ಸುರತ್ಕಲ್: ಭಿನ್ನ ಕೋಮಿನಜೋಡಿ ಪೊಲೀಸರ ವಶಕ್ಕೆ
Team Udayavani, Jan 12, 2018, 11:53 AM IST
ಸುರತ್ಕಲ್: ಕುಳಾಯಿ ಬಳಿ ಭಿನ್ನ ಕೋಮಿನ ಜೋಡಿ ಸಂಶ ಯಾಸ್ಪದವಾಗಿ ತಿರುಗುತ್ತಿದ್ದಾಗ ಬಜರಂಗದಳದ ಕಾರ್ಯಕರ್ತರು ಸುರತ್ಕಲ್ ಪೊಲೀಸರಿಗೆ ಒಪ್ಪಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ತೋಟ ಬೆಂಗ್ರೆಯ ಸಫಾನ್ (21) ಹಾಗೂ ಮಂಗಳಾದೇವಿ ಪರಿಸರದ ಯುವತಿ ಕುಳಾç ಕಾವಿನಕಲ್ಲಿನಲ್ಲಿರುವ ಯುವಕನ ಸಂಬಂಧಿಗಳ ಮನೆಗೆ ಗುರುವಾರ ಬೆಳಗ್ಗೆ ಬಂದಿದ್ದರು.
ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಜೋಡಿಯನ್ನು ವಿಚಾರಿಸಿದರು. ಈ ಸಂದರ್ಭ ನಮ್ಮ ಕಂಪೆನಿಯ ಹಣ ಕಲೆಕ್ಷನ್ಗೆ ಬಂದಿದ್ದೇವೆ ಎಂದು ಸುಳ್ಳು ಹೇಳಿದರು ಎನ್ನಲಾಗಿದೆ. ಮತ್ತಷ್ಟು ವಿಚಾರಿಸಿದಾಗ ಇವರು ಮಂಗಳೂರಿನ ಮಾಲ್ ಒಂದರಲ್ಲಿ ಕೆಲಸಕ್ಕಿದ್ದು, ಮಧ್ಯಾಹ್ನ ವೇಳೆ ಬೈಕಿನಲ್ಲಿ ಯುವಕನ ಸಂಬಂಧಿಕರ ಮನೆಗೆ ಬಂದಿರುವುದು ಸ್ಪಷ್ಟವಾಯಿತು.
ಮನೆಯಲ್ಲಿ ಸುಳ್ಳು ಹೇಳಿದ್ದ ಯುವತಿ !
ಯುವತಿಗೆ ಗುರುವಾರ ರಜೆ ಇತ್ತಾದರೂ ಮನೆಯಲ್ಲಿ ಬಟ್ಟೆ ಖರೀದಿಸಲು ಹೋಗುವುದಾಗಿ ಸುಳ್ಳು ಹೇಳಿ ಯುವಕನ ಜತೆ ಕುಳಾಯಿಗೆ ಬಂದಿದ್ದಳು. ಪೊಲೀಸರು ಪೋಷಕರನ್ನು ಕರೆಸಿ ವಿಚಾರಿಸಿದಾಗ ಈ ಮಾಹಿತಿ ತಿಳಿಯಿತು. ಯುವತಿಯನ್ನು ಎಚ್ಚರಿಕೆ ನೀಡಿ ಪೋಷಕರೊಂದಿಗೆ ಕಳುಹಿಸಿಕೊಡಲಾಯಿತು. ಯುವಕನ ಹೆತ್ತವರಿಗೂ ಮಾಹಿತಿ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು