ಜುಲೈ 7 ವಿಶ್ವ ಚಾಕ್ಲೇಟ್‌ ದಿನಾಚರಣೆ


Team Udayavani, Jul 8, 2018, 6:00 AM IST

v-6.jpg

      ಹೆಸರು ಆಧುನಿಕ ಮತ್ತು ಪ್ರಚೀನ ಕಾಲದ ಸಾಮಾಜಿಕ, ಧಾರ್ಮಿಕ, ಆರ್ಥಿಕ ಪ್ರಾಮುಖ್ಯದ ಸಂಕೇತ. ಕೋಕೋ ಗಿಡ ಹಾಗೂ ಅದರ ಬೀಜಗಳನ್ನು ಸಂಸ್ಕರಣೆಯ ಮುನ್ನ ಅಮೆರಿಕನ್‌ ಇಂಗ್ಲಿಷ್‌ನಲ್ಲಿ ಕಕಾವೋ ಅನ್ನಲಾಗುತ್ತದೆ. ಹುರಿದ ಮತ್ತು ಸಂಸ್ಕರಿಸಿದ ಬಳಿಕ ಇದು ಕೋಕೋ ಎಂದಾಗುತ್ತದೆ. ಹುರಿದ ಕೋಕೋ ಬೀಜ ಬಳಸಿ ಇತರ ವೈವಿಧ್ಯಗಳನ್ನು ಬೆರೆಸಿ ಬಗೆಬಗೆಯ ಚಾಕ್ಲೇಟ್‌ ತಯಾರಿಸಲಾಗುತ್ತದೆ. ಇದನ್ನು ಪೂರ್ಣ ಆಹಾರ ಎಂದೇ ವರ್ಣಿಸಲಾಗುತ್ತಿದೆ. ಆಧುನಿಕ ಕಾಲಘಟ್ಟದಲ್ಲಿ ಚಾಕ್ಲೇಟ್‌ನ ವಿವಿಧ ಪರಿಣಾಮಗಳ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇವೆ. 

ಕ್ಯಾಂಪ್ಕೋ ಸಾಧನೆ
ಚಾಕ್ಲೇಟ್‌ನ ಇತಿಹಾಸದಲ್ಲಿ ಕರ್ನಾಟಕ ಕರಾವಳಿ ಮೂಲದ ಕ್ಯಾಂಪ್ಕೋ ಸಂಸ್ಥೆಯದ್ದು ಸವಿಸವಿಯಾದ ಪುಟಗಳು. ಅಡಿಕೆ ಮತ್ತು ಕೋಕೋ ಬೆಳೆಗಾರರ ಹಿತರಕ್ಷಣೆಗೆ ಸ್ಥಾಪನೆಯಾದ ಕ್ಯಾಂಪ್ಕೋ ಸಂಸ್ಥೆ ದೇಶದ ಸಹಕಾರಿ ರಂಗದಲ್ಲಿ ಆದರ್ಶಯುತವಾದ ಹೆಸರು. ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕ್ಯಾಂಪ್ಕೋ ಚಾಕ್ಲೇಟ್‌ ತಯಾರಿ ಕ್ಷೇತ್ರವನ್ನು ಪ್ರವೇಶಿಸಿ, ಅಪೂರ್ವ ಸಾಧನೆಯನ್ನು ದಾಖಲಿಸಿದೆ.

ಪುತ್ತೂರಿನಲ್ಲಿ ಕ್ಯಾಂಪ್ಕೋ ಚಾಕ್ಲೇಟ್‌ ತಯಾರಿಕಾ ಫ್ಯಾಕ್ಟರಿಯನ್ನು 1986ರಲ್ಲಿ ಸ್ಥಾಪಿಸಿತು. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿತು. ಮುಂದೆ ನೆಸ್ಲೆ (ಇಂಡಿಯಾ) ಜತೆ ತಾಂತ್ರಿಕ ಸಹಯೋಗವನ್ನು ಹೊಂದಿತು. ಕೋಕೋ ಮಾಸ್‌, ಕೋಕೋ ಬಟರ್‌, ಕೋಕೋ ಪೌಡರ್‌, ಚಾಕ್ಲೇಟ್‌ ಡ್ರಿಂಕ್ಸ್‌, ಚಾಕ್ಲೇಟ್‌ಗಳಿಂದ ಕ್ಯಾಂಪ್ಕೋ ಯಶಸ್ಸು ಸಾಧಿಸಿದೆ.

ಇಂದು ಜಗತ್ತಿನ ಸಿಹಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಚಾಕ್ಲೇಟ್‌ ಉತ್ಪನ್ನಗಳು ಹೊಂದಿವೆ. ಚಾಕ್ಲೇಟ್‌ಗಳ ವೈವಿಧ್ಯಗಳಂತೂ ಅನನ್ಯ. ಹೊಸ ಹೊಸ ರುಚಿಯ (ಫ್ಲೇವರ್‌) ಚಾಕ್ಲೇಟ್‌ಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಚಾಕ್ಲೇಟ್‌ ಅಂದರೆ ಕೇವಲ ಸಿಹಿಯಲ್ಲ; ಅದು ಮಧುರ ಬಾಂಧವ್ಯ!

ದೇವರ ಪಾನೀಯ
ಚಾಕ್ಲೇಟ್‌ ಸ್ವಾದವು ದ್ರವ ಮತ್ತು ಘನ ಸ್ವರೂಪದಲ್ಲಿ ದೊರೆಯುತ್ತಾ, ಮನುಕುಲಕ್ಕೆ ಸಿಹಿ ಉಣ ಬಡಿಸುತ್ತಿದೆ. ಚಾಕ್ಲೇಟ್‌ ಸೇವನೆಯ ಅನೇಕ ಧನಾತ್ಮಕ ಕಾರಣಗಳಿಂದ ಅದನ್ನು ಇತಿಹಾಸ ಕಾಲದಲ್ಲಿ “ದೇವರ ಪಾನೀಯ’ ಎಂದು ಹೆಸರಿಸಿದ್ದರು! ಕೋಕೋ ಗಿಡದ ವೈಜ್ಞಾನಿಕ ಹೆಸರು: ಥಿಯೋಬ್ರೋಮಾ ಕಕಾವೊ. ಗ್ರೀಕ್‌ ಭಾಷೆಯಲ್ಲಿ ಥಿಯೋ ಅಂದರೆ ದೇವರು; ಬ್ರೋಮಾ ಅಂದರೆ ಪಾನೀಯ!

ಚಾಕ್ಲೇಟ್‌ ಎಂಬ ಉಚ್ಚಾರವೇ ಸಾಕು: ಆ ಪರಿಸರವೆಲ್ಲ ಸಿಹಿಯಾಗಿ ಪರಿವರ್ತನೆಯಾಗುತ್ತದೆ. ಇದು ಚಾಕ್ಲೇಟ್‌ನ ಮಹಿಮೆ. ಆಬಾಲವೃದ್ಧರಾಗಿ ಚಾಕ್ಲೇಟ್‌ ಸವಿಯುವವರೇ ಎಲ್ಲ; ಚಾಕ್ಲೇಟ್‌ನ ಸವಿಯ ರೋಮಾಂಚನವನ್ನು ಸವಿದವನೇ ಬಲ್ಲ! ಜಗತ್ತಿನಾದ್ಯಂತ ಪ್ರತೀ ವರ್ಷ ಜುಲೈ 7ನ್ನು ಚಾಕ್ಲೇಟ್‌ ದಿನವಾಗಿ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಚಾಕ್ಲೇಟ್‌ ದಿನ ಎಂದು ಕೂಡಾ ಉಲ್ಲೇಖೀಸಲಾಗುತ್ತದೆ. 2009ರಿಂದ ಈ ಆಚರಣೆಯು ವಿಶ್ವದಾದ್ಯಂತ ನಡೆಯುತ್ತಿದೆ. ಹಾಗೆ ನೋಡಿದರೆ, ಜಗತ್ತಿನಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗುವ ಸಿಹಿ ತಿಂಡಿ ಅಂದರೆ ಅದು ಚಾಕ್ಲೇಟ್‌. ಬಹುತೇಕ ಎಲ್ಲಾ ಆಚರಣೆಗಳಲ್ಲೂ ಚಾಕ್ಲೇಟ್‌ಗೆ ಮಹತ್ವದ ಸ್ಥಾನವಿದೆ.

ಸ್ನೇಹ ಸಂಬಂಧಗಳನ್ನು ಬೆಸೆಯುವಲ್ಲಿ ಕೂಡಾ ಚಾಕ್ಲೇಟ್‌ಗೆ ಅಗ್ರಸ್ಥಾನವಿದೆ. ಹೃದಯ ಹೃದಯಗಳನ್ನು ಬೆಸೆಯುವ ಪ್ರೇಮಾನುಬಂಧಗಳಲ್ಲಿ ಕೂಡಾ ಚಾಕ್ಲೇಟ್‌ನ ವಿನಿಮಯ ನಿರ್ಣಯಕ ಪಾತ್ರವನ್ನು ಹೊಂದಿರುತ್ತದೆ ಎಂಬ ಮಾತನ್ನು ಪ್ರಣಯಿಗಳು ತತ್‌ಕ್ಷಣಕ್ಕೇ ಒಪ್ಪಿಕೊಂಡಾರು!
ಜಗತ್ತಿನಾದ್ಯಂತ ವೈಟ್‌ ಚಾಕ್ಲೇಟ್‌ ಡೇ ಮತ್ತು ಮಿಲ್ಕ್ ಚಾಕ್ಲೇಟ್‌ ಡೇ ಎಂಬ ಪ್ರತ್ಯೇಕ ಆಚರಣೆಗಳಿದ್ದರೂ ಜುಲೈ 7ರ ಆಚರಣೆಯೇ ಮುಖ್ಯವಾಗಿರುತ್ತದೆ.

ಮನೋಹರ ಪ್ರಸಾದ್‌
ಬೇಬಿ ವನ್ಯ, ಮಂಗಳೂರು
ಸಹಕಾರ: ಮೊನಾರ್ಕ್‌ ಸ್ಟುಡಿಯೋ   ಚಿತ್ರ: ಸತೀಶ್‌ ಇರಾ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.