ಪೊಲೀಸ್ ತನಿಖೆ ಚುರುಕು; ಸಿ.ಸಿ. ಕೆಮರಾ ಪರಿಶೀಲನೆ
Team Udayavani, Apr 2, 2018, 8:38 AM IST
ಮಂಗಳೂರು: ಬಾಡಿಗೆಗೆ ಕಾರು ಗೊತ್ತುಪಡಿಸಿದ ಅಪರಿಚಿತರು ಚಾಲಕನನ್ನು ಕೈಕಾಲು ಕಟ್ಟಿ ಹೆಬ್ರಿ ಸಮೀಪ ಎಸೆದು ಹೋದ ಪ್ರಕರಣವೊಂದು ನಡೆದಿದ್ದು, ಈ ಬಗ್ಗೆ ಬರ್ಕೆ ಪೊಲೀಸರು ಸುರತ್ಕಲ್ ಮತ್ತು ನಗರದ ಲಾಲ್ಬಾಗ್ನ ಸಾಯಿಬೀನ್ ಕಾಂಪ್ಲೆಕ್ಸ್ ಸೇರಿದಂತೆ ಹಲವು ಕಡೆ ಸಿಸಿ ಕೆಮರಾಗಳ ಪರಿಶೀಲನೆ ನಡೆಸಿದ್ದಾರೆ.
ಪುತ್ತೂರಿನ ಯುವಕ ಪ್ರಕಾಶ್ ಅವರು ಚಲಾಯಿಸುತ್ತಿದ್ದ ಉಬಾರ್ ಕಂಪೆನಿಯ ಕಾರನ್ನು ಅಪರಿಚಿತರು ಶುಕ್ರವಾರ ರಾತ್ರಿ ನಗರದ ಸಾಯಿಬೀನ್ ಕಾಂಪ್ಲೆಕ್ಸ್ ಬಳಿ ಪಡುಬಿದ್ರೆಗೆ ಹೋಗ ಬೇಕೆೆಂದು ಬಾಡಿಗೆ ಗೊತ್ತುಪಡಿಸಿ ಕರೆದೊಯ್ದಿದ್ದರು. ಆದರೆ ದಾರಿ ಮಧ್ಯೆ ಕಾರು ಚಲಾಯಿಸುತ್ತಿದ್ದ ಪ್ರಕಾಶ್ ಅವರ ಮೇಲೆ ದಾಳಿ ನಡೆಸಿದ ಅಪರಿಚಿತರು, ಅವರ ಬಾಯಿಗೆ ಬಟ್ಟೆ ತುರುಕಿ ಕೈಕಾಲುಗಳನ್ನು ಕಟ್ಟಿ ಹೆಬ್ರಿಯ ಬಚ್ಚಪ್ಪುವಿನ ಅರಣ್ಯ ಭಾಗವಾದ ಸಾಂತೊಳ್ಳಿ ಕಾಡಿನಲ್ಲಿ ಎಸೆದು ಕಾರು ಹಾಗೂ 3 ಮೊಬೈಲ್ ಸಮೇತ ಪರಾರಿಯಾಗಿದ್ದರು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ಹುಬ್ಬಳ್ಳಿಯವರು?
ರೋಪಿಗಳು ಹುಬ್ಬಳ್ಳಿ ಕನ್ನಡ ಮಾತನಾಡುತ್ತಿದ್ದರೆಂದು ಪ್ರಕಾಶ್ ಅವರು ನೀಡಿದ ಮಾಹಿತಿ ನೀಡಿದ್ದು, ಹಾಗಾಗಿ ಆರೋಪಿಗಳು ಹುಬ್ಬಳ್ಳಿ ಕಡೆಯವರು ಆಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಕಾರು ಹೆಬ್ರಿಯಿಂದ ಯಾವ ದಾರಿಯಾಗಿ ಸಾಗಿದೆ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ