ಜ್ಞಾನವರ್ಧನೆಗೆ ವಾರಕಾಲ ಏಳು ಪುಸ್ತಕಗಳ ಖೋ


Team Udayavani, Jun 17, 2018, 6:00 AM IST

q-29.jpg

ಮಂಗಳೂರು: ಸದಾ ಕಚ್ಚಾಡುತ್ತಾ, ಅವರಿವರಿಗೆ ಬೈಯುತ್ತಾ ಕಾಲಹರಣ ಮಾಡುವ ಪೋಸ್ಟ್‌ಗಳೇ ಕಾಣಸಿಗುವ ಫೇಸ್ಬುಕ್‌ನಲ್ಲಿ ಕಳೆದೈದು ದಿನಗಳಿಂದ ಪುಸ್ತಕ ಚಾಲೆಂಜ್‌ ಟ್ರೆಂಡ್‌ ಶುರುವಾಗಿದೆ. “ಏಳು ದಿನ ಏಳು ಪುಸ್ತಕ’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ತಾವು ಓದಿದ ಏಳು ನೆಚ್ಚಿನ ಪುಸ್ತಕಗಳ ಮುಖಪುಟವನ್ನು ಸಪ್ತಾಹ ಮಾದರಿಯಲ್ಲಿ ಏಳು ದಿನಗಳ ಕಾಲ ಫೇಸುºಕ್‌ನಲ್ಲಿ ಪ್ರಕಟಿಸಿ ಇತರರಿಗೆ ಖೋ ಕೊಡುವ ಹೊಸ ಆಟವಿದು.

ವಿಶೇಷವೆಂದರೆ ಈ ಖೋ ಆಟದಲ್ಲಿ ಸಾಹಿತಿಗಳು, ಅಂಕಣಕಾರರೂ ಭಾಗವಹಿಸಿ ಯುವಕರಲ್ಲಿ ಪುಸ್ತಕ ಪ್ರೇಮ ಬೆಳೆಸಲು ಕಾರಣರಾಗುತ್ತಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ಕೇಂದ್ರ ಸಚಿವ ರಾಜ್ಯವರ್ಧನ್‌ ಸಿಂಗ್‌ “ಹಂ ಫಿಟ್‌ ತೋ ಇಂಡಿಯಾ ಫಿಟ್‌’ ಎನ್ನುವ ಒಕ್ಕಣೆಯೊಂದಿಗೆ ಸಾಮಾಜಿಕ ತಾಣದಲ್ಲಿ ಫಿಟ್ನೆಸ್‌ ಚಾಲೆಂಜ್‌ ಶುರು ಮಾಡಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟಿಗ ವಿರಾಟ್‌ ಕೊಹ್ಲಿ ಕೂಡ ಪರಸ್ಪರ ಖೋ ನೀಡಿ ತಾವು ಮಾಡಿದ ಯೋಗ, ವ್ಯಾಯಾಮದ ವೀಡಿಯೋವನ್ನು ಪ್ರಕಟಿಸಿದ್ದರು. ಈ ಹೊಸ ಟ್ರೆಂಡ್‌ನಿಂದ ಆಸಕ್ತರಾದ ಹಲವರು ಫೇಸ್ಬುಕ್‌ನಲ್ಲಿ ಪುಸ್ತಕ ಓದುವ ಚಾಲೆಂಜ್‌ ಹಮ್ಮಿಕೊಳ್ಳುತ್ತಿದ್ದಾರೆ. ದೈಹಿಕ ದೃಢತೆಯೊಂದಿಗೆ ಜ್ಞಾನ ಸಂಪನ್ನರಾಗುವುದು ಕೂಡ ಅಗತ್ಯ ಎನ್ನುವ ಉದ್ದೇಶದಿಂದ ಈ ಸವಾಲನ್ನು ಆರಂಭಿಸಲಾಗಿದೆ. ಆದರೆ ಇದನ್ನು ಯಾರು ಶುರು ಮಾಡಿದರು ಎಂಬುದು ತಿಳಿದಿಲ್ಲ.

ಸಾಹಿತಿಗಳು, ಬರಹಗಾರರು
ಇದರಲ್ಲಿ ಸಾಹಿತಿಗಳು, ಅಂಕಣಕಾರರು ಮತ್ತು ಹವ್ಯಾಸಿ ಬರಹಗಾರರೇ ಹೆಚ್ಚು ಪಾಲ್ಗೊಳ್ಳುತ್ತಿದ್ದಾರೆ. ಫೇಸುºಕ್‌ ಪುಸ್ತಕ ಪ್ರೇಮದತ್ತ ಕೊಂಡೊಯ್ಯುತ್ತಿರುವುದು ಬರಹಗಾರರಲ್ಲಿ, ಪುಸ್ತಕ ಪ್ರೇಮಿಗಳಲ್ಲಿ ಹೊಸ ಆಸಕ್ತಿ ಮೂಡಿಸಿದೆ. ದಿನಕ್ಕೊಂದು ಪುಸ್ತಕ ಓದಿ ಅಥವಾ ಈ ಹಿಂದೆ ಓದಿದ ಮೆಚ್ಚಿನ ಪುಸ್ತಕದ ಮುಖಪುಟವನ್ನು ಫೇಸ್ಬುಕ್‌ ವಾಲ್‌ನಲ್ಲಿ ಛಾಪಿಸುವುದು, ಪುಸ್ತಕದ ಬಗ್ಗೆ ಒಂದಷ್ಟು ಬರೆಯುವುದು,  ಚಾಲೆಂಜ್‌ನ್ನು ಇತರರಿಗೆ ದಾಟಿಸುವುದು ಈ ಖೋ ಆಟದ ಹೂರಣ. ಸಾಮಾಜಿಕ ತಾಣಗಳಿಂದಾಗಿ ಓದುವ ಹವ್ಯಾಸ ಕಡಿಮೆಯಾಗಿದ್ದ ಯುವಕರಲ್ಲಿ ಮತ್ತೆ ಆ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಪುಸ್ತಕ ಚಾಲೆಂಜ್‌ ಮಹತ್ವದ್ದಾಗಿದೆ.

ಯೋಗ, ವ್ಯಾಯಾಮಕ್ಕೂ ಚಾಲೆಂಜ್‌!
ಸೆಲೆಬ್ರಿಟಿ ವರ್ಗದಲ್ಲಿ ಮಾತ್ರ ವ್ಯಾಪಕವಾಗಿದ್ದ ಫಿಟೆ°ಸ್‌ ಚಾಲೆಂಜ್‌ಗೆ ಜನಸಾಮಾನ್ಯನೂ ತೆರೆದುಕೊಳ್ಳುತ್ತಿದ್ದಾನೆ. ಪರಸ್ಪರ ಚಾಲೆಂಜ್‌ ಹಾಕಿ ತಾವು ಮಾಡಿದ ವ್ಯಾಯಾಮ, ಯೋಗ, ಸೂರ್ಯ ನಮಸ್ಕಾರ ಇತ್ಯಾದಿ ವೀಡಿಯೋವನ್ನು ಫೇಸ್ಬುಕ್‌ನಲ್ಲಿ ಪ್ರಕಟಿಸಿ, ಸವಾಲನ್ನು ಇತರರಿಗೆ ದಾಟಿಸುವ ಕ್ರೇಜ್‌ ಶುರುವಾಗಿದೆ. ಓದುವಿಕೆಯ ಚಾಲೆಂಜ್‌ ಟ್ರೆಂಡ್‌ ಮಾದರಿಯಲ್ಲಿ ಕೆಲವು ಸಿನೆಮಾ ಪ್ರಿಯರು ದಿನಕ್ಕೊಂದು ಸಿನೆಮಾದ ಬಗ್ಗೆ ಪ್ರಕಟಿಸುವ ಖೋ ಆಟವನ್ನು ಶುರು ಮಾಡಿಕೊಂಡಿದ್ದಾರೆ.

ದೈಹಿಕ ದೃಢತೆ ಜತೆ ಮಾನಸಿಕ ದೃಢತೆ
ಕೇಂದ್ರ ಸಚಿವರು ಫಿಟ್ನೆಸ್‌ ಚಾಲೆಂಜ್‌ದೇಶದ ಜನತೆಯ ಮುಂದಿಟ್ಟಿದ್ದಾರೆ. ಅದನ್ನು ಸ್ವೀಕರಿಸುವುದರೊಂದಿಗೆ ಮಾನಸಿಕ ದೃಢತೆ ಕಾಯ್ದುಕೊಳ್ಳುವುದೂ ಅಗತ್ಯ. ಅದು ನಮ್ಮದಾಗಬೇಕಾದರೆ ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ಮಾನಸಿಕ ದುಗುಡ, ಯಾತನೆಗಳೆಲ್ಲ ದೂರವಾಗಿ ನಿರುಮ್ಮಳರಾಗುತ್ತೇವೆ ಜ್ಞಾನವರ್ಧನೆಯಾಗ ಬೇಕಾದರೆ ಪುಸ್ತಕ ಓದಲೇಬೇಕು. ಈ ನಿಟ್ಟಿನಲ್ಲಿ ಪುಸ್ತಕ ಚಾಲೆಂಜ್‌ ಪೂರಕ. ಯಾವುದರಿಂದ ಪುಸ್ತಕ ಓದುವಿಕೆ ಕಡಿಮೆಯಾಗಿದೆ ಎನ್ನುವ ಅಸಮಾಧಾನ ಗಳಿದ್ದವೋ, ಅದೇ ಸಾಮಾಜಿಕ ತಾಣ ಪುಸ್ತಕ ಓದುವಿಕೆಗೆ ಪ್ರೇರೇಪಿಸುತ್ತಿರುವುದು ಖುಷಿಯ ವಿಚಾರ ಎನ್ನುತ್ತಾರೆ ಪುಸ್ತಕ ಚಾಲೆಂಜ್‌ ಸ್ವೀಕರಿಸಿದ ಹವ್ಯಾಸಿ ಬರಹಗಾರ ಶಿವಪ್ರಸಾದ್‌ ಸುರ್ಯ.

ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.