ಗಣೇಶ ಚತುರ್ಥಿ: ವಿಶೇಷ ರೈಲು
Team Udayavani, Jul 19, 2018, 2:48 PM IST
ಮಂಗಳೂರು/ಉಡುಪಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೇ ಮುಂಬಯಿ ಸೆಂಟ್ರಲ್/ ಬಾಂದ್ರಾ/ ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲು ಓಡಿಸಲಿದೆ. ರೈಲು ಸಂಖ್ಯೆ 09001 ಮುಂಬಯಿ ಸೆಂಟ್ರಲ್-ಮಂಗಳೂರು ಜಂಕ್ಷನ್ ವಿಶೇಷ ರೈಲು ಸೆ. 12 ಮತ್ತು 19ರಂದು ಮುಂಬಯಿ ಸೆಂಟ್ರಲ್ನಿಂದ ರಾತ್ರಿ 11.50ಕ್ಕೆ ಹೊರಟು ಮರುದಿನ ರಾತ್ರಿ 7.30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ಸಂಖ್ಯೆ 09002 ಮಂಗಳೂರು ಜಂಕ್ಷನ್-ಮುಂಬಯಿ ಸೆಂಟ್ರಲ್ ವಿಶೇಷ ರೈಲು ಸೆ. 13 ಮತ್ತು 20ರಂದು ಮಂಗಳೂರು ಜಂಕ್ಷನ್ನಿಂದ ರಾತ್ರಿ 11.10ಕ್ಕೆ ಹೊರಟು ಮರುದಿನ ರಾತ್ರಿ 7 ಗಂಟೆಗೆ ಮುಂಬಯಿ ಜಂಕ್ಷನ್ ತಲುಪಲಿದೆ. ರೈಲು ಸಂಖ್ಯೆ 09009 ಬಾಂದ್ರಾ- ಮಂಗಳೂರು ಜಂಕ್ಷನ್ ವಿಶೇಷ ರೈಲು ಸೆ. 11 ಮತ್ತು 18ರಂದು ಬಾಂದ್ರಾದಿಂದ ರಾತ್ರಿ 11.55ಕ್ಕೆ ಹೊರಟು ಮರುದಿನ ರಾತ್ರಿ 7.30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ಸಂಖ್ಯೆ 09010 ಮಂಗಳೂರು ಜಂಕ್ಷನ್-ಬಾಂದ್ರಾ ವಿಶೇಷ ರೈಲು ಸೆ. 12 ಮತ್ತು 19ರಂದು ರಾತ್ರಿ 11.10ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಟು ಮರುದಿನ ರಾತ್ರಿ 6.45ಕ್ಕೆ ಬಾಂದ್ರಾ ತಲುಪಲಿದೆ.
ರೈಲು ಸಂಖ್ಯೆ 09011 ಬಾಂದ್ರಾ- ಮಂಗಳೂರು ಜಂಕ್ಷನ್ ಹವಾನಿಯಂತ್ರಿತ ವಿಶೇಷ ರೈಲು ಸೆ. 9, 16 ಮತ್ತು 23ರಂದು ರಾತ್ರಿ 11.55ಕ್ಕೆ ಬಾಂದ್ರಾದಿಂದ ಹೊರಟು ಮರುದಿನ ರಾತ್ರಿ 7.30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ರೈಲು ಸಂಖ್ಯೆ 09012 ಮಂಗಳೂರು ಜಂಕ್ಷನ್-ಬಾಂದ್ರಾ ಹವಾ ನಿಯಂತ್ರಿತ ವಿಶೇಷ ರೈಲು ಸೆ. 10, 17 ಮತ್ತು 24ರಂದು ಮಂಗಳೂರು ಜಂಕ್ಷನ್ನಿಂದ ರಾತ್ರಿ 11.10ಕ್ಕೆ ಹೊರಟು ಮರುದಿನ ರಾತ್ರಿ 6.45ಕ್ಕೆ ಬಾಂದ್ರಾ ತಲುಪಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ