ತುಳು ಚಲನಚಿತ್ರೋತ್ಸವ ಸಮಾರೋಪ
Team Udayavani, Jan 13, 2018, 11:01 AM IST
ಮಹಾನಗರ: ತುಳು ಸಿನೆಮಾ ರಂಗದಲ್ಲಿರುವ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿ ಎಂದು ಶ್ರೀದೇವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಹೇಳಿದರು.
ಸಿಟಿಸೆಂಟರ್ನ ಸಿನೆಪೊಲೀಸ್ನಲ್ಲಿ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಆಶ್ರಯದಲ್ಲಿ ನಡೆದ ತುಳು ಫಿಲ್ಮ್ ಫೆಸ್ಟಿವಲ್ 2018ರ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುಳು ಸಿನೆಮಾಗಳಿಗೆ ಸಬ್ಸಿಡಿ, ಜತೆಗೆ ಜಿಲ್ಲೆಯಲ್ಲಿ ಚಿತ್ರಮಂದಿರಗಳ ಕೊರತೆ ಇದ್ದು ಅವುಗಳೆಲ್ಲವನ್ನು ನೀಗಿಸುವ ನಿಟ್ಟಿನಲ್ಲಿ ಸರಕಾರ ತುಳು ಚಿತ್ರರಂಗದ ಏಳಿಗೆಗೆ ಪ್ರಯತ್ನಿಸಬೇಕು ಎಂದರು.
ಚಿಂತನೆ ಅಗತ್ಯ
ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮಾತನಾಡಿ, ಸಂಘವು ಹಮ್ಮಿಕೊಂಡ ತುಳು ಚಲನಚಿತ್ರೋತ್ಸವ ಯಶಸ್ವಿಯಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ಸಂಘವು ಥಿಯೇಟರ್ ಸಮಸ್ಯೆ ಮತ್ತು ಕೆಲವು
ಥಿಯೇಟರ್ನಿಂದ ನಿರ್ಮಾಪಕರಿಗೆ ಹಣ ವಾಪಾಸು ಬಾರದಿರುವ ಕುರಿತು ಗಂಭೀರ ಚಿಂತನೆ ನಡೆಸಬೇಕೆಂದರು.
ಸಮ್ಮಾನ
ಈ ಸಂದರ್ಭ ಸಿನೆಮಾಗಳಿಗೆ ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆದ ನಿರ್ಮಾಪಕ, ನಿರ್ದೇಶಕರನ್ನು ಸಮ್ಮಾನಿಸಲಾಯಿತು. ಡಾ| ರಿಚರ್ಡ್ ಕ್ಯಾಸ್ಟಲಿನೊ ಸಮ್ಮಾನ ಸ್ವೀಕರಿಸಿ, ತುಳು ಭಾಷೆಯ ಜತೆಗೆ ಕರ್ನಾಟಕ ಇತರ ಉಪ ಭಾಷೆಗಳಾದ ಕೊಂಕಣಿ, ಕೊಡವ, ಲಂಬಾಣಿ, ಬ್ಯಾರಿ ಭಾಷೆಯ ಚಿತ್ರಗಳನ್ನು ಸೇರಿಸಿ ಸಬ್ಸಿಡಿಗಾಗಿ ಚಿತ್ರ ನಿರ್ಮಾಪಕರ ಸಂಘ ಪ್ರಯತ್ನಿಸಲಿ. ಈಗ ಒಟ್ಟು 125 ಸಿನೆಮಾಗಳಿಗೆ ಸಬ್ಸಿಡಿ ದೊರೆಯುತ್ತದೆ. ಹೀಗಾಗಿ 25 ಪ್ರಾದೇಶಿಕ ಭಾಷಾ ಚಿತ್ರದಲ್ಲಿ ತಯಾರಾಗುವ ಸಿನೆಮಾಗಳಿಗೆ ಸಬ್ಸಿಡಿ ನೀಡುವಂತಹ ಕೆಲಸ ಆಗಬೇಕು ಎಂದರು.
ಸಿನೆಪೊಲಿಸ್ ಸಂಸ್ಥೆಯ ಮ್ಯಾನೇಜರ್ ಕೀರ್ತನ್ ಶೆಟ್ಟಿ, ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್, ಕಾರ್ಯದರ್ಶಿ ಸಚಿನ್ ಎಎಸ್ ಉಪ್ಪಿನಂಗಡಿ, ಕೋಶಾಧಿಕಾರಿ ಕಿಶೋರ್ ಕೊಟ್ಟಾರಿ, ಪ್ರೀತಂ, ವಿಜಯಕುಮಾರ್ ಕೊಡಿಯಾಲ್ಬೈಲ್, ಮೇಗಿನಮನೆ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಮಾಹಿತಿಯ ಕೊರತೆ
ಸಿನೆಮಾರಂಗಕ್ಕೆ ಬರುವ ನಿರ್ಮಾಪಕರಿಗೆ ಮಾಹಿತಿಯ ಕೊರತೆ ಇದೆ. ತುಳು ಚಿತ್ರರಂಗದ ಮಾರುಕಟ್ಟೆ ಮತ್ತು ಸಿನೆಮಾರಂಗದ ಒಂದಷ್ಟು ವಿಚಾರಗಳನ್ನು ತಿಳಿಸುವ ಅಗತ್ಯ ನಿರ್ಮಾಪಕರಿಗೆ ಇದೆ. ಈ ಕೆಲಸವನ್ನು ನಿರ್ಮಾಪಕರ ಸಂಘ ಮಾಡಬೇಕು.
– ಶಿವಧ್ವಜ್, ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್