ಪ್ರತಿ ವಾಹನದಲ್ಲೂ ಇರಲಿ ಡಸ್ಟ್ ಬಿನ್
Team Udayavani, Mar 25, 2018, 3:54 PM IST
ಸಾಮಾನ್ಯವಾಗಿ ವಾಹನಗಳಲ್ಲಿ ಸಂಚರಿಸುವವರು ವಾಹನದೊಳಗೆ ಬಳಕೆ ಮಾಡುವ ವಸ್ತುವಿನ ತ್ಯಾಜ್ಯವನ್ನು ರಸ್ತೆಯಲ್ಲಿ ಎಸೆಯುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಇಂಥವರು ತಮ್ಮ ವಾಹನದೊಳಗೆ ಡಸ್ಟ್ ಬಿನ್ ಇರಿಸಿಕೊಂಡರೆ ಸುಂದರ, ಸ್ವಚ್ಛ ನಗರಕ್ಕೊಂದು ತಮ್ಮ ಕೊಡುಗೆಯನ್ನೂ ನೀಡಿದಂತಾಗುವುದು.
ಒಬ್ಬರು ಮಾಡುವ ತಪ್ಪಿನಿಂದಾಗಿ ಇಡೀ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಕಲ್ಪನೆ ಪ್ರತಿಯೊಬ್ಬರಲ್ಲೂ ಬೆಳೆದಾಗಲೇ ಸ್ವಚ್ಛ ನಗರ ಕಲ್ಪನೆ ಸಾಕಾರವಾಗುವುದು. ಕೆಲವೊಂದು ವಾಹನಗಳ ಸವಾರರು ನೀರು ಕುಡಿದ ಬಾಟಲ್ಗಳನ್ನೂ ಎಸೆಯುತ್ತಾರೆ. ಇಂತಹ ಕಸಗಳನ್ನು ಎಲ್ಲೆಂದರಲ್ಲಿ ಎಸೆಯದೆ ವಾಹನದಲ್ಲೇ ಇಟ್ಟುಕೊಂಡು ಮನೆಗೆ ಹೋದ ಬಳಿಕವೋ ಅಥವಾ ಡಸ್ಟ್ ಬಿನ್ ಇರುವಲ್ಲಿಯೋ ಎಸೆಯಬಹುದಲ್ಲವೇ? ಇಡೀ ನಗರವನ್ನೇ ತಮ್ಮ ಮನೆ ಎಂದು ಭಾವಿಸಿದರೆ ಹೊರಗೆ ಕಸ ಚೆಲ್ಲುವ ಅಭ್ಯಾಸ ಕಡಿಮೆಯಾಗುತ್ತದೆ.
ಬೆಳಗ್ಗೆ ಕೆಲಸಕ್ಕೆ ಹೊರಡುವವರೂ ತಮ್ಮ ಮನೆಯ ಕಸವನ್ನೂ ಹಿಡಿದು ಹೊರಡುತ್ತಾರೆ. ಬಳಿಕ ಎಲ್ಲೋ ಒಂದು ವಾಹನವನ್ನು ನಿಧಾನಿಸಿ ಕಸವನ್ನು ಎಸೆಯುತ್ತಾರೆ. ನದಿಗೂ ಇಂತಹ ಕಸ ಬಿಸಾಡುವ ಪ್ರಸಂಗಗಳೂ ಇದೆ. ಈ ರೀತಿ ಮನೆಯಿಂದ ಕಸ ತರುವ ತಮ್ಮ ವಾಹನದೊಳಗೊಂದು ಡಸ್ಟ್ಬಿನ್ಗಳನ್ನು ಇಡಬಹುದಲ್ಲವೇ ? ತಮ್ಮ ವಾಹನ, ಮನೆ ಪರಿಸರ ಉತ್ತಮವಾಗಿರಬೇಕು ಎಂಬುದು ಕೂಡ ನಗರದ ಸೌಂದರ್ಯಕ್ಕೆ ನೀಡುವ ಕೊಡುಗೆಯಾಗುತ್ತದೆ. ಬಸ್ ಸಹಿತ ಎಲ್ಲ ವಾಹನಗಳಲ್ಲಿ ಡಸ್ಟ್ ಬಿನ್ ಇರಿಸಿದರೆ ಎಲ್ಲರಲ್ಲೂ ಪರಿಸರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಲು ಸಾಧ್ಯವಿದೆ.
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ