ಇಡ್ಯಾದಲ್ಲಿ ತೋಡುಗಳ ಪುನರುಜ್ಜೀವನ ಅಗತ್ಯ


Team Udayavani, Jun 7, 2018, 12:48 PM IST

7-june-5.jpg

ಸುರತ್ಕಲ್‌ : ಇಡ್ಯಾ ಗ್ರಾಮದಲ್ಲಿ (ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪೂರ್ವದಿಕ್ಕಿನಲ್ಲಿ) ಅನಾದಿಯಿಂದಲೂ ಮಳೆನೀರು ಹರಿದು ಹೋಗಲು ಉತ್ತಮ ರೀತಿಯ ಪ್ರಕೃತಿ ನಿರ್ಮಿತ ತೋಡುಗ ಳಲ್ಲಿ ಹೂಳು ತುಂಬಿ ತನ್ನ ಮೂಲ ಸ್ವರೂಪ ಕಳೆದುಕೊಂಡಿದ್ದು, ಸುರಿಯುವ ಸಾಮಾನ್ಯ ಮಳೆಗೂ ಕೃತಕ ನೆರೆ ಉದ್ಭವಿಸಲು ಕಾರಣವಾಗುತ್ತಿದೆ.

ಈ ಹಿಂದೆ ಎತ್ತರದ ಪ್ರದೇಶದಿಂದ ಸಮುದ್ರ ಸೇರುತ್ತಿದ್ದ ಮಳೆ ನೀರು ಇದೀಗ ಅಡೆ ತಡೆಗಳಿಂದ ಹರಿದು ಹೋಗದೆ ನೆರೆ ಪರಿಸ್ಥಿತಿ ಉಂಟಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಪೂರ್ವ ದಿಕ್ಕಿನ ಬೃಹತ್‌ ಪ್ರಮಾಣದ ಮಳೆನೀರು ಕೂಡ ಈ ತೋಡುಗಳಲ್ಲೇ ಹರಿದು ಹೋಗುತ್ತಿದ್ದು, ಈಗಲೂ ಈ ವ್ಯವಸ್ಥೆ
ಮುಂದುವರಿದಿದೆ. ಈ ಎಲ್ಲ ನೀರು ಹಲವು ತೋಡುಗಳ ನೆಟ್‌ವರ್ಕ್‌ ಮೂಲಕ ಒಟ್ಟು ಸೇರಿ ಮುಂದೆ ಸಾಗಿದಂತೆ ತೋಡುಗಳು ಕೂಡ ಅಗಲವಾಗುತ್ತಾ ಸಮುದ್ರವನ್ನು ಸೇರುತ್ತಿದ್ದುವು. ಯಾವುದೇ ರೀತಿಯ ಕೃತಕ ನೆರೆಗಳೂ ಆಗ ಇರುತ್ತಿರಲಿಲ್ಲ.

ಅಗಲ ಕಿರಿದಾದ ಚರಂಡಿ
ಇದೀಗ ಈ ಎಲ್ಲ ಚರಂಡಿಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಅಗಲ ಕಿರಿದಾಗಿವೆ. ಮೊದಲು ಇಲ್ಲಿನ ರೈತಾಪಿ ಜನರು ತೋಡುಗಳನ್ನು ಸುಸ್ಥಿತಿಯಲ್ಲಿ ಇಡುತ್ತಿದ್ದರು. ಆದರೆ ಈಗ ಗದ್ದೆಗಳೆಲ್ಲ ಮನೆ ನಿವೇಶನಗಳಾಗಿ ಪರಿವರ್ತಿತವಾದ ಕಾರಣ ಅವುಗಳ ನಿರ್ವಹಣೆ ಮಾಡುವ ರೈತರೂ ಇಲ್ಲ ವಾಗಿದ್ದಾರೆ. ಜತೆಗೆ ಆ ತೋಡುಗಳು ಹೂಳಿನಿಂದ ತುಂಬಿವೆ. ಕೆಲವೆಡೆ ಒತ್ತುವರಿಗೊಂಡು ಅಗಲಕಿರಿದಾಗಿವೆ. ಅದರಿಂದಾಗಿ ಸಣ್ಣ ಸಣ್ಣ ಮಳೆಗಳೂ ಕೃತಕ ನೆರೆಯನ್ನು ಉಂಟುಮಾಡುವ ಪರಿಸ್ಥಿತಿ ಬಂದಿದೆ.

ಪುನರುಜ್ಜೀವನಗೊಳಿಸಿ
ನಗರದ ನರನಾಡಿಗಳಂತಿರುವ ಈ ಪ್ರಾಕೃತಿಕ ತೋಡುಗಳ ಸರಮಾಲೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಅಗಲಗೊಳಿಸುವುದು ಅವಶ್ಯವಾಗಿದೆ. ಇಲ್ಲವಾದಲ್ಲಿ ಕೆಲವು ಕಡೆ ಚರಂಡಿಗಳೇ ಮಾಯವಾಗುವ ಪರಿಸ್ಥಿತಿ ಇದೆ. ಈ ಕಾರ್ಯವನ್ನು ಮನಪಾ ಮತ್ತು ಒಳಚರಂಡಿ ಮಂಡಳಿ ಆದ್ಯತೆಯ ನೆಲೆಯಲ್ಲಿ ಮಾಡುವ ಆವಶ್ಯಕತೆ ಇದೆ.

ಕಾಮಗಾರಿ ಪ್ರಗತಿಯಲ್ಲಿ
ಈಗಾಗಲೇ ಮಳೆ ನೀರು ಹರಿದು ಹೋಗಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಹೂಳು ತುಂಬಿದ ತೋಡುಗಳನ್ನು ಸರಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ.
 - ಖಾದರ್‌,
ಜೆ.ಇ., ಸುರತ್ಕಲ್‌, ಮನಪಾ

ಸೂಕ್ತ ಕ್ರಮ ಕೈಗೊಳ್ಳಿ
ಸುರತ್ಕಲ್‌ ಪ್ರದೇಶದಲ್ಲಿ ನೆರೆ ಅಪರೂಪವಾಗಿತ್ತು.ಆದರೆ ಇದೀಗ ಚರಂಡಿ, ತೋಡುಗಳು ಒತ್ತುವರಿಯಾಗಿ ಅಗಲ ಕಿರಿದಾದ ಕಾರಣ ಕೃತಕ ನೆರೆ ಉಂಟಾಗುತ್ತಿದೆ. ಪಾಲಿಕೆ ಸೂಕ್ತ ಕ್ರಮ ಕೈಗೊಂಡಲ್ಲಿ ಈ ಅನಾಹುತ ತಪ್ಪಿಸಬಹುದು.
  - ಪ್ರೊ| ರಾಜ್‌ಮೋಹನ್‌  ರಾವ್‌,
     ಸುರತ್ಕಲ್‌

ಟಾಪ್ ನ್ಯೂಸ್

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.