ಹದಿನೈದೇ ದಿನದಲ್ಲಿ ಕನ್ನಡ ಕಲಿತ ಜಪಾನಿಗ !
Team Udayavani, Aug 5, 2018, 9:23 AM IST
ಮಂಗಳೂರು: ಕನ್ನಡ ನಾಡಿನಲ್ಲಿದ್ದೂ ಆಂಗ್ಲ ಭಾಷಾ ವ್ಯಾಮೋಹಿ ಗಳಾಗಿರುವವರೇ ಹಲವರು. ಅಂಥದ್ದರಲ್ಲಿ ಜಪಾನ್ ಪ್ರಜೆಯೊಬ್ಬ ರೇಷ್ಮೆ ಬೆಳೆ ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಬಂದು ಹದಿನೈದೇ ದಿನದಲ್ಲಿ ಕನ್ನಡ ಕಲಿತಿದ್ದಾರೆ! ಸ್ಪಷ್ಟ ಕನ್ನಡ ಕಲಿತು ರಾಮನಗರದ ರೇಷ್ಮೆ ಬೆಳೆಗಾರರೊಂದಿಗೆ ವ್ಯವಹರಿಸುವ ಇಚ್ಛೆ ಈ ಯುವಕನದ್ದು. ಈತನಿಗೆ ಕನ್ನಡ ಕಲಿಸಿದವರು
ಮಂಗಳೂರಿನ ಯುವಕ, ಪ್ರಸ್ತುತ ಹೊಸದಿಲ್ಲಿಯ ಡೆಲ್ಲಿ ಕನ್ನಡ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿರುವ ಅರವಿಂದ ಬಿಜೈ.
22 ವರ್ಷದ ಕಝುಕಿ ಜಪಾನ್ನ ಚಿಬಾ ಮೂಲದವರು. ಜಪಾನ್ನ ಝೈಕಾ ಕಂಪೆನಿಯ ಮುಖಾಂತರ ರೇಷ್ಮೆ ಕುರಿತು ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದಾರೆ.ಹೊಸದಿಲ್ಲಿಗೆ ಬಂದ ಕಝುಕಿ, ಅಲ್ಲಿನ ಝುಬಾನ್ ಭಾಷಾ ಕಲಿಕಾ ಸಂಸ್ಥೆಯಲ್ಲಿ ಕನ್ನಡ ಕಲಿಕೆಯ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅದರಂತೆ ಸಂಸ್ಥೆಯವರು ಅರವಿಂದ ಅವರನ್ನು ಸಂಪರ್ಕಿಸಿ ಕನ್ನಡ ಪಾಠಕ್ಕೆ ಮನವಿ ಮಾಡಿದ್ದರು. ದಿನಕ್ಕೆ 4 ಗಂಟೆಯಂತೆ 15 ದಿನಗಳ ಕಾಲ ಅರವಿಂದ ಕನ್ನಡ ಹೇಳಿಕೊಟ್ಟಿದ್ದಾರೆ. ಕಝಕಿ ಕಲಿಕಾಸಕ್ತಿ ಎಷ್ಟಿತ್ತೆಂದರೆ ಮೊದಲ ದಿನವೇ ಕನ್ನಡ ವರ್ಣಮಾಲೆಯ “ಅ’ ದಿಂದ “ಳ’ ವರೆಗೆ ಬರೆದು ತೋರಿಸಿದ್ದರಂತೆ!
ಕನ್ನಡದಲ್ಲಿ ಟೈಪಿಂಗ್
ಕಝುಕಿ ಸದ್ಯ ಕನ್ನಡ ಕೀಲಿಮಣೆಯನ್ನೂ ಕಲಿತಿದ್ದು, ಮಾರ್ಗದರ್ಶಕ ಅರವಿಂದ್ ಜತೆ ಮೊಬೈಲ್ ಮೂಲಕ ಕನ್ನಡದಲ್ಲೇ ಸಂದೇಶ ಸಂವಹನ ನಡೆಸುತ್ತಾರೆ. ಹೊಸದಿಲ್ಲಿಯ ಝುಬಾನ್ ಭಾಷಾ ಕಲಿಕಾ ಸಂಸ್ಥೆಯಲ್ಲಿ ಕನ್ನಡ ಕಲಿಸಿ ಎಂದು ಕೇಳಿದ ಮೊದಲ ವಿದೇಶಿಗ ಬಹುಶಃ ಕಝುಕಿ ಎಂದು ಸಂಸ್ಥೆಯವರೇ ಹೇಳುತ್ತಾರೆ. ಈ ಸಂಸ್ಥೆಯಲ್ಲಿ ಹೊರ ರಾಜ್ಯ ಅಥವಾ ವಿದೇಶಗಳಿಂದ ಆಗಮಿಸಿದವರಿಗೆ ಭಾಷೆ ಕಲಿಸಲಾಗುತ್ತದೆ. ಉರ್ದು, ಹಿಂದಿ, ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳನ್ನು ಇಲ್ಲಿ ಕಲಿಸಲಾಗುತ್ತದೆ. ಕನ್ನಡಕ್ಕೆ ಸಂಪನ್ಮೂಲ ವ್ಯಕ್ತಿಗಳಿಲ್ಲದ ಕಾರಣ ಅರವಿಂದ ಅವರ ಮೂಲಕ ಕಲಿಸಲಾಗಿದೆ.
ವಚನ ತಪ್ಪಿಲ್ಲದೆ ಓದುತ್ತಾರೆ
ಬಸವಣ್ಣನವರ “ಕಳಬೇಡ, ಕೊಲಬೇಡ… ಹುಸಿಯ ನುಡಿಯಲು ಬೇಡ..’ ವಚನವನ್ನು ಕಝುಕಿ ನಿರರ್ಗಳವಾಗಿ ಓದುತ್ತಾರೆ. ಇದನ್ನು ಅರವಿಂದ ತನ್ನಫೇಸುºಕ್ ಖಾತೆಯಲ್ಲಿ ವೀಡಿಯೋ ಸಮೇತ ಅಪ್ಲೋಡ್ ಮಾಡಿದ್ದಾರೆ. ಓದು ಮತ್ತು ಬರಹ ಶೀಘ್ರ
ಕಲಿತಿರುವ ಕಝುಕಿ ಮಾತನಾಡುವಾಗ ಸ್ವಲ್ಪ ತಡವರಿಸು ತ್ತಾರೆ. ಏನೇ ಕೇಳಿದರೂ ಯೋಚನೆ ಮಾಡಿ ಕನ್ನಡದಲ್ಲಿ ಉತ್ತರಿಸುತ್ತಾರೆ.
ಕನ್ನಡದಲ್ಲೇ ವ್ಯವಹರಿಸುವ ಇಚ್ಛೆ
ರೇಷ್ಮೆ ಕುರಿತು ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಬಂದಿದ್ದೇನೆ. ಇಲ್ಲಿನ ವ್ಯಾವಹಾರಿಕ ಭಾಷೆ ಕನ್ನಡವಾದ್ದರಿಂದ ಅದೇ ಭಾಷೆಯಲ್ಲಿ ಜನರೊಂದಿಗೆ ಬೆರೆಯುವ ಇಚ್ಛೆ ನನ್ನದು. ಮುಂದೆ ರಾಮನಗರದ ರೇಷ್ಮೆ ಬೆಳೆಗಾರರೊಂದಿಗೆ ಕನ್ನಡದಲ್ಲೇ ವ್ಯವಹರಿಸಿ ಸಮಗ್ರ ಅಧ್ಯಯನ ನಡೆಸಬೇಕೆಂಬುದೇ ಆಸೆ.
– ಕಝುಕಿ, ಕನ್ನಡ ಕಲಿತ ಜಪಾನಿಗ
*ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್ ಸಾವು
Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!
Mangaluru: ಕುಡಿಯುವ ನೀರಿನ ಕೊರತೆ, ಬೋಟ್, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ
MUST WATCH
ಹೊಸ ಸೇರ್ಪಡೆ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು