ದಾರಿ ಕಾಣದಾದ ನಾಯಿ ಈಗ ಮೂರು ಮನೆಗೆ ಅತಿಥಿ !


Team Udayavani, Jun 14, 2018, 6:00 AM IST

m-33.jpg

ಮಂಗಳೂರು: ಈ ನಾಯಿಯ ಚಿತ್ರವನ್ನು ಮೊಬೈಲ್‌ನಲ್ಲಿ ನೋಡಿರಬಹುದು. ಏಕೆಂದರೆ “ಮನೆಯಿಂದ ಕಾಣೆಯಾದ ಈ ನಾಯಿಯ ಯಜಮಾನರು ಎಲ್ಲಿಯಾದರೂ ಇದ್ದರೆ ಸಂಪರ್ಕಿಸಿ’ ಎಂಬ ಮೆಸೇಜ್‌ ವಾಟ್ಸಾಪ್‌/ಫೇಸ್‌ಬುಕ್‌ನಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಸದ್ಯಕ್ಕೆ ನಾಯಿ ಮೂರನೇ ಮನೆ ಸೇರಿದೆ. 

ಮೇ 29ಕ್ಕೆ ನಗರದಲ್ಲಿ ಭಾರೀ ಮಳೆ ಸುರಿದಾಗ ಯಾವುದೋ ಮನೆಯಿಂದ ನಾಯಿಯೊಂದು ದಾರಿ ಕಾಣದೆ ಮಲ್ಲಿಕಟ್ಟೆ ವ್ಯಾಪ್ತಿಯಲ್ಲಿ ಸುತ್ತಾಡುತ್ತಿತ್ತು. ಸಾಕು ನಾಯಿಯಂತೆ ಗೋಚರಿಸುತ್ತಿದ್ದ ಅದು ಅಂತಿಮವಾಗಿ ಸಾಯಿರಾಧಾ ವಾಹನ ಶೋರೂಂ ಪಕ್ಕದ ಅಂಗಡಿ/ಮನೆಯ ಬಳಿ ಕುಳಿತಿತ್ತು. ಒಂದೆರಡು ದಿನ ಸ್ಥಳೀಯರು ಆ ನಾಯಿಗೆ ಆಹಾರ ನೀಡಿ ಉಪಚರಿಸಿದರು. ಮರುದಿನ ನಾಯಿ ಶೋರೂಂ ಬಳಿ ಸ್ಥಳಾಂತರಗೊಂಡಿತು. ಕಾವಲುಗಾರ ಆಹಾರ ನೀಡಿದ ಮೇಲೆ ನಾಯಿ ಅಲ್ಲಿಂದ ಕದಲಲಿಲ್ಲ. ಸಂಸ್ಥೆಯ ಸಿಬಂದಿಯೂ  ತಿಂಡಿ ನೀಡಿದರು. ಹೀಗೇ ಒಂದು ವಾರ ಕಳೆಯಿತು.

ವಾಟ್ಸಾಪ್‌ ಮೆಸೇಜ್‌
ನಾಯಿಯ ಅಸಹಾಯಕತೆ ಕಂಡ ಶೋರೂಂ ಸಿಬಂದಿ “ನಾಯಿ ಒಂದು ಬಂದಿದೆ. ಮನೆಯವರ ಹುಡುಕಾಟದಲ್ಲಿದೆ’ ಎಂಬ ಸಚಿತ್ರ ಸಂದೇಶವನ್ನು ವಾಟ್ಸಾಪ್‌ನಲ್ಲಿ ರವಾನಿಸಿದರು. ಆ ಮೆಸೇಜ್‌ ಬೇರೆ ಬೇರೆ ಗ್ರೂಪ್‌ಗ್ಳಲ್ಲಿ ಹರಿದಾಡಿತು. ಮರುದಿನ ಬೆಳಗ್ಗೆ ಹಲವು ಶ್ವಾನಪ್ರಿಯರು ಬಂದು ನಾಯಿ ಬಗ್ಗೆ ವಿಚಾರಿಸಿದರು. 10-15 ಮಂದಿ ಶೋರೂಂಗೆ ಬಂದು ನಾಯಿಯನ್ನು ವೀಕ್ಷಿಸಿದರು. ಅದರಲ್ಲಿ ಮಲ್ಲಿಕಟ್ಟೆಯ ಲೋಬೋ ಲೈನ್‌ ನಿವಾಸಿಯೊಬ್ಬರು, “ನಾಯಿಯನ್ನು ರಸ್ತೆ ಬದಿ ಬಿಡುವ ಬದಲು ಸಾಕುತ್ತೇನೆ’ ಎಂದು ಮನೆಗೆ ಕರೆದುಕೊಂಡು ಹೋದರು. 

ಸಂಜೆಯಾಗುವಷ್ಟರಲ್ಲಿ ಓರ್ವರು ಲೋಬೋ ಲೈನ್‌ ನಿವಾಸಿಗೆ ಕರೆ ಮಾಡಿ, “ನಾಯಿಗೆ ಒಂದೆರಡು ದಿನ ನಾವೂ ಊಟ ನೀಡಿದ್ದೇವೆ. ನಾವೇ ನಾಯಿಯನ್ನು ಸಾಕುತ್ತೇವೆ’ ಎಂದು ಕರೆದೊಯ್ದರು. ಅಲ್ಲಿಗೆ ನಾಯಿ ಮತ್ತೂಂದು ಮನೆಗೆ ರವಾನೆಯಾಯಿತು.

ಕಥೆ ಇಲ್ಲಿಗೇ ಮುಗಿಯಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಈ ವಿಷಯ ಹರಿದಾಡಿದ್ದನ್ನು ಗಮನಿಸಿದ ಪಂಪ್‌ವೆಲ್‌ ಸಮೀಪದ ಮನೆಯವರು “ನಾಯಿ ನಮ್ಮದು’ ಎಂದು ಕರೆದೊಯ್ದಿದ್ದಾರೆ. ಇದರರ್ಥ, ಮೂರನೇ ಯಜಮಾನನ ಮನೆಗೆ. ಆದರಿನ್ನೂ ನಿಜವಾದ ಯಜಮಾನ ಯಾರೆಂಬುದು ಖಚಿತವಾಗಬೇಕಿದೆ.

ಟಾಪ್ ನ್ಯೂಸ್

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

3

Bengaluru: ಕಾರು ಹರಿದು ಒಂದೂವರೆ ವರ್ಷದ ಮಗು ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.