ಚಿತ್ರಕಲೆ: ಕರಾವಳಿ ಸಂಸ್ಕೃತಿಯ ಅನಾವರಣ
Team Udayavani, Mar 30, 2018, 10:19 AM IST
ಮಹಾನಗರ: ಅಲ್ಲಿ ಕಲಾ ಪ್ರಪಂಚವೇ ತೆರೆದಿತ್ತು. ಒಂದೆಡೆ ಕರಾವಳಿ ಸಂಸ್ಕೃತಿಯ ನಾಗಾರಾಧನೆ, ಯಕ್ಷಗಾನ, ಬಾಹುಬಲಿ, ಭೂತಾರಾಧನೆ, ಕೋಳಿ ಅಂಕ, ಶ್ರೀಕೃಷ್ಣನ ಚಿತ್ರಕಲೆ ಮೂಡಿಬಂದರೆ ಮತ್ತೂಂದೆಡೆ, ನಮ್ಮ ಸುತ್ತಮುತ್ತಲಿನ ಪ್ರಕೃತಿಯ ಚಿತ್ತಾರ ಚಿತ್ರಕಲೆಯ ಮೂಲಕ ಮೂಡಿಬಂದಿತ್ತು. ಇಂತಹದ್ದೊಂದು ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾದದ್ದು ನಗರದ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ ಹೊಂಬೆಳಕು ಚಿತ್ರಕಲಾ ಪ್ರದರ್ಶನ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರಾವಳಿ ಚಿತ್ರಕಲಾ ಚಾವಡಿಯು ಜಂಟಿಯಾಗಿ ಗುರುವಾರದಿಂದ ನಾಲ್ಕು ದಿನಗಳ ಕಾಲ ಚಿತ್ರಕಲಾ ಪ್ರದರ್ಶನ ಏರ್ಪಡಿಸಿತ್ತು. ಕಾರ್ಯಕ್ರಮಕ್ಕೆ ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಏಕಗಮ್ಯಾನಂದ ಮಹಾರಾಜ್ ಅವರು ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಮಾತಿನ ಮೂಲಕ ಹೇಳಲಾಗದ ವಿಷಯವನ್ನು ಕೂಡ ಕಲಾವಿದ ತನ್ನ ಚಿತ್ರದ ಮೂಲಕ ತಿಳಿಯಪಡಿಸುತ್ತಾನೆ. ಕಲಾವಿದನು ಯಾವ ತಪಸ್ವಿಗೂ ಕಡಿಮೆ ಇಲ್ಲ. ರವಿ ಕಾಣದ್ದನ್ನು ಕವಿ ಕಾಣುತ್ತಾನೆ. ಕವಿ ಕಾಣದ್ದನ್ನು ಕಲಾವಿದ ಕಾಣುತ್ತಾನೆ ಎಂದು ವಿವರಿಸಿದರು.
ಕಲೆ ಪ್ರಕೃತಿಗೆ ಹತ್ತಿರ
ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ರಾಜೇಂದ್ರ ಕೇದಿಗೆ ಮಾತನಾಡಿ, ಕಲೆ, ಸಂಗೀತ, ಸಾಹಿತ್ಯ ಪ್ರಕೃತಿಗೆ ಹತ್ತಿರವಾದುದು ಎಂದು ಹೇಳಿದರು. ಚಿತ್ರ ಕಲಾವಿದ ದಿನೇಶ್ ಹೊಳ್ಳ ಮಾತನಾಡಿ, ಕರಾವಳಿ ಪ್ರದೇಶದಲ್ಲಿ ಪ್ರಕೃತಿ, ಇಲ್ಲಿನ ಸಂಸ್ಕೃತಿಗೆ ಹೊಡೆತ ಬೀಳುತ್ತಿದೆ. ಪ್ರಕೃತಿ ನಾಶವಾಗುತ್ತಿರುವ ಈ ಸಮಯದಲ್ಲಿ ನಾವೆಲ್ಲಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತೋರಿಸುವ ಅಗತ್ಯವಿದೆ ಎಂದರು.
ಬಿ. ಗಣೇಶ ಸೋಮಯಾಜಿ, ವಿಷ್ಣು ಶೇವಗೂರು, ಪೆರ್ಮುದೆ ಮೋಹನ್ ಕುಮಾರ್, ಶರತ್ ಹೊಳ್ಳ, ಕಮಾಲ್, ಪಾಂಡುರಂಗ ರಾವ್, ಅನಂತ ಪದ್ಮನಾಭ ರಾವ್, ದಿನೇಶ್ ಹೊಳ್ಳ, ಸಪ್ನಾ ನೊರೊನ್ಹಾ, ನವೀನ್ ಚಂದ್ರ ಬಂಗೇರ, ಜಾನ್ ಚಂದ್ರನ್, ಸತೀಶ್ ರಾವ್, ಸುಧೀರ್ ಕುಮಾರ್ ಕಾವೂರು, ಪೂರ್ಣೇಶ್, ತಾರಾನಾಥ ಕೈರಂಗಳ, ಬಾಲಕೃಷ್ಣ ಶೆಟ್ಟಿ, ಪುನೀಕ್ ಶೆಟ್ಟಿ, ಜಯಶ್ರೀ ಶರ್ಮ, ರಚನಾ ಸೂರಜ್, ನವೀನ್ ಕೋಡಿಕಲ್, ಈರಣ್ಣ, ಎ. ಮುರಳಿ ಅವರು ಚಿತ್ರಕಲಾ ಪ್ರದರ್ಶನವಿತ್ತು. ಕರಾವಳಿ ಚಿತ್ರಕಲಾ ಚಾವಡಿ ಅಧ್ಯಕ್ಷ ಕೋಟಿ ಪ್ರಸಾದ್ ಆಳ್ವ, ಪ್ರೊ| ಅನಂತ ಪದ್ಮನಾಭ ರಾವ್, ಗಣೇಶ್ ಸೋಮಯಾಜಿ ಮೊದಲಾದವರು ಉಪಸ್ಥಿತರಿದ್ದರು.
ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿ
ಏಕಗಮ್ಯಾನಂದ ಮಹಾರಾಜ್ ಅವರು ಮಾತನಾಡಿ, ಯಾವುದೇ ಧಾರ್ಮಿಕ ಕೇಂದ್ರವು ಆಧ್ಯಾತ್ಮಿಕತೆಗೆ ಸೀಮಿತವಾಗದೆ ಕಲೆ, ಶಿಕ್ಷಣ ಸೇರಿದಂತೆ ಸಾಮಾಜಿಕ ಚಟುವಟಿಕೆ ಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ರಾಮಕೃಷ್ಣ ಪರಮಹಂಸರು ಕೂಡ ಕಲಾವಿದರಾಗಿದ್ದರುಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು