ಸೌರಭ್ನ ಸೆಕೆಂಡ್ ಎಂಟ್ರಿ!
Team Udayavani, May 17, 2018, 4:18 PM IST
ಅಂಬರ ಕ್ಯಾಟರರ್ ಮೂಲಕ ಕೋಸ್ಟಲ್ವುಡ್ನಲ್ಲಿ ಸಾಕಷ್ಟು ಸದ್ದು ಮಾಡಿದ ಸೌರಭ್ ಭಂಡಾರಿ ಈಗ ಇನ್ನೊಂದು ತುಳು ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉದ್ಯಮಿ ಸುರೇಶ್ ಭಂಡಾರಿ ನಿರ್ಮಾಣದಲ್ಲಿಯೇ ಇನ್ನೊಂದು ಸಿನೆಮಾ ಸೆಟ್ಟೇರಲಿದೆ. ಹರೀಶ್ ಕೊಟ್ಪಾಡಿ ಚಿತ್ರ ಕಥೆ- ಸಂಕಲನ ಮಾಡುವ ನೂತನ ಸಿನೆಮಾವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎಂಬುದು ಇನ್ನೂ ಪಕ್ಕಾ ಆಗಿಲ್ಲ. ಆದರೆ, ಶೀಘ್ರದಲ್ಲಿ ಚಿತ್ರದ ಫಸ್ಟ್ಲುಕ್ ರಿಲೀಸ್ ಆಗುವ ಸಾಧ್ಯತೆ ಇದೆ. ತುಳುವಿನ ಪ್ರಮುಖ ಸ್ಟಾರ್ಗಳು ಕೂಡ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಎಂಬಿಎ ಮುಗಿಸಿ ಸ್ವಂತ ಉದ್ಯಮ ನಡೆಸುತ್ತಿರುವ ಸೌರಭ್ಗೆ ಕ್ರಿಯೇಟಿವ್ ಕೆಲಸಗಳಲ್ಲಿ ಹೆಚ್ಚು ಆಸಕ್ತಿ. ಮಗನ ಕನಸಿಗೆ ಬೆಂಗಾವಲಾಗಿ ನಿಂತು ಚಿತ್ರ ನಿರ್ಮಾಣದ ಹೊಣೆ ಹೊತ್ತ ತಂದೆ ಸುರೇಶ್ ಭಂಡಾರಿ ಪ್ರೋತ್ಸಾಹದಿಂದ ಸೌರಭ್ ನಾಯಕನಾಗಿ ನಟಿಸುತ್ತಿದ್ದು, ತನ್ನ ಎರಡನೇ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ