ಸ್ವಚ್ಛತೆ: ಬೀದಿ ನಾಟಕ ಪ್ರದರ್ಶನ
Team Udayavani, Nov 24, 2017, 12:16 PM IST
ಮಹಾನಗರ : ನಲಂದಾ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಸ್ವಚ್ಛತೆ ಬಗ್ಗೆ ಬೀದಿ ನಾಟಕವನ್ನು ಇತ್ತೀಚೆಗೆ ವಿ.ಟಿ. ರಸ್ತೆಯ ಟ್ಯಾಂಕ್ ಕಾಲನಿಯ ವಠಾರದಲ್ಲಿ ನಡೆಸಿದರು.
ಮಕ್ಕಳಲ್ಲಿ ಸ್ವಚ್ಛ ಭಾರತ ನಿರ್ಮಾಣದ ಅರಿವು ಮೂಡಿಸಿ ಚಿಕ್ಕಂದಿನಿಂದಲೇ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರೆ ನಾಳಿನ ಬದುಕು ಸುಂದರವಾಗುತ್ತದೆ ಎಂಬುದರ ಬಗ್ಗೆ ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಡಾ| ಕೆ. ಮೋಹನ್ ಪೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ಸವಿತಾ ಕಾಮತ್, ಸಂಸ್ಥೆಯ ಸದಸ್ಯ ಬಿ. ಆರ್. ಶೆಣೈ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಗಾಯಕ್ವಾಡ್ ಉಪಸ್ಥಿತರಿದ್ದರು.