಭಾಷೆಯ ಸಿನೆಮಾ ಇದೆ ಎಂದು ಚಿತ್ರ ತೆಗೆಯಲು ಪ್ರಭಾತ್ ಸಿನೆಮಾ ಥಿಯೇಟರ್ ಮಾಲಕರು ಒತ್ತಡ ಹಾಕುತ್ತಿದ್ದಾರೆ. ಉತ್ತಮ ಕಲೆಕ್ಷನ್ ಇರುವ ಸಿನೆಮಾ ತೆಗೆಯಿರಿ ಎಂದು ಥಿಯೇಟರ್ ಮಾಲಕರು ಹೇಳುವುದು ಸರಿಯಲ್ಲ ಎಂದರು.
ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್ ಮಾತನಾಡಿ, ಸಿನೆಮಾವನ್ನು ತೆಗೆಯುವ ಮೊದಲು ಥಿಯೇಟರ್ ಮಾಲೀಕರು ನೋಟಿಸ್ ನೀಡಬೇಕಿತ್ತು.ಇದ್ಯಾವುದನ್ನು ಮಾಡದೇ ಸಿನಿಮಾವನ್ನು ಎತ್ತಂಗಡಿ ಮಾಡಿದ್ದಾರೆ. ಇದರ ವಿರುದ್ಧ ತುಳು ಚಿತ್ರ ನಿರ್ಮಾಪಕರು ಒಟ್ಟಾಗಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಸಂದರ್ಭ ಚಿತ್ರ ನಿರ್ಮಾಪಕರಾದ ಶರ್ಮಿಳಾ ಕಾಪಿಕಾಡ್, ಶರತ್ ಕದ್ರಿ ಮುಖೇಶ್ ಹೆಗ್ಡೆ, ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?