ನೀರಿನ ಬವಣೆ, ರಸ್ತೆ ಸಮಸ್ಯೆ ಬಿಚಿಟ್ಟ ಅರ್ತಿಪದವು ಕಾಲನಿ ನಿವಾಸಿಗಳು


Team Udayavani, Jan 10, 2018, 3:25 PM IST

10–Jan-17.jpg

ನಗರ: ವಾರದೊಳಗೆ ವಿದ್ಯುತ್‌ ಬರಬಹುದು. ಆದರೆ ಕುಡಿಯಲು ದೂರದಿಂದ ನೀರು ಹೊತ್ತು ತರಬೇಕು. ರಸ್ತೆಯೂ
ಇಲ್ಲದ ಕಾರಣ ಬಹಳ ಕಷ್ಟ. ಪುತ್ತೂರು ನಗರಸಭೆ ವ್ಯಾಪ್ತಿಯ ಅರ್ತಿಪದವು ಕಾಲನಿಗೆ ನಗರಸಭೆ ಅಧಿಕಾರಿ, ಜನಪ್ರತಿನಿಧಿಗಳ ತಂಡ ಭೇಟಿ ನೀಡಿದ ಸಂದರ್ಭ, ಕಾಲನಿ ನಿವಾಸಿಗಳು ಮುಂದಿಟ್ಟ ಬೇಡಿಕೆಗಳ ಪಟ್ಟಿಯಿದು.

ಪುತ್ತೂರು ನಗರಸಭಾ ವ್ಯಾಪ್ತಿಯ ಕಾಲನಿಗಳ ಪೈಕಿ ತೀರಾ ಹಿಂದುಳಿದಿರುವುದು ಅರ್ತಿಪದವು ಕಾಲನಿ. ತಮಗೆ ಬೇಕಾದ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳಲು ತಿಳಿಯದಷ್ಟು ಮುಗ್ಧರು. ಹಾಗೆಂದು ನೇರವಾಗಿ ಸೌಲಭ್ಯ ನೀಡಲು ಸಾಧ್ಯವಾಗುತ್ತಿಲ್ಲ. ಕಾರಣ ಅವರ ಬಳಿ ದಾಖಲೆಗಳು ಇಲ್ಲದೇ ಇರುವುದು.

ಎಸ್ಟೇಟ್‌ಗಳಲ್ಲಿ ದುಡಿಮೆ
ಹಲವು ವರ್ಷಗಳ ಹಿಂದೆ ಮಾಯಿಲರು ಬಂದು ಅರ್ತಿಪದವಿನಲ್ಲಿ ನೆಲೆಸಿದ್ದಾರೆ. ಬಳಿಕ ಅದೇ ರೀತಿ ಜೀವನ ಸಾಗಿಸುತ್ತಿದ್ದಾರೆ. ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿದು ಕೊಂಡ ರೀತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕಾನೂನಿಗೆ ತಕ್ಕಂತೆ ಸೌಲಭ್ಯ ಪಡೆದುಕೊಳ್ಳಬೇಕು ಎಂಬ ಅರಿವು ಇಲ್ಲ. ಇಲ್ಲಿನ ಕೆಲ ಯುವಕರು ಮಡಿಕೇರಿಯ ಎಸ್ಟೇಟ್‌ಗಳಲ್ಲಿ ದುಡಿಯಲು ಹೋಗುತ್ತಾರೆ. ಉಳಿದಂತೆ ಅರ್ತಿಪದವು ಕಾಲನಿಯಷ್ಟೇ ಇವರ ಬದುಕು.

ದೊಡ್ಡ ಮನೆ ನೋಡಿದಾಗ, ಅಲ್ಲಿನ ಟಿವಿ ನೋಡಿದಾಗ ಕಾಲನಿಯ ಮಕ್ಕಳಿಗೂ ಆಸೆ. ಆದರೆ ಇದನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಲನಿ ನಿವಾಸಿಗಳು ಹೇಳಿಕೊಳ್ಳುತ್ತಾರೆ. ಕಾಲನಿ ನಿವಾಸಿಗಳಿಗೆ ಸರಕಾರದಿಂದ ಬೇಕಾದಷ್ಟು ಸೌಲಭ್ಯ ಇವೆ. ಅದನ್ನು ಪಡೆದುಕೊಳ್ಳಬೇಕಿದ್ದರೆ ದಾಖಲೆಗಳನ್ನು ಮೊದಲು ಸಿದ್ಧ ಮಾಡಬೇಕು ಎಂದು ಅವರಿಗೆ ಕಿವಿಮಾತು ಹೇಳಲಾಯಿತು.

ರಸ್ತೆಯಿಲ್ಲ
ಅರ್ತಿಪದವಿನಲ್ಲಿ ಎರಡು ಕಡೆ ಮಾಯಿಲರ ಮನೆಗಳಿವೆ. ಒಂದು ಕಡೆಯ ನಿವಾಸಿಗಳಿಗೆ ರಸ್ತೆ ನಿರ್ಮಿಸಲಾಗಿದೆ. ಇನ್ನೊಂದು ಬದಿಯ ಮನೆಗಳಿಗೆ ನಡೆದು ಕೊಂಡು ಹೋಗುವುದು ಕಷ್ಟ. ಆದ್ದರಿಂದ ನೀರಿನ ಸಂಪರ್ಕ ನೀಡುವುದು ತುಸು ಕಷ್ಟ. ಒಂದಷ್ಟು ದೂರ ಪೈಪ್‌ನಲ್ಲಿ ಸಂಪರ್ಕ ನೀಡಿ, ಬಳಿಕ ಹೊತ್ತು ತರುತ್ತಾರೆ. ಈ ಬಗ್ಗೆ ಚರ್ಚೆ ನಡೆಸಿದ ನಗರಸಭೆ, ಜೆಸಿಬಿಯಲ್ಲಿ ರಸ್ತೆ ನಿರ್ಮಿಸಿಕೊಡುವ ಕಡೆ ಮೊದಲು ಗಮನ ಕೊಡಬೇಕು. ರಸ್ತೆ ನಿರ್ಮಾಣ ಆಗುತ್ತಿದ್ದಂತೆ, ಏರು- ತಗ್ಗು ಪ್ರದೇಶ ಸಮತಟ್ಟಾಗುತ್ತದೆ. ಬಳಿಕ ನೀರಿನ ಸಂಪರ್ಕಕ್ಕೂ ದಾರಿ ಮಾಡಿಕೊಟ್ಟಂತಾಗುತ್ತದೆ. ಆದಷ್ಟು ಶೀಘ್ರ ಈ ಬಗ್ಗೆ ಗಮನ ಹರಿಸುವಂತೆ ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಹಾಗೂ ಸದಸ್ಯ ಮಹಮ್ಮದ್‌ ಆಲಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಹಕ್ಕುಪತ್ರ ಇಲ್ಲ
ಅರ್ತಿಪದವು ಕಾಲನಿಯ ಮನೆಗಳಿಗೆ ಹಕ್ಕುಪತ್ರವೇ ಇಲ್ಲ. ಸದ್ಯ 94ಸಿಸಿ ಅರ್ಜಿ ನೀಡಿ, ಹಕ್ಕುಪತ್ರ ಮಾಡಿಸಿಕೊಳ್ಳಬಹುದು. ಆದರೆ ಇದರ ಬಗ್ಗೆ ಮುತುವರ್ಜಿ ವಹಿಸಿಕೊಳ್ಳುವವರು ಇಲ್ಲಿಲ್ಲ. ಒಟ್ಟು 9 ಮನೆಗಳಿದ್ದು, ಕೆಲವೊಂದು ಮುರಿದು ಬೀಳುವ ಸ್ಥಿತಿಯಲ್ಲಿವೆ. ಇದರೊಳಗೇ ಜೀವನ ಸಾಗಿಸಬೇಕು. ಹಕ್ಕುಪತ್ರ ಸಿಕ್ಕಿದರೆ, ಸರಕಾರದ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಬಹುದು.

ನಗರಸಭೆ ವತಿಯಿಂದ ಒಂದು ದಿನ ಕಾಲನಿ ಭೇಟಿ ಮಾಡಲಾಗುವುದು. ಅಂದು ಕಾಲನಿ ನಿವಾಸಿಗಳಿಗೆ ಅಗತ್ಯ ದಾಖಲೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಅಗತ್ಯವಾದ ಅರ್ಜಿ ತುಂಬುವುದು, ಫೂಟೋ ತೆಗೆಸಿಕೊಳ್ಳುವ ಕೆಲಸಗಳನ್ನು ಮಾಡಲಾಗುವುದು ಎಂದು ಅಧ್ಯಕ್ಷೆ ಜಯಂತಿ ಬಲ್ನಾಡ್‌ ತಿಳಿಸಿದರು.

ನಶಿಸುತ್ತಿರುವ ಜನಾಂಗ
ಪುತ್ತೂರಿನ ಅರ್ತಿಪದವು ಕಾಲನಿಯಲ್ಲಿ ಮಾತ್ರ ಸಿಗುವ ಜನಾಂಗ ಮಾಯಿಲರು. ಕೊಡಗು ಮತ್ತು ಪುತ್ತೂರಿನಲ್ಲಿ ಮಾತ್ರ ಈ ಜನಾಂಗದ ಜನರು ಕಾಣಸಿಗುತ್ತಾರೆ ಎಂದೂ ಹೇಳಲಾಗುತ್ತದೆ. ಸದ್ಯ ಮಾಯಿಲ ಜನಾಂಗ ಅಳಿವಿನ ಅಂಚಿನಲ್ಲಿದೆ. ಮಲಯಾಳ, ಕೊಡಗು, ಕನ್ನಡ ಮಿಶ್ರಿತ ಮಾಯಿಲ ಎಂಬ ಭಾಷೆ ಇವರ ಆಡುಮಾತು. ಕಾಲನಿಯಲ್ಲಿರುವ ಭೈರವ, ಕಲ್ಲುರ್ಟಿ ಮೊದಲಾದ ದೈವಗಳ ಗುಡಿ ಪಾಳು ಬಿದ್ದುಕೊಂಡಿದೆ.

ಮಾದರಿ ಕಾಲನಿ ರೂಪುಗೊಳಿಸುವ ಯೋಜನೆ
ಮಾಯಿಲರ ಕಾಲನಿಯನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದೇವೆ. ಆದರೆ ಅವರೇ ಮುಂದೆ ಬಾರದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿತ್ತು. ಇದೀಗ ನಗರಸಭೆ ವತಿಯಿಂದ ಮುತುವರ್ಜಿ ವಹಿಸಿಕೊಳ್ಳಲಾಗುವುದು. ಮಾದರಿ ಕಾಲನಿಯಾಗಿ ರೂಪುಗೊಳಿಸಬೇಕು ಎಂಬ ಯೋಜನೆಯಿದೆ.
ಜಯಂತಿ ಬಲ್ನಾಡ್‌,
  ಅಧ್ಯಕ್ಷೆ, ಪುತ್ತೂರು ನಗರಸಭೆ

ಟಾಪ್ ನ್ಯೂಸ್

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.