ತೋಕೂರು: ಕುಡಿಯುವ ನೀರು ನಿರ್ವಹಣೆಗೆ ಹೊಸ ಹೆಸರು


Team Udayavani, Apr 5, 2018, 6:00 AM IST

27.jpg

ತೋಕೂರು: ನಗರ ಬದಿಗಿಡಿ; ಇಂದು ಕರಾವಳಿಯ ಗ್ರಾಮೀಣ ಭಾಗಗಳಲ್ಲಿ ಕೂಡ ಶುದ್ಧ ಕುಡಿಯುವ ನೀರಿನ ಸಮಸ್ಯೆ ಫೆಬ್ರವರಿ ಹೊತ್ತಿಗೆ ಕಂಡುಬರುತ್ತದೆ. ಆದರೆ ಪಡು ಪಣಂಬೂರು ಗ್ರಾ. ಪಂ. ವ್ಯಾಪ್ತಿಯ ತೋಕೂರು ಗ್ರಾಮದಲ್ಲಿ ವಿಶ್ವಬ್ಯಾಂಕ್‌ ಯೋಜನೆಯೊಂದು ಕಳೆದ 20 ವರ್ಷಗಳಿಂದ ಕುಡಿಯುವ ನೀರು ಸರಬರಾಜನ್ನು ಯಾವುದೇ ಸರಕಾರಿ ಸಂಸ್ಥೆಗಳ ನೆರವು ಇಲ್ಲದೆ ಸಮರ್ಥ ಮತ್ತು ಸ್ವತಂತ್ರವಾಗಿ ನಿರ್ವಹಿಸುತ್ತಿರುವುದು ಎದ್ದು ಕಾಣುತ್ತಿದೆ.

ತೋಕೂರು ವಿಶ್ವಬ್ಯಾಂಕ್‌ ಯೋಜನೆ: 1996-97ರಲ್ಲಿ ರಾಷ್ಟ್ರೀಯ ಕೈಗಾರಿಕಾ ವಿಶ್ಲೇಷಣೆಯ ಅನ್ವಯ ಸರ್ವೆ ನಡೆಸಿ ಮುಂದಿನ 20 ವರ್ಷಗಳಿಗೆ ಕುಡಿಯುವ ನೀರು ಪೂರೈಕೆಯ ದೃಷ್ಟಿಯಿಂದ ವಿಶೇಷ ಯೋಜನೆ ರೂಪಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ವಿಶ್ವ ಬ್ಯಾಂಕ್‌ ನೆರವಿನ ಸಮಗ್ರ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಯೋಜನೆ ಜಾರಿಯಾಗಿತ್ತು. ಇದ ಕ್ಕಾಗಿ ಗ್ರಾಮಸ್ಥರ ಪಾಲು ಬಂಡವಾಳದಿಂದ ಮನೆ ಮನೆಗೆ ನೀರು ಸರಬರಾಜು ಎಂಬ ಹೊಸ ಪರಿಕಲ್ಪನೆ ಹುಟ್ಟಿಕೊಂಡಿತ್ತು.

ಇದರ ಆಧಾರದಲ್ಲಿ ಪಡುಪಣಂಬೂರು ಗ್ರಾ.ಪಂ.ನ ತೋಕೂರಿನಲ್ಲಿ ಕ್ಲಸ್ಟರ್‌ 1 ಮತ್ತು ಕ್ಲಸ್ಟರ್‌ 2 ಎಂಬ ಎರಡು ವಿಭಾಗಗಳುಳ್ಳ ತೋಕೂರು ಸಮಿತಿ ರಚಿಸಿ ಗ್ರಾಮಸ್ಥರ 25,000 ರೂ. ಪಾಲು ಬಂಡವಾಳ ಸಹಿತವಾದ 17 ಲಕ್ಷ ರೂ. ವೆಚ್ಚದ ಯೋಜನೆ ರೂಪುಗೊಂಡಿತು. ಎರಡು ಟ್ಯಾಂಕ್‌ಗಳು, ಪೈಪ್‌ಲೈನ್‌, ಪಂಪ್‌ಹೌಸ್‌, ಸರಬರಾಜು ಕೊಳವೆ ಗಳು, ಕೊಳವೆ ಬಾವಿಗಳು ಯೋಜನೆ ಯಲ್ಲಿ ಸೇರಿದ್ದು, ಇದನ್ನು ಸಂಪೂರ್ಣ ವಾಗಿ ಮಣಿಪಾಲ ಎಂಐಟಿಯ ತಾಂತ್ರಿಕ
ಸಲಹೆ ಅನುಸಾರ ಜಾರಿಗೊಳಿಸಲಾ ಯಿತು. ಯೋಜನೆ ನಿರ್ವಹಣೆ, ಲಾಭ, ನಷ್ಟ ಎಲ್ಲವೂ ಸಮಿತಿಯ ಹೊಣೆಗಾರಿಕೆ ಎಂಬ ಶರತ್ತು ವಿಧಿಸಲಾಗಿತ್ತು.

ಪಾರದರ್ಶಕ ನಿರ್ವಹಣೆ
ಯೋಜನೆ ಜಾರಿ ಬಳಿಕ ತೋಕೂರು 1ನೇ ಕ್ಲಸ್ಟರ್‌ ಸಮಿತಿಯು ವ್ಯವಸ್ಥಿತವಾಗಿ ಕಾರ್ಯೋನ್ಮುಖವಾಗಿದೆ. ಪ್ರತೀ ವರ್ಷ ಲೆಕ್ಕ ಪರಿಶೋಧಕರ ಮೂಲಕ ಲೆಕ್ಕ ಪರಿಶೋಧನೆ ನಡೆಸಲಾಗುತ್ತದೆ, ಗ್ರಾಹಕರ ಸಮ್ಮುಖದಲ್ಲಿ ವಾರ್ಷಿಕ ಮಹಾಸಭೆ ನಡೆಸಿ ಸಂಪೂರ್ಣ ವಿಚಾರ ವಿನಿಮಯ ಮಾಡಲಾಗುತ್ತದೆ. ಸಮಿತಿಯನ್ನು ಪುನಾರಚಿಸಿಕೊಂಡು ಎಲ್ಲರಿಗೂ ಸಮಾನವಾಗಿ ಅವಕಾಶ ನೀಡಲಾಗುತ್ತಿದೆ. ಎರಡು ವರ್ಷಗಳಿ ಗೊಮ್ಮೆ ತಪ್ಪದೆ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ನೀರಿನ ಗುಣಮಟ್ಟದ ಪರೀಕ್ಷೆ ನಡೆಸುತ್ತಿದೆ. ತಿಂಗಳಿಗೆ ಅಂದಾಜು 19 ಲಕ್ಷ ಲೀ. ನೀರು ಸರಬರಾಜು ನಡೆಯುತ್ತಿದ್ದು, ಸಮಸ್ಯೆ ಬಂದ ತತ್‌ಕ್ಷಣ ಪರಿಹಾರ ಕಂಡು ಕೊಳ್ಳುವ ಸಾಮರ್ಥ್ಯ ಸಮಿತಿಗೆ ಇದೆ.

ರಾಷ್ಟ್ರ ಮಟ್ಟದಲ್ಲಿ ಮನ್ನಣೆ
ಗ್ರಾಮದ ಯೋಜನಾ ನಿರ್ವಹಣೆ ಇಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಂಡಿದೆ. ಶಿವಮೊಗ್ಗದ ಹೊಂಬುಜ ಮಠದಲ್ಲಿ ನಡೆದ ರಾಜ್ಯ ಮಟ್ಟದ ನೀರು ನಿರ್ವಹಣೆ ಹಾಗೂ ಭವಿಷ್ಯ ತ್ತಿನ ಯೋಚನೆ ಎಂಬ ವಿಚಾರ ಸಂಕಿರಣದಲ್ಲಿ ಗ್ರಾಮದ ಯೋಜನಾನುಷ್ಠಾನ ಗಮನ ಸೆಳೆದಿತ್ತು. ಅನಂತರ ಬೆಂಗಳೂರಿನಲ್ಲಿ 2011ರಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಈ ಬಗ್ಗೆ ವಿಸ್ತಾರವಾಗಿ ತಿಳಿಸಲು ಅವಕಾಶ ನೀಡಲಾಗಿತ್ತು. ಇದರಿಂದ ಆಕರ್ಷಿತರಾದ ವಿಶ್ವಬ್ಯಾಂಕ್‌ ನೆರವಿನ ಏಷ್ಯಾ ಪ್ರಮುಖರಾದ ಕ್ರಿಸ್ಟ್‌ ಅವರು ತೋಕೂರಿಗೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದರು. 

ನೀರಿನ ಒಳ ಹರಿವಿನ ಚಿಂತನೆ
ಯೋಜನೆಯನ್ನು ಭವಿಷ್ಯದಲ್ಲೂ ಭದ್ರವಾಗಿರಿಸಬೇಕು ಎಂಬ ದೂರ ದೃಷ್ಟಿಯಿಂದ ಈಗ ನೀರು ಒದಗಿಸು ತ್ತಿರುವ ಕೊಳವೆ ಬಾವಿಗಳಿಗೆ ಜಲ ಮರುಪೂರಣಗೊಳಿಸಲು ಎರಡು ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಒಂದು ಅಣೆಕಟ್ಟು ಸುಮಾರು 4.5 ಲಕ್ಷ ರೂ. ವೆಚ್ಚದಲ್ಲಿ ನರೇಗಾ ಮೂಲಕ ನಿರ್ಮಾಣವಾದರೆ, ಇನ್ನೊಂದನ್ನು ಸ್ಥಳೀಯವಾಗಿ ಸಮಿತಿಗೆ ಆಸರೆಯಾಗಿರುವ ತೋಕೂರು ಯುವಕ ಸಂಘದ ಸುವರ್ಣ ಮಹೋ ತ್ಸವ ನೆನಪಿಗಾಗಿ ನಿರ್ಮಿಸಲಾಗಿದೆ.

ಪ್ರತೀ ತಿಂಗಳ ನಿರ್ವಹಣೆ
ಗ್ರಾಮದಲ್ಲಿ ನೀರಿನ ಸಂಪರ್ಕ ಬೇಕಾದವರು 2 ಸಾವಿರ ರೂ. ಠೇವಣಿ ಇರಿಸಬೇಕು, ಪ್ರತೀ ತಿಂಗಳು 75 ರೂ. ಶುಲ್ಕ ವಿಧಿಸಿ 15 ಸಾವಿರ ಲೀ. ನೀರು ಒದಗಿಸಲಾಗುತ್ತದೆ. ಹೆಚ್ಚುವರಿ ನೀರು ಬೇಕಾದರೆ ಪ್ರತ್ಯೇಕ ದರವಿದೆ. ನೀರು ಟ್ಯಾಂಕಿಗೆ ತುಂಬಿಸಲು 7.5 ಎಚ್‌.ಪಿ. ಪಂಪ್‌ ಇದೆ. ಸಮಿತಿಗೆ 12 ಸಾವಿರ ರೂ. ಮೆಸ್ಕಾಂ ಬಿಲ್‌, ನಿರ್ವಹಣೆ, ಪಂಪ್‌ ಆಪರೇಟರ್‌ ವೇತನ, ಬಿಲ್‌ ಕಲೆಕ್ಟರ್‌ ವೇತನ ಮತ್ತು ಇತರ ವೆಚ್ಚಗಳು ಸೇರಿ ಪ್ರತೀ ತಿಂಗಳು 18 ಸಾವಿರ ರೂ. ಖರ್ಚಾಗುತ್ತದೆ. ಈಗಿರುವ 175 ಮನೆಗಳ ಸಂಪರ್ಕದಿಂದ ಪ್ರತೀ ತಿಂಗಳು ಸುಮಾರು 23 ಸಾವಿರ ರೂ. ಸಂಗ್ರಹವಾಗುತ್ತಿದೆ. ಸಮಗ್ರ ನಿರ್ವಹಣೆಯನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಳಿಸಲಾಗಿದೆ.

ಪ್ರತಿ ತಿಂಗಳ ನಿರ್ವಹಣೆ
ಗ್ರಾಮದಲ್ಲಿ  ನೀರಿನ ಸಂಪರ್ಕ ಬೇಕಾದವರು 2 ಸಾವಿರ ರೂ. ಠೇವಣಿ ಇರಿಸಬೇಕು. ಪ್ರತಿ ತಿಂಗಳು 75 ರೂ. ಶುಲ್ಕ ವಿಧಿಸಿ 15 ಸಾವಿರ ಲೀ. ನೀರು ಒದಗಿಸಲಾಗುತ್ತದೆ. ಹೆಚ್ಚುವರಿ ನೀರು ಬೇಕಾದರೆ ಪ್ರತ್ಯೇಕ ದರವಿದೆ. ನೀರು ಟ್ಯಾಂಕಿಗೆ ತುಂಬಿಸಲು 7.5 ಎಚ್‌.ಪಿ. ಸಾಮರ್ಥ್ಯದ ಪಂಪ್‌ ಇದೆ. ಸಮಿತಿಗೆ 12 ಸಾವಿರ ರೂ. ಮೆಸ್ಕಾಂ ಬಿಲ್‌, ಪಂಪ್‌ ಆಪರೇಟರ್‌ ವೇತನ, ಇತರ ವೆಚ್ಚಗಳ  ಸಹಿತ ತಿಂಗಳಿಗೆ 18 ಸಾವಿರ ಖರ್ಚಾಗುತ್ತದೆ. ಈಗಿರುವ 175 ಮನೆಗಳ ಸಂಪರ್ಕದಿಂದ ಪ್ರತಿ ತಿಂಗಳು ಸುಮಾರು 23 ಸಾವಿರ ರೂ. ಸಂಗ್ರಹ ವಾಗುತ್ತಿದೆ. ಎಲ್ಲವನ್ನೂ ಕಂಪ್ಯೂಟರೀಕರ ಣಗೊಳಿಸಲಾಗಿದೆ.

ಪಾರದರ್ಶಕತೆಯೇ ನಮ್ಮ ವಿಶ್ವಾಸ
ನೀರು ಪಡೆಯುವ ಗ್ರಾಹಕರ ಬೇಡಿಕೆಗೆ ಸ್ಪಂದಿಸುವುದರಿಂದ ನಮ್ಮ ಸಮಿತಿ ಪಾರದರ್ಶಕತೆಯ ವಿಶ್ವಾಸ ಹೊಂದಿದೆ. ಯೋಜನೆ ಗಳು ಭವಿಷ್ಯದಲ್ಲಿಯೂ ಭದ್ರವಾಗಿ ರಬೇಕಾದರೆ ಪ್ರತಿಯೊಬ್ಬನ ಇಚ್ಛಾ ಶಕ್ತಿ ಮುಖ್ಯ. ಬೇರೆ ಬೇರೆ ಕಡೆಗಳಲ್ಲಿ ಕಾಣುತ್ತಿರುವ ನೀರಿನ ಅಭಾವಕ್ಕೆ ನಾವೇ ಹೊಣೆಗಾರರಾಗಿದ್ದೇವೆ. ಈ ಬಗ್ಗೆ ಸಮಗ್ರ ಚಿಂತನೆ ನಡೆಸುವ ಅಗತ್ಯವಿದೆ.
ಟಿ.ಜಿ. ಭಂಡಾರಿ ಸಮಿತಿಯ ಕೋಶಾಧಿಕಾರಿ

ನರೇಂದ್ರ ಕೆರೆಕಾಡು

ಟಾಪ್ ನ್ಯೂಸ್

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.