ಹೊಸ ವರ್ಷದ ಮೊದಲ ದಿನ 32 ಜನನ  


Team Udayavani, Jan 2, 2018, 12:49 PM IST

02-24.jpg

ಮಂಗಳೂರು: ಹೊಸ ವರ್ಷ ಬದುಕಿನಲ್ಲಿ ಹೊಸ ಹರುಷ ಹಾಗೂ ಹೊಸ ಖುಷಿಯ ವಿಚಾರಗಳನ್ನು ತರಬೇಕು ಎನ್ನುವುದು ಎಲ್ಲರ ಮಹದಾಸೆ. ಇಂಥ ಸಂಭ್ರಮದ ಹೊಸ ವರ್ಷ ಉದಯಿಸುವ ಗಳಿಗೆಯಲ್ಲಿ ಸಂಸಾರದಲ್ಲಿ ಹೊಸ ಅತಿಥಿಯ ಆಗಮನವಾದರೆ ಆ ಕುಟುಂಬಕ್ಕೆ ಅದೆಷ್ಟು ಸಂತೋಷವಾಗಬಹುದು!

ಹೌದು, ಎಲ್ಲರೂ ಪಟಾಕಿ ಸಿಡಿಸಿ ನರ್ತಿಸುತ್ತ 2018ನೇ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದರೆ, ಅದೆಷ್ಟೊ ಕುಟುಂಬಗಳಲ್ಲಿ ಆ ಗಳಿಗೆಯಲ್ಲಿ ಮುದ್ದು ಕಂದಮ್ಮ ಗಳ ಜನನವಾಗಿದೆ. ದ.ಕನ್ನಡ ಜಿಲ್ಲೆಯಲ್ಲಿ ಹೊಸ ವರ್ಷದ ಮೊದಲ ದಿನ 32ಕ್ಕೂ ಹೆಚ್ಚು ಮಕ್ಕಳು ಜನಿಸಿದ್ದಾರೆ.  ನಗರದ ಸರಕಾರಿ ಲೇಡಿಗೋಶನ್‌, ಅತ್ತಾವರ ಕೆಎಂಸಿ, ಕುಂಟಿಕಾನದ ಎ.ಜೆ., ಕಂಕನಾಡಿಯ ಫಾದರ್‌
ಮುಲ್ಲರ್‌, ದೇರಳಕಟ್ಟೆಯ ಜ| ಕೆ.ಎಸ್‌. ಹೆಗ್ಡೆ, ಗಾಂಧಿ ನಗರದ ಭಟ್‌ ನರ್ಸಿಂಗ್‌ ಹೋಂ ಆಸ್ಪತ್ರೆಗಳಲ್ಲಿ ಹೊಸ ವರ್ಷದ ಮೊದಲ ದಿನ (ರವಿವಾರ ಮಧ್ಯರಾತ್ರಿ 12 ಗಂಟೆಯಿಂದ ಸೋಮವಾರ ಸಂಜೆ 4 ಗಂಟೆ ವರೆಗೆ) ಹುಟ್ಟಿದ ಮಕ್ಕಳ ವಿವರವು “ಉದಯವಾಣಿ’ಗೆ ದೊರಕಿದೆ. ಈ ಕಂದಮ್ಮಗಳ ಪೈಕಿ ಹೆಣ್ಣುಮಕ್ಕಳೇ ಹೆಚ್ಚು ಇರುವುದು ವಿಶೇಷ. 

ಸರಕಾರಿ ಆಸ್ಪತ್ರೆಯಲ್ಲಿ 6 ಮಕ್ಕಳು
ಲೇಡಿಗೋಶನ್‌ ಸರಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಒಟ್ಟು ಆರು ಮಕ್ಕಳು ಜನಿಸಿದ್ದಾರೆ. ಈ ಪೈಕಿ ಐವರು ಸಿಸೇರಿಯನ್‌ ಮೂಲಕ, ಒಂದು ಮಾತ್ರ ಸಹಜ ಹೆರಿಗೆ. ಇವರ ಪೈಕಿ ನಾಲ್ಕು ಹೆಣ್ಣು, ಎರಡು ಗಂಡು. ಈ ಮಕ್ಕಳೆಲ್ಲ ಕ್ರಮವಾಗಿ ಸೋಮವಾರ ಪ್ರಾತಃಕಾಲ 5.38, 6.31, 6.40, ಬೆಳಗ್ಗೆ 10.02, 10.11 ಮತ್ತು 10.38ಕ್ಕೆ ಹುಟ್ಟಿದ್ದಾರೆ. ಎಲ್ಲ ನವಜಾತ ಶಿಶುಗಳು ಆರೋಗ್ಯವಾಗಿವೆ ಎಂದು ಆಸ್ಪತ್ರೆ ಸಿಬಂದಿ ತಿಳಿಸಿದ್ದಾರೆ. ಹೊಸ ವರ್ಷದಂದೇ ತಮಗೆ ಹೆಣ್ಣುಮಗು ಜನಿಸಿದ್ದಕ್ಕೆ ತುಂಬಾ ಖುಷಿಗೊಂಡಿರುವ ಅನಿಲ್‌, “ಮಗು ಜನಿಸುವ ಅಂದಾಜು ದಿನಾಂಕ ಜನವರಿ ಆಸುಪಾಸಿನಲ್ಲೇ ಇತ್ತಾದರೂ ಜನವರಿ ಒಂದರಂದೇ ಹೆರಿಗೆಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಹೊಸ ವರ್ಷದ ಮೊದಲ ದಿನವೇ ಹೆಣ್ಣುಮಗು ಹುಟ್ಟಿದ್ದು ಬಹಳಷ್ಟು ಖುಷಿ ಕೊಟ್ಟಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಹೊಷ ವರ್ಷದಂದು 21 ಹೆಣ್ಣುಮಕ್ಕಳು
ನಗರದ ವಿವಿಧ ಆಸ್ಪತ್ರೆಗಳಿಂದ ಲಭ್ಯವಾದ ಮಾಹಿತಿಯಂತೆ ಹೊಸ ವರ್ಷದಲ್ಲಿ ಜಿಲ್ಲೆಯಲ್ಲಿ ಜನಿಸಿರುವ ಮಕ್ಕಳ ಪೈಕಿ ಹೆಣ್ಣುಮಕ್ಕಳ ಸಂಖ್ಯೆಯೇ ಅಧಿಕ. ರವಿವಾರ ಮಧ್ಯರಾತ್ರಿ 12 ಗಂಟೆಯಿಂದ ಸೋಮವಾರ ಸಂಜೆ 4 ಗಂಟೆಯವರೆಗೆ ಜನ್ಮ ತಳೆದ 32 ಮಕ್ಕಳ ಪೈಕಿ 21 ಹೆಣ್ಣುಮಕ್ಕಳು. ಉಳಿದ 11 ಗಂಡು. ಇದಲ್ಲದೆ, ಮಂಗಳೂರು ಹೊರವಲಯದ ಮೂಡಬಿದಿರೆಯ ಜಿ.ವಿ. ಪೈ ಆಸ್ಪತ್ರೆಯಲ್ಲಿ ಧರ್ಮವೀರ ಮತ್ತು ಡಾ| ರಮ್ಯಾ ದಂಪತಿಗೆ ಮಧ್ಯರಾತ್ರಿ 12.52ಕ್ಕೆ ಹೆಣ್ಣುಮಗು ಜನಿಸಿದ್ದು, ಹೊಸ ವರ್ಷದಂದು ಮಗು ಜನಿಸಿದ್ದಕ್ಕೆ ದಂಪತಿ ಹರ್ಷ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ 21 ಜನನ
ಉಡುಪಿ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಹೊಸ ವರ್ಷದ ಮೊದಲ ದಿನ 10 ಮಕ್ಕಳು ಜನಿಸಿದ್ದಾರೆ. ಉಡುಪಿ - 5, ಕುಂದಾಪುರ-4, ಕಾರ್ಕಳ-1 ಜನನ ವಾಗಿದೆ. ಇವರಲ್ಲಿ 5 ಗಂಡು ಮತ್ತು 5 ಹೆಣ್ಣು. ಮಣಿ ಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಒಟ್ಟು 7, ಉಡುಪಿ ಡಾ| ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ 4 ಮಕ್ಕಳು ಜನಿಸಿ ದ್ದಾರೆ. ಮಣಿಪಾಲದಲ್ಲಿ ಜನಿಸಿದ ಮಕ್ಕಳಲ್ಲಿ 3 ಗಂಡು, 4 ಹೆಣ್ಣು; ಉಡುಪಿಯಲ್ಲಿ 2 ಗಂಡು, 2 ಹೆಣ್ಣು.

ಹೊಸ ವರ್ಷದ ಉಡುಗೊರೆ
“ನನ್ನ ಪತ್ನಿಗೆ ಜನವರಿ ಒಂದರಂದೇ ಹೆರಿಗೆ ದಿನಾಂಕ ನೀಡಲಾಗಿತ್ತು. ನಿರೀಕ್ಷೆಯಂತೆಯೇ ಹೊಸ ವರ್ಷದ ಮೊದಲ ದಿನ ಮನೆಗೆ ಭಾಗ್ಯಲಕ್ಷ್ಮಿಯ ಆಗಮನವಾಗಿದೆ. ಈ ಮಗು ನಮಗೆ ಹೊಸ ವರ್ಷದ ಉಡುಗೊರೆ. ತುಂಬಾ ಖುಷಿಯಾಗುತ್ತಿದೆ.’
ಧರ್ಮವೀರ ಮತ್ತು ರಮ್ಯಾ ಮೂಡಬಿದಿರೆ

ಖಾಸಗಿ ಆಸ್ಪತ್ರೆಗಳಲ್ಲಿ ಹುಟ್ಟಿದ ಮಕ್ಕಳು ಕುಂಟಿಕಾನದ ಎ.ಜೆ. ಆಸ್ಪತ್ರೆ ಒಟ್ಟು ಜನನ: 5 ಸಮಯ: ಬೆಳಗ್ಗೆ 6.11, 7.05, 
     7.55, 8.07, 10.10
ಪ್ರಸೂತಿ ವಿಧ: 1 ಸಹಜ, 4 ಸಿಸೇರಿಯನ್‌
ಮಕ್ಕಳು: 2 ಗಂಡು, 3 ಹೆಣ್ಣು
ದೇರಳಕಟ್ಟೆ ಜ| ಕೆ.ಎಸ್‌. ಹೆಗ್ಡೆ ಆಸ್ಪತ್ರೆ
ಒಟ್ಟು ಜನನ: 4
ಸಮಯ: ರವಿವಾರ ತಡರಾತ್ರಿ 12.02, 1.58, ಮುಂಜಾನೆ 4, ಅಪರಾಹ್ನ 2.05
ಪ್ರಸೂತಿ ವಿಧ: 2 ಸಹಜ, 2 ಸಿಸೇರಿಯನ್‌
ಮಕ್ಕಳು: 3 ಗಂಡು, 1 ಹೆಣ್ಣು 
ಅತ್ತಾವರ ಕೆಎಂಸಿ
ಒಟ್ಟು ಜನನ: 4
ಪ್ರಸೂತಿ ವಿಧ: 1 ಸಹಜ, 3 ಸಿಸೇರಿಯನ್‌
ಮಕ್ಕಳು: ಎಲ್ಲವೂ ಹೆಣ್ಣು
ಕಂಕನಾಡಿ ಫಾದರ್‌ ಮುಲ್ಲರ್ ಆಸ್ಪತ್ರೆ
ಒಟ್ಟು ಜನನ: 8
ಪ್ರಸೂತಿ ವಿಧ: 5 ಸಹಜ. 3 ಸಿಸೇರಿಯನ್‌
ಮಕ್ಕಳು: 3 ಗಂಡು, 5 ಹೆಣ್ಣು
ಭಟ್‌ ನರ್ಸಿಂಗ್‌ ಹೋಂ, ಗಾಂಧಿ ನಗರ
ಒಟ್ಟು ಜನನ: 4
ಸಮಯ: ರವಿವಾರ ಮಧ್ಯರಾತ್ರಿ 12.04, ಸೋಮವಾರ ಮಧ್ಯಾಹ್ನ 1, 2, 3.15
ಪ್ರಸೂತಿ ವಿಧ: 3 ಸಹಜ, 1 ಸಿಸೇರಿಯನ್‌ 
ಮಕ್ಕಳು: 3 ಗಂಡು, 1 ಹೆಣ್ಣು

ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Moodabidri ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

Moodabidri ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.