ಮೂರು ತಿಂಗಳೊಳಗೆ ವಿವಿಗೆ ನೂತನ ಕುಲಪತಿ


Team Udayavani, Jun 23, 2018, 9:46 AM IST

uv.jpg

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ನೂತನ ಕುಲಪತಿ ನೇಮಕ ಸಂಬಂಧ ಒಂದು ತಿಂಗಳೊಳಗೆ “ಶೋಧನಾ ಸಮಿತಿ (ಸರ್ಚ್‌ ಕಮಿಟಿ)’ ರಚನೆಯಾಗುವ ನಿರೀಕ್ಷೆಯಿದೆ. ಎಲ್ಲವೂ ಸುಸೂತ್ರವಾಗಿ ನಡೆದರೆ 3 ತಿಂಗಳೊಳಗೆ ಹೊಸ ಕುಲಪತಿ ಅಧಿಕಾರ ಸ್ವೀಕರಿಸುವರು.

ಇದರ ಬೆನ್ನಲ್ಲೇ ರಾಜ್ಯದ ಪ್ರತಿಷ್ಠಿತ ವಿ.ವಿ.ಗಳಲ್ಲಿ ಒಂದಾದ ಮಂಗಳೂರು ವಿ.ವಿ. ಕುಲಪತಿ ಸ್ಥಾನಕ್ಕೆ ಬೇಡಿಕೆ ಹೆಚ್ಚಿದೆ. ಕುಲಪತಿಯಾಗಿದ್ದ ಪ್ರೊ| ಕೆ. ಭೈರಪ್ಪ ಎರಡು ವಾರಗಳ ಹಿಂದಷ್ಟೇ ನಿವೃತ್ತಿ ಹೊಂದಿದ್ದರು. ಈಗ ಪ್ರಭಾರ ಕುಲಪತಿಯಾಗಿ ಡಾ| ಕಿಶೋರ್‌ ಕುಮಾರ್‌ ಸಿ.ಕೆ. ನೇಮಕಗೊಂಡಿದ್ದಾರೆ. 

ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ, ಶೋಧನಾ ಸಮಿತಿಗೆ ಈಗಾಗಲೇ ಸಿಂಡಿಕೇಟ್‌, ಯುಜಿಸಿ ಹಾಗೂ ರಾಜ್ಯಪಾಲರ ನಾಮ ನಿರ್ದೇಶನ ಸದಸ್ಯರ ಆಯ್ಕೆ ಮುಗಿದಿದೆ. ಸರಕಾರಿ ನಾಮ ನಿರ್ದೇಶನ ಸದಸ್ಯರೊಬ್ಬರು ನೇಮಕವಾಗಬೇಕಿದೆ. ಸಂಬಂಧಿಸಿದ ಕಡತವನ್ನು ಸರಕಾರಕ್ಕೆ ನೀಡಲಾಗಿದ್ದು, ತಿಂಗಳೊಳಗೆ ಸಮಿತಿ ಸ್ಥಾಪಿಸುವ ಸಾಧ್ಯತೆ ಇದೆ.

ಹಿರಿಯ ಪ್ರಾಧ್ಯಾಪಕರಾದ ಪ್ರೊ| ರಾಮೇಗೌಡ ಹಾಗೂ ಪ್ರೊ| ನಾಗ ಭೂಷಣ್‌ ಅವರ ಹೆಸರನ್ನು ವಿ.ವಿ.ಯ ಸಿಂಡಿಕೇಟ್‌ ಕಳುಹಿಸಿದ್ದು, ಒಂದು ಹೆಸರು ಅಂತಿಮಗೊಳ್ಳಲಿದೆ. ಸಮಿತಿ ರಚನೆಯಾದ ಬಳಿಕ ಉನ್ನತ ಶಿಕ್ಷಣ ಇಲಾಖೆಯು ಕುಲಪತಿ ಹುದ್ದೆಗೆ ನೋಟಿಫಿಕೇಶನ್‌ ಹೊರಡಿಸಲಿದೆ. ಇಲಾಖೆಯ ಮೂಲಗಳ ಪ್ರಕಾರ ಅರ್ಹ ಪ್ರಾಧ್ಯಾಪಕರಿಗೆ 15 ದಿನಗಳ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆದರೆ ಸಪ್ಟೆಂಬರ್‌ ವೇಳೆಗೆ ಹೊಸ ಕುಲಪತಿ ನೇಮಕವಾಗುವರು.  ಆದರೆ ಆಕಾಂಕ್ಷಿಗಳಿಂದ ಲಾಬಿ ಹೆಚ್ಚಿದರೆ ವಿಳಂಬವಾಗಲಿದೆ. ಮೈಸೂರು ವಿ.ವಿ. ಕುಲಪತಿ ನೇಮಕ ಸುಮಾರು ಒಂದೂವರೆ ವರ್ಷದಿಂದ ಬಾಕಿ ಇದೆ.

ಏನಿದು ಶೋಧನಾ ಸಮಿತಿ?
ವಿ.ವಿ.ಗಳ ಕುಲಪತಿ ಹುದ್ದೆ ಖಾಲಿಯಾದಾಗ ವಿವಿಯ ಹಿರಿಯ ಡೀನ್‌ ಪ್ರಭಾರ ಕುಲಪತಿಯಾಗಿ ನೇಮಕವಾಗುತ್ತಾರೆ. ಬಳಿಕ ಶೋಧನಾ ಸಮಿತಿ ರಚನೆಯಾಗಲಿದ್ದು, ಸಿಂಡಿಕೇಟ್‌, ರಾಜ್ಯಪಾಲರು, ಸರಕಾರಿ ಹಾಗೂ ಯುಜಿಸಿ ತನ್ನ ಪ್ರತಿನಿಧಿಗಳನ್ನು ಕಳುಹಿಸುತ್ತದೆ. ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ಒಬ್ಬ ಸದಸ್ಯನನ್ನು ಚೇರ್‌ಮನ್‌ ಆಗಿ ಆಯ್ಕೆ ಮಾಡಲಾಗುವುದು. ಅವರು ಅರ್ಹ ಪ್ರಾಧ್ಯಾಪಕರಿಂದ ಅರ್ಜಿ ಆಹ್ವಾನಿಸಿ, ಮೂರು ಹೆಸರುಗಳನ್ನು ಸರಕಾರಕ್ಕೆ ನೀಡುತ್ತಾರೆ. ಸರಕಾರ ರಾಜ್ಯಪಾಲರ ಒಪ್ಪಿಗೆ ಪಡೆದು, ಕುಲಪತಿಗಳನ್ನು  ನೇಮಿಸಲಾಗುತ್ತದೆ.

ಮೈಸೂರು ಲಾಬಿ
ಇಲ್ಲಿವರೆಗಿನ ಇತಿಹಾಸ ನೋಡಿದರೆ, ಮಂಗಳೂರು ವಿ.ವಿ.ಯ ಕುಲಪತಿ ಹುದ್ದೆಗೆ ಹೆಚ್ಚಾಗಿ ಮೈಸೂರು ವಿ.ವಿ. ಪ್ರಾಧ್ಯಾಪಕರನ್ನೇ ನೆಮಿಸಲಾಗಿದೆ. ಈ ತನಕ ಮಂಗಳೂರು ವಿ.ವಿ.ಯಲ್ಲಿ ಎಂಟು ಮಂದಿ ಕುಲಪತಿಗಳಾಗಿದ್ದು, ಇಬ್ಬರನ್ನು ಬಿಟ್ಟರೆ ಉಳಿದವರೆಲ್ಲರೂ ಮೈಸೂರು ವಿವಿಯವರು. ನಿರ್ಗಮಿತ ಕುಲಪತಿ ಭೈರಪ್ಪ ಕೂಡ ಮೈಸೂರು ವಿ.ವಿ. ಪ್ರಾಧ್ಯಾಪಕರು.

“ಕೊಡಗು ಜಿಲ್ಲೆಯ ಡಾ| ಕಾವೇರಪ್ಪ ಹಿಂದೆ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದು, ದ.ಕ. ಅಥವಾ ಉಡುಪಿ ಮೂಲದ ಯಾರೊಬ್ಬರೂ ಇಲ್ಲಿವರೆಗೆ ಮಂಗಳೂರು ವಿ.ವಿ.ಗೆ ಕುಲಪತಿಗಳಾಗಿಲ್ಲ. ಈ ಬಾರಿ ಅವಿಭಜಿತ ದ.ಕ. ಜಿಲ್ಲೆಯವರಿಗೆ ಆದ್ಯತೆ ನೀಡುವಂತೆ ಒತ್ತಡ ಹೇರಿದ್ದೇವೆ’ ಎಂದು ಸಿಂಡಿಕೇಟ್‌ ಸದಸ್ಯರೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.