ಹೊಸ ಪ್ರಭೇದದ ಕಪ್ಪೆಯ ಅನ್ವೇಷಣೆ
Team Udayavani, May 17, 2018, 7:45 AM IST
ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲಯದ ಸಂಶೋಧಕರು ಹಾಗೂ ATREE (Ashoka trust for research in Ecology and the Environment) ವಿಜ್ಞಾನಿಗಳು ಜತೆಗೂಡಿ ಮಂಗಳೂರು ನಗರದಲ್ಲಿ ಹೊಸ ಕಪ್ಪೆಯ ಅನ್ವೇಷಣೆ (ಡಿಸ್ಕವರಿ) ಮಾಡಿರುತ್ತಾರೆ. ಈ ಹೊಸ ಪ್ರಭೇದದ ಕಪ್ಪೆ ಕರ್ನಾಟಕದ ಕರಾವಳಿ ಮಂಗಳೂರು ನಗರದ ಬೈಕಂಪಾಡಿಯಿಂದ ಅನ್ವೇಷಣೆ ನಡೆದಿದೆ.
ಈ ಕಪ್ಪೆಯು ಸಣ್ಣ- ಬಾಯಿಯ (ಮೈಕ್ರೊಹಿಲಾ)(Microhyla) ಕಪ್ಪೆಗಳ ಜಾತಿ (Genus)ಗೆ ಸೇರಿದ್ದು, ಅನ್ವೇಷಣಾ ತಂಡವು ಇದನ್ನು ಮಂಗಳೂರಿನ ಸಣ್ಣ – ಬಾಯಿಯ ಕಪ್ಪೆ (Mangaluru narrow-mouthed frog ಎಂದು ಹೆಸರಿಟ್ಟಿದೆ. Microhyla kodial (ಮೈಕ್ರೊಹಿಲಾ ಕೊಡಿಯಾಲ್) ಇದರ ವೈಜ್ಞಾನಿಕ ಹೆಸರು, ಕೊಡಿಯಾಲ್ ಎಂದರೆ ಕೊಂಕಣಿ ಭಾಷೆಯಲ್ಲಿ ಮಂಗಳೂರು ಎಂದರ್ಥ. ಮಂಗಳೂರು ನಗರದಲ್ಲಿ ಈ ಪ್ರಬೇಧವು ಪ್ರಥಮ ಭಾರಿ ಕಾಣಸಿಕ್ಕಿದರಿಂದ ಈ ಕಪ್ಪೆಗೆ ಈ ಹೆಸರನ್ನು ಇಡಲಾಗಿದೆ . ಹಾಗೆಯೇ ಮಂಗಳೂರಿನ ಜೀವವೈವಿದ್ಯತೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಿಂದ ಈ ಹೆಸರನ್ನು ಇಡಲಾಗಿದೆ. ಈ ಪ್ರಬೇಧವು ಇತರ ಎಲ್ಲ ಕಪ್ಪೆ ಅನ್ವೇಷಣೆಗಳಿಗೆ ಹೋಲಿಸಿದಲ್ಲಿ ಅತ್ಯಂತ ಗಮನಾರ್ಹವಾಗಿದೆ , ಈ ಪ್ರಬೇಧವು ಕೇವಲ ನಗರ ಪ್ರದೇಶದಿಂದ ದಾಖಲಿಸಲಾಗಿದೆ.
ಈ ಕಪ್ಪೆಯ ಜೆನೆಟಿಕ್ ಅನಾಲಿಸಿಸ್ ಪ್ರಕಾರ ಇದರ ಅತ್ಯಂತ ಹತ್ತಿರದ ಪ್ರಭೇದದ ಕಪ್ಪೆಗಳು ಆಗ್ನೇಯ ಏಷ್ಯದಲ್ಲಿ ಇರುವುದನ್ನು ಅಂದಾಜು ಮಾಡಲಾಗಿದೆ . ಈ ಕಪ್ಪೆ ಆಗ್ನೇಯ ಏಷ್ಯಾದಿಂದ ಇಲ್ಲಿಗೆ ಮರಸಾಗಾಣಿಕೆಯ ಮೂಲಕ ಮಂಗಳೂರಿನ ಬಂದರಿನ ಮೂಲಕ ಪ್ರವೇಶಿಸಿರಬಹುದು ಎಂದು ಸಂಶೋಧನಾ ತಂಡ ಊಹಿಸು ತ್ತದೆ. ಹಲವು ವರ್ಷಗಳಿಂದ ಈ ಜಾಗದಲ್ಲೇ ಮರದ ರಾಶಿ ಹಾಕಲಾಗುತ್ತಿತ್ತು. ಆದರೂ, ಇದಕ್ಕೆ ಖಚಿತ ಉತ್ತರ ನೀಡಲು ಇನ್ನಷ್ಟು ಸಂಶೋಧನೆ ನಡೆಯಬೇಕಿದೆ.
ಮಂಗಳೂರು ವಿವಿಯ ಅನ್ವಯಿಕ ಪ್ರಾಣಿ ಶಾಸ್ತ್ರ
ವಿಭಾಗದ ವಿನೀತ್ ಕುಮಾರ್, ರಾಧಾಕೃಷ್ಣ ಉಪಾಧ್ಯಾಯ ಹಾಗೂ ಪ್ರೊ| ರಾಜಶೇಖರ್ ಪಾಟೀಲ್ ಅವರು ಅತ್ರೀ ಪರಿಸರ ವಿಜ್ಞಾನ ಸಂಸ್ಥೆಯ ಡಾ| ಅರವಿಂದ ಮಧ್ಯಸ್ಥ ಮತ್ತು ಸಂಶೋದನಾ ವಿದ್ಯಾರ್ಥಿ ಅನ್ವೇಷಾ ಸಾಹ ಹಾಗೂ
ಮಂಗಳೂರಿನ ಅಲೋಸಿಯಸ್ ಪಿಯು ಕಾಲೇಜಿನ ಗೋಡ್ವಿನ್ ಡಿ’ಸೋಜಾರನ್ನು ತಂಡ ಒಳಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
Pilikula: “ಫ್ಯಾನ್-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!
Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ
Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ
Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ