ಪೈಲಟ್ಗಳಿಗೆ ಅನಾರೋಗ್ಯ: ದುಬಾೖ ವಿಮಾನ 15 ತಾಸು ವಿಳಂಬ!
Team Udayavani, Aug 2, 2018, 10:47 AM IST
ಮಂಗಳೂರು: ದುಬಾೖಗೆ ತೆರಳಬೇಕಿದ್ದ ಸ್ಪೆ „ಸ್ ಜೆಟ್ ವಿಮಾನ ಮಂಗಳೂರು ವಿಮಾನ ನಿಲ್ದಾಣದಿಂದ ಬರೋಬ್ಬರಿ 15 ತಾಸು ವಿಳಂಬವಾಗಿ ಪ್ರಯಾಣ ಆರಂಭಿಸಿದೆ.
ಇದಕ್ಕೆ ಕಾರಣವಾಗಿದ್ದು ತಾಂತ್ರಿಕ ದೋಷವಲ್ಲ, ಬದಲಿಗೆ ಇಬ್ಬರೂ ಪೈಲಟ್ಗಳ ಅನಾರೋಗ್ಯ. 180 ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ಬೋಯಿಂಗ್ ವಿಮಾನ (ಎಸ್ಜಿ 59) ಮಂಗಳವಾರ ರಾತ್ರಿ 12.45ಕ್ಕೆ ಮಂಗಳೂರಿಂದ ನಿರ್ಗಮಿಸಬೇಕಿತ್ತು. ಬೋರ್ಡಿಂಗ್ಗೆ ಸಿದ್ಧತೆ ನಡೆಸುತ್ತಿದ್ದಾಗ ಪೈಲಟ್ಗೆ ಮಲೇರಿಯಾ ಜ್ವರ ಪತ್ತೆಯಾಗಿದ್ದು, ಹಾರಾಟರದ್ದುಗೊಳಿಸಿ ರಾತ್ರಿ 2 ಗಂಟೆಗೆ ಪ್ರಯಾಣಿಕರನ್ನು ಹೊಟೇಲ್ಗೆ ಕರೆತರಲಾಗಿತ್ತು. ಬಳಿಕ ಬುಧವಾರ ಬೆಳಗ್ಗೆ 7.30ಕ್ಕೆ ಮರು ಪ್ರಯಾಣಕ್ಕೆ ವ್ಯವಸ್ಥೆಗೊಳಿಸಲಾಗಿತ್ತು. ವಿಚಿತ್ರ ಅಂದರೆ, ಮಾರನೇ ದಿನ ಬೋರ್ಡಿಂಗ್ ವೇಳೆ ಬಂದಿದ್ದ ಮುಖ್ಯ ಪೈಲಟ್ಗೂ ಅನಾರೋಗ್ಯವಾಗಿದೆ. ಈ ಮಧ್ಯೆ ಕೆಲ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸುಮಾರು 20 ಮಂದಿ ಟಿಕೆಟ್ ರದ್ದುಪಡಿಸಿ ಬೇರೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಕೊನೆಗೆ ಬುಧವಾರ ಸಂಜೆ ವಿಮಾನ ದುಬಾೖಗೆ ತೆರಳಿದೆ.
ಇಬ್ಬರು ಪೈಲಟ್ಗಳಿಗೂ ಅನಾರೋಗ್ಯ ಹೇಗೆ?
ಸಾಮಾನ್ಯವಾಗಿ ಬೋರ್ಡಿಂಗ್ಗೆ
1 ತಾಸು ಮೊದಲು ಪೈಲಟ್ಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಅನಾರೋಗ್ಯ ಕಂಡು ಬಂದರೆ ವಿಮಾನ ಚಲಾಯಿಸಲು ಅನುಮತಿ ನೀಡಲಾಗುವುದಿಲ್ಲ. ಮದ್ಯಪಾನ ಸಂಶಯ ಇದ್ದರೂ ಅನುಮತಿ ನೀಡಲಾಗುವುದಿಲ್ಲ. ಇನ್ನು ಪೈಲಟ್ಗಳು ತಾವಾಗಿಯೇ ಅನಾರೋಗ್ಯ ಇರುವುದಾಗಿ ಹೇಳಿ ಹಿಂದೆ ಸರಿದರೇ ಅಥವಾ ತಪಾಸಣೆ ವೇಳೆ ಫಿಟ್ ಇಲ್ಲ ಎಂದು ವೈದ್ಯಕೀಯ ವರದಿ ಹೇಳಿತೇ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ನಾವೆಲ್ಲ ಮಂಗಳವಾರ ರಾತ್ರಿ ದುಬಾೖ ವಿಮಾನದಲ್ಲಿ ತೆರಳಬೇಕಿತ್ತು. ಆದರೆ ಬೋರ್ಡಿಂಗ್ ಆಗಬೇಕೆನ್ನುವಷ್ಟರಲ್ಲಿ ಪೈಲಟ್ ಅನಾರೋಗ್ಯದಿಂದ ಮರುದಿನ ಪ್ರಯಾಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಮತ್ತೆ ಬಂದ ಪೈಲಟ್ಗೂ ಫಿಟ್ನೆಸ್ ಕ್ಲಿಯರ್ ಆಗಿಲ್ಲ ಎಂದು ಮತ್ತೆ ಹೊಟೇಲ್ಗೆ ಕರೆತಂದರು. ಮಹಿಳೆಯೊಬ್ಬರಿಗೆ ಬುಧವಾರ ಬೆಳಗ್ಗೆ 10 ಗಂಟೆಗೆ ದುಬಾೖನಲ್ಲಿ ತುರ್ತಾಗಿ ವೈದ್ಯರ ಭೇಟಿ ಮಾಡಬೇಕಿತ್ತು. ಹಲವರು ನಿಗದಿತ ಸಮಯಕ್ಕೆ ತಲುಪಲಾಗದ ಆತಂಕದಲ್ಲಿದ್ದರು.
– ಭಟ್ಕಳ ಮೂಲದ ಓರ್ವ ಪ್ರಯಾಣಿಕ
ಮಂಗಳೂರು-ದುಬಾೖ ವಿಮಾನ ಹಾರಾಟ ರದ್ದುಗೊಂಡು ಪ್ರಯಾಣಿಕರಿಗೆ ತೊಂದರೆಯಾಗಿರುವುದು ನಿಜ. ಬಳಿಕ ಎಲ್ಲ ರೀತಿಯ ಪರ್ಯಾಯ ವ್ಯವಸ್ಥೆ ಮಾಡಿ ಬುಧವಾರ ಸಂಜೆ 5 ಗಂಟೆಗೆ ದುಬಾೖ ವಿಮಾನ ನಿರ್ಗಮಿಸಿದೆ. ಪೈಲಟ್ಗಳ ಅನಾರೋಗ್ಯ ಅಚ್ಚರಿ ಮೂಡಿಸಿದೆ. ಈ ವಿಮಾನ ಟರ್ಕಿಯ ಕೊರಿಯಂಡನ್ ಏರ್ಲೈನ್ಸ್ಗೆ ಸೇರಿದ್ದು, ಅದರ ಪೈಲಟ್ ಹಾಗೂ ಸಿಬಂದಿಯನ್ನು ಅದೇ ಕಂಪನಿ ನಿಯೋಜಿಸುತ್ತದೆ. ಇದಕ್ಕಾಗಿ ಬದಲಿ ಪೈಲಟ್ ಬರುವವರೆಗೆ ಕಾಯಬೇಕಾಯ್ತು.
– ಆನಂದ್, ಸ್ಪೈಸ್ ಜೆಟ್ನ ಮಾಧ್ಯಮ ವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
ಮತದಾರರ ಚೀಟಿಯಲ್ಲಿ ಕ್ಯುಆರ್ ಕೋಡ್! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ
Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ