ಸಂಚಾರಿ ನಿಯಮ ಪಾಲನೆಗೆ ಯಮ ವೇಷಧಾರಿಯ ಜಾಗೃತಿ
Team Udayavani, Jul 22, 2018, 11:41 AM IST
ಮಹಾನಗರ: ಕೆಂಪು ದೀಪ ಉರಿದಾಗ ರಸ್ತೆ ದಾಟಬೇಡಿ..ಸಂಚಾರಿ ಜಾಗೃತೆಯ ಕುರಿತು ಅಲ್ಲಲ್ಲಿ ಅಳವಡಿಸಿರುವ ಬೋರ್ಡ್ಗಳನ್ನು ಸರಿಯಾಗಿ ಗಮನಿಸಿ ಚಲಿಸಿ..ಒಟ್ಟಾರೆ ನಿಯಮ ಪಾಲನೆ ಮಾಡಿ..ಇಲ್ಲವಾದಲ್ಲಿ ಯಮ ಕಾಯುತ್ತಲೇ ಇರುತ್ತಾನೆ..ಹೀಗೊಂದು ಸಂದೇಶ ಹೊತ್ತ ವಿಶಿಷ್ಟ ಕಾರ್ಯಕ್ರಮವನ್ನು ನಗರದ ಪಶ್ಚಿಮ ಸಂಚಾರಿ ವಿಭಾಗದ ಪೊಲೀಸರು ಮಾಡುತ್ತಿದ್ದಾರೆ.
ಸಂಚಾರಿ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಲು ರಸ್ತೆಯಲ್ಲೇ ಓಡಾಡಿದ ಯಮ ವೇಷಧಾರಿ ಹೆಲ್ಮೆಟ್ ಹಾಕದವರು, ತ್ರಿಬಲ್ ರೈಡಿಂಗ್ ಮಾಡಿದವರು, ರೆಡ್ ಸಿಗ್ನಲ್ ಆರುವ ಮೊದಲೇ ವಾಹನ ಚಲಾಯಿಸಿದವರಿಗೆ ನಿಯಮ ಪಾಲನೆಯ ಎಚ್ಚರಿಕೆ ನೀಡಿ ಗಮನ ಸೆಳೆದರು. ಯಮನಂತೆಯೇ ಗಧೆ ಹಿಡಿದು, ವೇಷ ಧರಿಸಿಕೊಂಡ ಈ ವ್ಯಕ್ತಿಯ ಚಲನವಲನ ನಗರದಲ್ಲಿ ಕುತೂಹಲಕ್ಕೆ ಕಾರಣವಾಯಿತು.
ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯು ಜುಲೈ ಮಾಸವನ್ನು ಸಂಚಾರ ನಿಯಮ ತಿಳಿವಳಿಕೆ ಮಾಸ ಎಂಬುದಾಗಿ ಆಚರಿಸುತ್ತಿದೆ. ಈಗಾಗಲೇ ಸಂಚಾರಿ ನಿಯಮ ಪಾಲನೆ ಸಂಬಂಧ ಶಾಲಾ ಕಾಲೇಜುಗಳಲ್ಲಿ ಮಾಹಿತಿ, ಬೀದಿನಾಟಕ ಆಯೋಜಿಸಲಾಗಿದೆ. ಅದರ ಭಾಗವಾಗಿ ಯಮ ವೇಷಧಾರಿಯ ಮುಖಾಂತರ ಅರಿವು ಮೂಡಿಸುವ ಕೆಲಸವನ್ನು ಶನಿವಾರ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ
Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ